![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 21, 2024, 9:25 AM IST
ಸಿಂಗಾಪುರ : ಕನ್ನಡ ಸಂಘ ಸಿಂಗಾಪುರ ಇದರ ಆಶ್ರಯದಲ್ಲಿ ಜುರೋಂಗ್ ಈಸ್ಟ್ ಸ್ಫೋರ್ಟ್ಸ್ ಹಾಲ್ನಲ್ಲಿ ಎರಡು ದಿನದ ಸಿಂಗಾರ ಬ್ಯಾಡ್ಮಿಂಟನ್ -2024 ಪಂದ್ಯಾವಳಿಯಲ್ಲಿ ಬೇಲೂರು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕನ್ನಡ ಸಂಘದ ಅಧ್ಯಕ್ಷ ವೆಂಕಟ ರತ್ನಯ್ಯ ಪಂದ್ಯಾವಳಿಗೆ ಚಾಲನೆ ನೀಡಿದರು.
ಸಿಂಗಾಪುರದಲ್ಲಿ ನೆಲಸಿರುವ ಕರ್ನಾಟಕದ ಎಲ್ಲ ಬ್ಯಾಡ್ಮಿಂಟನ್ ಉತ್ಸಾಹಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. 7 ತಂಡಗಳನ್ನು ರೌಂಡ್ ರಾಬಿನ್ ಸುತ್ತಿಗೆ ಆಯ್ಕೆ ಮಾಡಲಾಗಿತ್ತು ಅನಂತರ ಉನ್ನತ 4 ತಂಡಗಳು ಸೆಮಿಫೈನಲ್ಸ್ಗೆ ಅರ್ಹತೆಯನ್ನು ಪಡೆದುಕೊಂಡವು.
ಸಂಜಯ್ ಶೆಟ್ಟಿ ನಾಯಕತ್ವದ ಆಲ್ವಿನ್, ಪ್ರೇಮ ಕುಮಾರ್, ರಾಜಕುಮಾರ್ಖಡೆR, ವಿಶ್ವನಾಥ್ ಮೈಸೂರು ಆಟಗಾರರನ್ನು ಒಳಗೊಂಡ ಬೇಲೂರು ತಂಡವು, ಸುವಿ ಭಟ್ ನಾಯಕತ್ವದ ಗಾಯತ್ರಿ ಜೋಯಿಸ್, ಸತೀಶ್ ರಾವ್, ಸುಪ್ರೀತ್ ಗೌಡ, ಸಮಂತ್ ಯಾದವ್ ಅವರನ್ನು ಒಳಗೊಂಡ ಬಂಡೀಪುರ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಅಶ್ವಿತ್ ಬಂಗೇರ ಅವರ ನಾಯಕತ್ವದ ಮೋಹನ ಕುಮಾರ, ನೇಹಾಲ್ ಐತಾಳ್, ರೇಣುಕಾ ಧನ್ವೆ, ವಿದ್ಯಾಧರ ಶೆಟ್ಟಿ ಅವರನ್ನು ಒಳಗೊಂಡ ಆಗುಂಬೆ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡರೆ, ಮಂಜುನಾಥ ಶಾಸ್ತ್ರೀ ಅವರ ನಾಯಕತ್ವದ ಹರ್ಷ ಯಾವಗಲ್, ನಾಗರಾಜ್ ಪಾಂಗಾಳ್, ಸುಧಾಮಣಿ, ತುಕಾರಾಂ ಧನ್ವೆ ಅವರನ್ನು ಒಳಗೊಂಡ ಪಟ್ಟದಕಲ್ ತಂಡವು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ, ಅಧ್ಯಕ್ಷ ವೆಂಕಟ ರತ್ನಯ್ಯ ಹಾಗೂ ಸಮಿತಿ ಸದಸ್ಯರು ವಿಜೇತ ಆಟಗಾರರಿಗೆ ಚಿನ್ನ, ಬೆಳ್ಳಿ, ಹಾಗೂ ಕಂಚು ಪದಕಗಳನ್ನು ನೀಡಿ ಸಮ್ಮಾನಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.