Mysuru Dasara ವೇಳೆ “ಕಾವೇರಿ ಆರತಿ’; ಕಾವೇರಿ ವಿವಾದ ಬಗೆಹರಿಯಲು ಸರಕಾರ ಸಂಕಲ್ಪ
Team Udayavani, Sep 23, 2024, 6:55 AM IST
ಬೆಂಗಳೂರು/ವಾರಾಣಸಿ: ಕರ್ನಾಟಕ- ತಮಿಳುನಾಡು ನಡುವಿನ ಕಾವೇರಿ ನದಿ ವಿವಾದ ಬಗೆಹರಿಯಬೇಕು. ಪ್ರತಿ ವರ್ಷ ಉತ್ತಮ ಮಳೆಯಾಗಬೇಕು ಎಂಬ ಸಂಕಲ್ಪದೊಂದಿಗೆ ಈ ಬಾರಿಯ ದಸರಾ ಸಂದರ್ಭದಲ್ಲಿ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಆಯೋಜಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಇನ್ನೆರಡು ದಿನಗಳಲ್ಲಿ ಸರಕಾರಕ್ಕೆ ಅಧ್ಯಯನ ವರದಿ ಒಪ್ಪಿಸಲು ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ನಿರ್ಧರಿಸಿದೆ.
ಹರಿದ್ವಾರ ಮತ್ತು ವಾರಾಣಸಿಯಲ್ಲಿ 2 ದಿನಗಳ ಗಂಗಾರತಿಯ ಅಧ್ಯಯನ ಪ್ರವಾಸ ಪೂರ್ಣಗೊಳಿಸಿದ ಸಚಿವರು, ಶಾಸಕರ ನಿಯೋಗ ರವಿವಾರ ವಾರಾಣಸಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ವಿವರಣೆ ನೀಡಿತು.
ಸಚಿವ ಚಲುವರಾಯಸ್ವಾಮಿ ಮಾತನಾಡಿ, ಕೆಆರ್ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಬಾಗಿನ ಅರ್ಪಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾವೇರಿ ಆರತಿ ಬಗ್ಗೆ ಪ್ರಸ್ತಾವಿಸಲಾಗಿತ್ತು. ಕೂಡಲೇ ಈ ಕುರಿತು ಅಧ್ಯಯನ ನಡೆಸಲು ಕಾವೇರಿ ಕೊಳ್ಳದ ಶಾಸಕರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಒಳಗೊಂಡ ನಿಯೋಗ ರಚಿಸಿ ಅಧ್ಯಯನಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಳ್ಳಲಾಯಿತು. ಮೊದಲ ದಿನ ಹರಿದ್ವಾರ ಹಾಗೂ ಎರಡನೇ ದಿನ ವಾರಾಣಸಿಯ ಗಂಗಾರತಿಯನ್ನು ವೀಕ್ಷಿಸಲಾಗಿದೆ.
ಎಲ್ಲವನ್ನೂ ಎರಡು ದಿನದಲ್ಲಿ ವರದಿ ರೂಪದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗುತ್ತದೆ. ಬಳಿಕ ಅಧಿಕಾರಿಗಳ ತಂಡ ಮತ್ತೂಮ್ಮೆ ಎರಡೂ ಸ್ಥಳಗಳಿಗೆ ಭೇಟಿ ನೀಡಿ ಹೆಚ್ಚಿನ ಅಧ್ಯಯನ ನಡೆಸಿ ಮತ್ತೂಂದು ವರದಿ ನೀಡಿದ ಬಳಿಕ ಮುಂದಿನ ನಿರ್ಣಯವನ್ನು ಸರಕಾರ ಕೈಗೊಳ್ಳಲಿದೆ.
ಇದುವರೆಗೆ ಕೆಆರ್ಎಸ್ ಬೃಂದಾವನ ಹಾಗೂ ಗಂಜಾಂ ನಿಮಿಷಾಂಬ ದೇವಸ್ಥಾನದ ಬಳಿ ಕಾವೇರಿ ಆರತಿ ಬಗ್ಗೆ ಚಿಂತನೆ ಇತ್ತು. ಇದೀಗ ಬಲಮುರಿ ತಟದಲ್ಲೂ ಆಯೋಜಿಸಬಹುದಾದ ಸಲಹೆಗಳು ಬಂದಿದ್ದು, ಸ್ಥಳದ ನಿರ್ಧಾರವನ್ನು ಅನಂತರದ ದಿನಗಳಲ್ಲಿ ಮಾಡಲಾಗುತ್ತದೆ. ಕೆಆರ್ಎಸ್ ಬೃಂದಾವನವನ್ನು ಅಂತಾರಾಷ್ಟ್ರೀಯ ಮಾದರಿಯ ಪ್ರವಾಸಿ ತಾಣ ಮಾಡಲು ಡಿಪಿಆರ್ ಸಿದ್ಧಗೊಂಡಿದ್ದು ಜಾಗತಿಕ ಟೆಂಡರ್ ಸಹ ಕರೆಯಲಾಗಿದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ
Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ
Mudhol: ಬಾಲಕಿಗೆ ಲೈಂಗಿಕ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು
Mahalakshmi Case: ಬೆಂಗಳೂರು ಮಹಿಳೆ 30 ಅಲ್ಲ, 50 ಪೀಸ್!
Farmers: ಕೃಷಿ ಪಂಪ್ಸೆಟ್-ಆಧಾರ್ ಲಿಂಕ್: ಇಂದು ಕೊನೇ ದಿನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Viral Video: ಟಿಕೆಟ್ ಇಲ್ಲದೆ ರೈಲಿನ ಎಸಿ ಕೋಚ್ ನಲ್ಲಿ ಪ್ರಯಾಣಿಸಿದ ಹಾವು…
Radhika Kumaraswamy: ಭೈರಾದೇವಿ ಗೆದ್ದರಷ್ಟೇ ನಟನೆ ಮುಂದುವರಿಸುವೆ!: ರಾಧಿಕಾ
Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ
Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್ ಚಿರಂಜೀವಿ ಹೆಸರು
Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.