ಸಿಂಗಾಪುರ :ಪದಕ ಸಿಂಗರಿಸಿಕೊಂಡ ಬೇಲೂರು ತಂಡ
ಕನ್ನಡ ಸಂಘ ಸಿಂಗಾಪುರ: ಸಿಂಗಾರ ಬ್ಯಾಡ್ಮಿಂಟನ್-2024 ಪಂದ್ಯಾವಳಿ
Team Udayavani, Sep 21, 2024, 9:25 AM IST
ಸಿಂಗಾಪುರ : ಕನ್ನಡ ಸಂಘ ಸಿಂಗಾಪುರ ಇದರ ಆಶ್ರಯದಲ್ಲಿ ಜುರೋಂಗ್ ಈಸ್ಟ್ ಸ್ಫೋರ್ಟ್ಸ್ ಹಾಲ್ನಲ್ಲಿ ಎರಡು ದಿನದ ಸಿಂಗಾರ ಬ್ಯಾಡ್ಮಿಂಟನ್ -2024 ಪಂದ್ಯಾವಳಿಯಲ್ಲಿ ಬೇಲೂರು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕನ್ನಡ ಸಂಘದ ಅಧ್ಯಕ್ಷ ವೆಂಕಟ ರತ್ನಯ್ಯ ಪಂದ್ಯಾವಳಿಗೆ ಚಾಲನೆ ನೀಡಿದರು.
ಸಿಂಗಾಪುರದಲ್ಲಿ ನೆಲಸಿರುವ ಕರ್ನಾಟಕದ ಎಲ್ಲ ಬ್ಯಾಡ್ಮಿಂಟನ್ ಉತ್ಸಾಹಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. 7 ತಂಡಗಳನ್ನು ರೌಂಡ್ ರಾಬಿನ್ ಸುತ್ತಿಗೆ ಆಯ್ಕೆ ಮಾಡಲಾಗಿತ್ತು ಅನಂತರ ಉನ್ನತ 4 ತಂಡಗಳು ಸೆಮಿಫೈನಲ್ಸ್ಗೆ ಅರ್ಹತೆಯನ್ನು ಪಡೆದುಕೊಂಡವು.
ಸಂಜಯ್ ಶೆಟ್ಟಿ ನಾಯಕತ್ವದ ಆಲ್ವಿನ್, ಪ್ರೇಮ ಕುಮಾರ್, ರಾಜಕುಮಾರ್ಖಡೆR, ವಿಶ್ವನಾಥ್ ಮೈಸೂರು ಆಟಗಾರರನ್ನು ಒಳಗೊಂಡ ಬೇಲೂರು ತಂಡವು, ಸುವಿ ಭಟ್ ನಾಯಕತ್ವದ ಗಾಯತ್ರಿ ಜೋಯಿಸ್, ಸತೀಶ್ ರಾವ್, ಸುಪ್ರೀತ್ ಗೌಡ, ಸಮಂತ್ ಯಾದವ್ ಅವರನ್ನು ಒಳಗೊಂಡ ಬಂಡೀಪುರ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಅಶ್ವಿತ್ ಬಂಗೇರ ಅವರ ನಾಯಕತ್ವದ ಮೋಹನ ಕುಮಾರ, ನೇಹಾಲ್ ಐತಾಳ್, ರೇಣುಕಾ ಧನ್ವೆ, ವಿದ್ಯಾಧರ ಶೆಟ್ಟಿ ಅವರನ್ನು ಒಳಗೊಂಡ ಆಗುಂಬೆ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡರೆ, ಮಂಜುನಾಥ ಶಾಸ್ತ್ರೀ ಅವರ ನಾಯಕತ್ವದ ಹರ್ಷ ಯಾವಗಲ್, ನಾಗರಾಜ್ ಪಾಂಗಾಳ್, ಸುಧಾಮಣಿ, ತುಕಾರಾಂ ಧನ್ವೆ ಅವರನ್ನು ಒಳಗೊಂಡ ಪಟ್ಟದಕಲ್ ತಂಡವು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ, ಅಧ್ಯಕ್ಷ ವೆಂಕಟ ರತ್ನಯ್ಯ ಹಾಗೂ ಸಮಿತಿ ಸದಸ್ಯರು ವಿಜೇತ ಆಟಗಾರರಿಗೆ ಚಿನ್ನ, ಬೆಳ್ಳಿ, ಹಾಗೂ ಕಂಚು ಪದಕಗಳನ್ನು ನೀಡಿ ಸಮ್ಮಾನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ
Desi Swara:ರಾಯರು ಬಂದರು ಐರ್ಲೆಂಡ್ ಕಡೆಗೆ-ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Padmaavat To Billu.. ಟೈಟಲ್ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್ ಸಿನಿಮಾಗಳಿವು
Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ: ಬಂಧನವಾಗಿ ನೂರು ದಿನ ಕಳೆಯಿತು!
ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.