Karki Movie Review: ಪ್ರೀತಿ ಅರಮನೆಯಲ್ಲಿ ಜಾತಿ ಸಂಘರ್ಷ
Team Udayavani, Sep 22, 2024, 3:00 PM IST
ಜಾತಿ ಸಂಘರ್ಷ ಕುರಿತಾಗಿ ಅನೇಕ ಸಿನಿಮಾಗಳು ಬಂದಿವೆ. ಅದರಲ್ಲೂ ಮುಗ್ಧ ಪ್ರೀತಿಯ ನಡುವೆ ಬರುವ ಜಾತಿ, ಮೇಲ್ವರ್ಗ, ಕೆಳವರ್ಗ ಅಂಶಗಳು ಮುಂದೆ ದೊಡ್ಡ ಕ್ರಾಂತಿಗೆ ನಾಂದಿಯಾಡುತ್ತವೆ. ಈ ವಾರ ತೆರೆಕಂಡಿರುವ “ಕರ್ಕಿ’ ಸಿನಿಮಾ ಕೂಡಾ ಇಂತಹುದೇ ಕಥಾಹಂದರ ಹೊಂದಿರುವ ಸಿನಿಮಾ.
ಕಾನೂನು ಪದವಿ ಪಡೆದು ದೊಡ್ಡ ವಕೀಲನಾಗಬೇಕೆಂಬ ಕನಸು ಕಾಣುವ ಕೆಳವರ್ಗದ ಹುಡುಗನಿಗೆ ಮೇಲ್ವರ್ಗದ ಹುಡುಗಿ ಜೊತೆ ಪ್ರೇಮಾಂಕುರ. ಇದು ಒಂದು ವರ್ಗದ ಕಣ್ಣು ಕೆಂಪಾಗಿಸುತ್ತದೆ. ಅಲ್ಲಿಯವರೆಗೆ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದ್ದ, ಸಿನಿಮಾದ ಕಥೆಗೆ ಹೊಸದೊಂದು ಆಯಾಮ ಸಿಗುತ್ತದೆ. ನೋಡ ನೋಡುತ್ತಿದ್ದಂತೆ, ಕೆಳ ವರ್ಗದ ಹುಡುಗನೊಬ್ಬನ ಆಕ್ರಂದನ ತೆರೆಮೇಲೆ ಅನಾವರಣವಾಗುತ್ತ ಹೋಗುತ್ತದೆ. ತನ್ನ ಮುಂದಿರುವ ಅನೇಕ ಅಡ್ಡಿ ಆತಂಕಗಳನ್ನು ಬದಿಗಿಟ್ಟ ಮುತ್ತು ಕಾನೂನು ಪದವಿಧರನಾಗುತ್ತಾನಾ? ಈ ಹೋರಾಟ ಹೇಗಿರುತ್ತದೆ ಎಂಬುದೇ “ಕರ್ಕಿ’ ಸಿನಿಮಾದ ಕಥಾಹಂದರ.
ಇಷ್ಟು ಹೇಳಿದ ಸಿನಿಮಾದ ಕಥೆ ಸಾಗುವ ರೀತಿಯನ್ನು ನೀವು ಗ್ರಹಿಸಬಹುದು. ಮುಖ್ಯವಾಗಿ ಇಲ್ಲಿ ಜಾತಿ ವ್ಯವಸ್ಥೆ, ಅದು ಪ್ರೀತಿಗೆ ಅಡ್ಡವಾಗುವ ರೀತಿ, ಹೋರಾಟದ ಹಾದಿ, ಮಾನವೀಯ ಅಂಶಗಳ ಸುತ್ತ “ಕರ್ಕಿ’ ಸಾಗುತ್ತದೆ. ನಿರ್ದೇಶಕ ಪವಿತ್ರನ್ ಒಂದಷ್ಟು ಅಂಶಗಳನ್ನು ಮನಮುಟ್ಟುವಂತೆ ಹೇಳಿದ್ದಾರೆ. ಹಾಗಾಗಿ, ಇದು ಲವ್ಸ್ಟೋರಿಯ ಜೊತೆಗೆ ಸಂದೇಶಾತ್ಮಕ ಚಿತ್ರವೂ ಹೌದು.
ಚಿತ್ರದಲ್ಲಿ ನಾಯಕ ಜಯಪ್ರಕಾಶ್ ಕಾನೂನು ವಿದ್ಯಾರ್ಥಿಯಾಗಿ ನಟಿಸಿದ್ದಾರೆ. ಹಳ್ಳಿ ಹುಡುಗನಾಗಿ ದೊಡ್ಡ ಕನಸು ಕಾಣುವ ಪಾತ್ರ ಅವರದ್ದು. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಮೀನಾಕ್ಷಿ ಮೇಲ್ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಬಲರಾಜವಾಡಿ, ಸಾಧುಕೋಕಿಲ ಸೇರಿದಂತೆ ಅನೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DhruvaThare Movie Review: ಕಹಿ ಅನುಭವದಲ್ಲಿ ಸಿಹಿ ಹುಡುಕಿ ಹೊರಟವರು..
Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್
Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ
Priya Shatamarshan: ಇನ್ಸ್ ಪೆಕ್ಟರ್ ಗಿರಿಜಾ ರಿಪೋರ್ಟಿಂಗ್ ಸಾರ್..
Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Maharashtra; ಬಿಜೆಪಿಯನ್ನು ಅಳಿಸಿ ಹಾಕುತ್ತೇವೆ: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್
DhruvaThare Movie Review: ಕಹಿ ಅನುಭವದಲ್ಲಿ ಸಿಹಿ ಹುಡುಕಿ ಹೊರಟವರು..
Bollywood: ಪಾಕ್ ನಟ ಫವಾದ್ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್ ಕಂಬ್ಯಾಕ್
Sisodia; ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ
Manipal: ಪಾರ್ಕಿಂಗ್ ತಾಣವಾಗುತ್ತಿರುವ ಬಸ್ ನಿಲ್ದಾಣಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.