Desi Swara: ಶಾರ್ಜಾದಲ್ಲಿ ರಾಧಾಷ್ಟಮಿಯ ಸಡಗರ, ಪೂಜೆ, ಉಯ್ಯಾಲೆ ಸೇವೆ
ದೇವಿ ರಾಧಾ ಅಷ್ಟಮಿಗೆ ಹೊಸ ಅರ್ಥಬಂದಿತ್ತು ಎನ್ನುವುದು ನನ್ನ ಭಾವನೆ.
Team Udayavani, Sep 21, 2024, 10:31 AM IST
ರಾಧಾಷ್ಟಮಿಯನ್ನು ಯುಎಇ ದೇಶದಲ್ಲಿ ವಿದ್ಯುಕ್ತವಾಗಿ ಆಚರಿಸಲಾಗುತ್ತದೆ. ನಾನು ವಾಸವಿರುವ ನಮ್ಮ ಶಾರ್ಜಾದಲ್ಲಿ ನಡೆದ ರಾಧಾಷ್ಟಮಿಯ ಸಂಭ್ರಮವನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ರಾಧಾಷ್ಟಮಿಯಂದು, ರಾಧಾ ಕೃಷ್ಣ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಸಂಪೂರ್ಣವಾಗಿ ಹೂವುಗಳಲ್ಲಿ ಅಲಂಕರಿಸಲಾಗುತ್ತದೆ. ಹೆಚ್ಚುವರಿಯಾಗಿ, ರಾಧಾಷ್ಟಮಿಯು ರಾಧೆಯ ಪಾದಗಳ ದರ್ಶನ (ವೀಕ್ಷಣೆ) ಪಡೆಯುವ ಏಕೈಕ ದಿನವಾಗಿದೆ.
ರಾಧಾಷ್ಟಮಿಯು ಮಹಾಭಿಷೇಕದಿಂದ ಪ್ರಾರಂಭವಾಗುತ್ತದೆ. ಮನೆಗಳು ಮತ್ತು ಸತ್ಸಂಗದಲ್ಲಿ, ರಾಧಾ ದೇವಿಯ ವಿಗ್ರಹವನ್ನು ಪಂಚಾಮೃತ – ಹಾಲು, ತುಪ್ಪ, ಜೇನುತುಪ್ಪ, ಸಕ್ಕರೆ ಮತ್ತು ಮೊಸರುಗಳ ಐದು ವಿಭಿನ್ನ ಆಹಾರ ಮಿಶ್ರಣಗಳ ಸಂಯೋಜನೆಯೊಂದಿಗೆ ಅಭಿಷೇಕ ಮಾಡಲಾಗುತ್ತದೆ ಮತ್ತು ಅವಳಿಗೆ ಹೊಸ ಉಡುಪನ್ನು ಧರಿಸುತ್ತಾರೆ ಹಾಗೂ ಈ ದಿನದಂದು, ನಾವೆಲ್ಲರೂ ಸೇರಿ ಭಕ್ತಿ ಗೀತೆಗಳು, ಕೀರ್ತನೆಗಳನ್ನು ಹಾಡಿ, ರಾಧಾರಾಣಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ ಮತ್ತು ರಾಧಾರಾಣಿಗೆ, ಕೃಷ್ಣನಿಗೆ ಯಾವುದೇ ರೀತಿ ಭಕ್ತಿಭಾವಗಳನ್ನು ಸಲ್ಲಿಸುತ್ತೇವೆಯೋ ಉಯ್ಯಾ ಲೆ ಸೇವೆ, ಸಕಲ ಶೋಡಷ ಸೇವೆ ಹಾಗೂ ಮಹಾಮಂತ್ರಗಳನ್ನು ಜಪಿಸುತ್ತೇವೆಯೋ ಅದೇ ಪ್ರಕಾರವಾಗಿ ರಾಧಾರಾಣಿಯನ್ನು ಉಯ್ಯಾಲೆ ಸೇವೆಯನ್ನು ಮಾಡುವುದರ ಮೂಲಕ ಮೋಕ್ಷ ಪ್ರಾಪ್ತಿಗಾಗಿ ದೇವಿಯನ್ನು ಬೇಡಿ ಕೊಂಡು ಎಲ್ಲರೂ ಭಕ್ತಿ ಭಾವದಲ್ಲಿ ತೇಲಾಡುವ ಮೂಲಕ ದೇವಿ ರಾಧಾ ಅಷ್ಟಮಿಗೆ ಹೊಸ ಅರ್ಥಬಂದಿತ್ತು ಎನ್ನುವುದು ನನ್ನ ಭಾವನೆ.
ಭಾದ್ರಪದ ಮಾಸದ ಶುಕ್ಲ ಪಕ್ಷದ 11ನೇ ದಿನದಂದು ಆಚರಿಸಲಾಗುವ ಪರಿವರ್ತಿನಿ ಏಕಾದಶಿಯು ಹಿಂದೂ ಧರ್ಮದಲ್ಲಿ ಮಹತ್ತರವಾದ ಮನ್ನಣೆಯನ್ನು ಪಡೆದುಕೊಂಡಿದೆ. ಈ ಪವಿತ್ರ ಉಪವಾಸವು ರಾಕ್ಷಸ ರಾಜ ಬಲಿಯ ಮೇಲೆ ಭಗವಾನ್ ವಿಷ್ಣುವಿನ ವಿಜಯವನ್ನು ಸ್ಮರಿಸುವ ದಿನವಾಗಿದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸಂಕೇತಿಸುತ್ತದೆ. ಈ ಶುಭ ದಿನದಂದು ಭಕ್ತರು ಉಪವಾಸ ವ್ರತವನ್ನು ಮಾಡಿ, ಕೃಷ್ಣನ, ಧ್ಯಾನ, ಮಹಾಮಂತ್ರ ಪಠಣ ಮಾಡಿದರೆ, ಮೋಕ್ಷ ಪ್ರಾಪ್ತಿ ಎನ್ನುವ ನಂಬಿಕೆ. ಹಿಂದಿನ ತಪ್ಪುಗಳಿಂದ ವಿಮೋಚನೆ ಮತ್ತು ಅಧ್ಯಾತ್ಮಿಕ ಬೆಳವಣಿಗೆಯನ್ನು ಪಡೆದುಕೊಳ್ಳುತ್ತಾರೆ.
ಪರಿವರ್ತಿನಿ ಏಕಾದಶಿ ವ್ರತವನ್ನು ಮಾಡುವ ವ್ಯಕ್ತಿ ಜನನ ಮತ್ತು ಮರಣ ಚಕ್ರದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾನೆ. ಶಾಂತಿ, ಸಮೃದ್ಧಿ ಮತ್ತು ದೈವಿಕ ಆಶೀರ್ವಾದವನ್ನು ಹೊಂದುತ್ತಾನೆ. ಈ ಉಪವಾಸವನ್ನು ಆಚರಿಸುವ ಮೂಲಕ, ಕೃಷ್ಣನಲ್ಲಿ ದೈವಿಕದೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಕಲುಷಿತ ತುಂಬಿದ, ಮನಸ್ಸು ಶುದ್ಧವಾಗುತ್ತದೆ. ಭಗವತಿ ಶ್ರೀತುಳಸಿಯನ್ನು ಆರಾಧಿಸುವ ಮೂಲಕ ಕೃಷ್ಣನ ಕೃಪೆಗೆ ಪಾತ್ರರಾಗಿ, ಸದಾ ಎಲ್ಲರಲ್ಲೂ ನಾರಾಯಣನನ್ನು ಕಾಣುವ ಮನಸ್ಸು ನಮ್ಮದಾಗುತ್ತದೆ.
*ಮಹಾಲಕ್ಷ್ಮೀ ಸುಬ್ರಹ್ಮಣ್ಯ, ಶಾರ್ಜಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ
Desi Swara:ರಾಯರು ಬಂದರು ಐರ್ಲೆಂಡ್ ಕಡೆಗೆ-ಶ್ರೀ ಗುರುರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!
Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ: ಬಂಧನವಾಗಿ ನೂರು ದಿನ ಕಳೆಯಿತು!
ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!
Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.