BBK11: ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್
Team Udayavani, Sep 21, 2024, 8:20 PM IST
ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ನಡೆಸಿಕೊಡುವ ಬಿಗ್ ಬಾಸ್ ಕನ್ನಡ-11 (Bigg Boss Kannada-11)ರ ಹೊಸ ಪ್ರೋಮೊ ರಿವೀಲ್ ಆಗಿದೆ.
ಬಿಗ್ ಬಾಸ್ -11ರ ಆರಂಭಕ್ಕೆ ದಿನ ನಿಗದಿಯಾದ ಬಳಿಕ ಕಾರ್ಯಕ್ರಮದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಸ್ಪರ್ಧಿಗಳ ವಿಚಾರದಿಂದ ಕುತೂಹಲ ಇನ್ನೂ ಹೆಚ್ಚಾಗಿದೆ. ಯಾರೆಲ್ಲಾ ದೊಡ್ಮನೆಯೊಳಗೆ ಹೋಗುತ್ತಾರೆ ಎನ್ನುವುದರ ಬಗ್ಗೆ ಚರ್ಚೆ ಶುರುವಾಗಿದೆ.
ಇತ್ತೀಚಗೆಷ್ಟೇ ಕಿಚ್ಚ ಸುದೀಪ್ ಅವರನ್ನು ಪರಿಚಯಿಸುವ ಬಿಗ್ ಬಾಸ್ -11ರ ಪ್ರೋಮೊ ರಿಲೀಸ್ ಆಗಿತ್ತು. ಆ ಮೂಲಕ ಶೋವನ್ನು ಕಿಚ್ಚ ಅವರೇ ನಡೆಸಿಕೊಡಲಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗಗೊಳಿಸಲಾಗಿತ್ತು.
ಇದೀಗ ಹೊಸ ಪ್ರೋಮೋ ರಿಲೀಸ್ ಆಗಿದೆ. ಸ್ವರ್ಗ – ನರಕದಲ್ಲಿರುವ ಲೋಕವನ್ನು ತೋರಿಸುವ ಪ್ರೋಮೋದಲ್ಲಿ ಸಂತಸ ಪಡುವ ಜನ ಒಂದು ಕಡೆಯಾದರೆ ಇನ್ನೊಂದೆಡೆ ನರಕದಲ್ಲಿನ ಕಷ್ಟವನ್ನು ತೋರಿಸಲಾಗಿದೆ.
“ಬೆಳಕು, ಸಂತಸ, ಸುಖ, ನೆಮ್ಮದಿ ಸ್ವರ್ಗ.. ಕತ್ತಲು, ನೋವು, ಕಷ್ಟ ಹಿಂಸೆ ನರಕ.. ಸ್ವರ್ಗದಲ್ಲಿರುವವರು ನರಕದಲ್ಲಿರಬಹುದು, ನರಕದಲ್ಲಿರುವವರು ಸ್ವರ್ಗದಲ್ಲಿರಬಹುದು. ಬೆನ್ನಿಗೆ ಚೂರಿ ಹಾಕುವವರು ಅಂಥ ಅನ್ಕೊಂಡವರು ಮುಂದೆ ಹೋಗಿ ನಿಮ್ಮ ಸ್ನೇಹಿತರಾಗಿರಬಹುದು.. ಸ್ನೇಹಿತರಾಗಿರುತ್ತಾರೆ ಅಂದೋರು ಮುಂದೆ ಹೋಗಿ.. ಇದು ಬಿಗ್ ಬಾಸ್ನ ಹೊಸ ಅಧ್ಯಾಯ ಸ್ವರ್ಗ, ನರಕ ಎರಡೂ ಇದೆ. ಎರಡರಲ್ಲೂ ಕಿಚ್ಚು ಅಷ್ಟೇ ಇದೆ..” ಎಂದು ಕಿಚ್ಚ ಹೇಳುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
View this post on Instagram
ಇದೇ ಸೆ.29ರಂದು ಸಂಜೆ 6 ಗಂಟೆಗೆ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಪ್ರತಿದಿನ ರಾತ್ರಿ 9:30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಸ್ಪರ್ಧಿಗಳು ಯಾರೆಲ್ಲಾ.. ಸಂಭಾವ್ಯ ಪಟ್ಟಿ:
ಹುಲಿ ಕಾರ್ತಿಕ್, ಗೌರವ್ ಶೆಟ್ಟಿ, ಮಾನಸ ಸಂತು, ನಟಿ ಪ್ರೇಮಾ, ಹರೀಶ್ ನಾಗರಾಜ್, ಐಶ್ವರ್ಯಾ ರಂಗರಾಜನ್, ಅಮೂಲ್ಯ ಭಾರದ್ವಾಜ್, ಭವ್ಯಾ ಗೌಡ, ದೀಪಕ್ ಗೌಡ, ಅಕ್ಷಯ್ ನಾಯಕ್, ಲೇಖಿ ಗೋಸ್ವಾಮಿ, ರೇಷ್ಮಾ, ಚಂದ್ರಪ್ರಭ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ನಟ ತ್ರಿವಿಕ್ರಮ್, ನಟಿ ಸುಕೃತಾ ನಾಗ್, ನಟಿ ಗೌತಮಿ ಜಾಧವ್, ಶರತ್ ಕುಮಾರ್, ಕೆಜಿಎಫ್ ಬಾಬು,ಅನುಷಾ ರೈ,ಕರಣ್ ಕೆಆರ್,ಪವಿ ಪಡುಕೋಣೆ,ಅವಿನಾಶ್ (ಜೂನಿಯರ್ ದರ್ಶನ್), ಚೈತ್ರಾ ಕುಂದಾಪುರ: ಹೆಸರು ಸಹ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ನಲ್ಲಿ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಚೈತ್ರಾ ಕುಂದಾಪುರ To ಕೆಜಿಎಫ್ ಬಾಬು.. ಬಿಗ್ ಬಾಸ್ ಸ್ಪರ್ಧಿಗಳ ಹೊಸ ಪಟ್ಟಿ ವೈರಲ್
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
Bigg Boss18: ಸ್ಪರ್ಧಿಗಳ ಭವಿಷ್ಯ ನೋಡಲಿದ್ದಾರೆ ʼಬಿಗ್ಬಾಸ್ʼ; ಕುತೂಹಲ ಹುಟ್ಟಿಸಿದ ಪ್ರೋಮೊ
BBK11: ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗೋರು ಇವರೇ? ಇಲ್ಲಿದೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ
BBK-11: ಕೊನೆಗೂ ಬಿಗ್ ಬಾಸ್ ಆ್ಯಂಕರ್ ಮುಖ ರಿವೀಲ್… ಶೋ ಆರಂಭಕ್ಕೆ ಡೇಟ್ ಫಿಕ್ಸ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Mangaluru: ಪ್ಯಾನಿಕ್ ಬಟನ್, ಜಿಪಿಎಸ್ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ
BJP; ವಿಪಕ್ಷ ನಾಯಕ ಆರ್. ಅಶೋಕ್ ನಡೆಗೆ ಕಾಂಗ್ರೆಸ್ ಖಂಡನೆ
Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!
Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ
Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.