Paris; ಸಂಗೀತ ಕಾರ್ಯಕ್ರಮದಲ್ಲಿ ಭಾರತೀಯ ಗಾಯಕನ ಮೇಲೆ ಮೊಬೈಲ್ ಎಸೆತ!
ಶಾಂತ ರೀತಿಯ ಪ್ರತಿಕ್ರಿಯೆ ಮೂಲಕ ಪರಿಸ್ಥಿತಿ ನಿಭಾಯಿಸಿದ ಖ್ಯಾತ ಗಾಯಕನಿಗೆ ಭಾರೀ ಮೆಚ್ಚುಗೆ
Team Udayavani, Sep 22, 2024, 4:49 PM IST
ಪ್ಯಾರಿಸ್: ಇಲ್ಲಿ ಸ್ನಾಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾರತದ ಗಾಯಕ ದಿಲ್ಜಿತ್ ದೋಸಾಂಜ್ ಅವರ ಮೇಲೆ ಪ್ರೇಕ್ಷಕರ ವಲಯದಿಂದ ಯಾರೋ ಒಬ್ಬರು ಸ್ಮಾರ್ಟ್ಫೋನ್ ಎಸೆದಿದ್ದಾರೆ. ಘಟನೆ ಬಳಿಕ ಪಂಜಾಬಿ ಗಾಯಕ ದಿಲ್ಜಿತ್ ಅವರ ಶಾಂತ ರೀತಿಯ ಪ್ರತಿಕ್ರಿಯೆಯು ಆನ್ಲೈನ್ನಲ್ಲಿ ಹಲವರ ಹೃದಯಗಳನ್ನು ಗೆಲ್ಲುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ದೋಸಾಂಜ್ ಅವರು ತನ್ನ ಜನಪ್ರಿಯ ಹಾಡು “ಪಟಿಯಾಲಾ ಪೆಗ್” ಪ್ರದರ್ಶನ ನೀಡುತ್ತಿದ್ದ ವೇಳೆ ಮೊಬೈಲ್ ವೇದಿಕೆಯ ಮೇಲೆ ಬೀಳುವುದನ್ನು ಕಾಣಬಹುದು. ನಂತರ ದಿಲ್ಜಿತ್ ದೋಸಾಂಜ್ ಅದನ್ನು ಎತ್ತಿಕೊಂಡು ತನ್ನ ಕಡೆಗೆ ಸ್ಮಾರ್ಟ್ಫೋನ್ ಎಸೆದ ಅಭಿಮಾನಿಯೊಂದಿಗೆ ಮಾತನ್ನೂ ಆಡಿದ್ದಾರೆ.
ದೋಸಾಂಜ್ “ನಿನ್ನ ಫೋನ್ ನೋಡಿಕೊಳ್ಳು, ಪಾಜಿ. ಈ ರೀತಿ ಮಾಡಿ ಕ್ಷಣವನ್ನು ಹಾಳು ಮಾಡಬೇಡ. ಇದನ್ನು ಮಾಡಬೇಡ ಸಹೋದರ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನಿನ್ನ ಫೋನ್ ಅನ್ನು ಏಕೆ ಒಡೆಯುತ್ತಿದ್ದೀಯಾ ? ನಾನು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಆದರೆ ಈ ರೀತಿ ಮಾಡಬೇಡ ” ಎಂದು ಮೈಕ್ರೊಫೋನ್ ಮೂಲಕ ಶಾಂತ ರೀತಿಯಲ್ಲಿ ಹೇಳಿ,ತಾನು ಧರಿಸಿದ್ದ ಜಾಕೆಟ್ ಬಿಚ್ಚಿ ಆತನಿಗೆ ಕೊಟ್ಟು ಎಲ್ಲರ ಮನ ಗೆದ್ದಿದ್ದಾರೆ.
View this post on Instagram
ದಿಲ್ಜಿತ್ ದೋಸಾಂಜ್ ಪಂಜಾಬಿ ಮತ್ತು ಹಿಂದಿ ಚಿತ್ರರಂಗದ ಗಾಯಕ, ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಪಾಕ್ ನಟ ಫವಾದ್ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್ ಕಂಬ್ಯಾಕ್
Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ
Japan ಆ್ಯನಿಮೇಟೆಡ್ ರಾಮಾಯಣ ಅ.18ಕ್ಕೆ ಮರು ಬಿಡುಗಡೆ
Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Tumkur University ಕುಲಸಚಿವ, ಇನ್ಸ್ಪೆಕ್ಟರ್ ವಜಾ ಮಾಡಿ: ಅಶ್ವತ್ಥನಾರಾಯಣ್ ಒತ್ತಾಯ
Ayodhya: ಭಾಗಶಃ ನಿರ್ಮಿಸಿದ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ!
Shambhavi ಹೊಳೆಗೆ ಬಿದ್ದು ಬಾಲಕ ಸಾವು-ನಾಲ್ಕು ಮಂದಿ ಮಕ್ಕಳು ತೆರಳಿದ್ದ ವೇಳೆ ಘಟನೆ
Hiriydaka: ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು
Udupi: ಚೆಕ್ ಅಮಾನ್ಯ ಪ್ರಕರಣ; ಆರೋಪಿ ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.