Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು


Team Udayavani, Sep 23, 2024, 9:56 AM IST

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

ಹೈದರಾಬಾದ್:‌ ಮೆಗಾಸ್ಟಾರ್‌ ಚಿರಂಜೀವಿ (Superstar Chiranjeevi) ಭಾರತೀಯ ಸಿನಿಮಾರಂಗದ ದಿಗ್ಗಜ ನಟರಲ್ಲಿ ಒಬ್ಬರು. ದಶಕಗಳಿಂದ ಮನರಂಜನೆ ಕ್ಷೇತ್ರದಲ್ಲಿ ರಂಜಿಸಿ ಉತ್ತುಂಗಕ್ಕೇರಿದ ಚಿರಂಜಿವಿ ಅವರ ಪ್ರತಿಭೆಗೆ ಸಂದಿರುವ ಪ್ರಶಸ್ತಿ – ಪುರಸ್ಕಾರ ಒಂದೆರೆಡಲ್ಲ.

ಪದ್ಮವಿಭೂಷಣದಂತಹ ಮಹಾನ್‌ ಪ್ರಶಸ್ತಿಗೆ ಭಾಜನರಾಗಿರುವ ಸೂಪರ್‌ ಸ್ಟಾರ್‌ ಚಿರಂಜೀವಿ ಅವರ ಹೆಸರು ಈಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ (Guinness World Records) ನಲ್ಲಿ ದಾಖಲಾಗಿದೆ. ಆ ಮೂಲಕ ಅವರ ಅಭಿಮಾನಿಗಳು ಹೆಮ್ಮೆ ಪಟ್ಟಿದ್ದಾರೆ.

ಹೈದರಾಬಾದ್‌ನಲ್ಲಿ ಭಾನುವಾರ(ಸೆ.22ರಂದು) ನಡೆದ ಸಮಾರಂಭದಲ್ಲಿ ಗಿನ್ನಿಸ್ ಪ್ರಮಾಣ ಪತ್ರವನ್ನು ಅವರಿಗೆ ವಿತರಿಸಲಾಗಿದೆ. ಬಾಲಿವುಡ್ ನಟ ಅಮೀರ್ ಖಾನ್ (Aamir Khan) ಚಿರಂಜೀವಿ ಅವರಿಗೆ ಗಿನ್ನಿಸ್ ಪ್ರತಿನಿಧಿ ರಿಚರ್ಡ್ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ.

150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಚಿರಂಜೀವಿ ನಟಿಸಿದ್ದಾರೆ. ಅವರ ಸಿನಿಮಾಗಳು ರಿಲೀಸ್‌ ಆದರೆ ಇಂದಿಗೂ ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ಗಾಗಿ ಕಾಯುವ ಸಾವಿರಾರು ಅಭಿಮಾನಿಗಳಿದ್ದಾರೆ. ಹಲವು ದಶಕಗಳಿಂದ ಸಿನಿಮಾರಂಗದಲ್ಲಿರುವ ಚಿರಂಜೀವಿ ನಟನೆ ಮಾತ್ರವಲ್ಲದೆ ಡ್ಯಾನ್ಸ್‌ನಿಂದಲೂ ನಟನೆಯಷ್ಟೇ ಜನಪ್ರಿಯವೂ ಹೌದು.

ಅವರ ಸಿನಿಮಾದಲ್ಲಿ ಅವರ ಡ್ಯಾನ್ಸ್‌ ನೋಡಿಯೇ ಅನೇಕರು ಪ್ರೇರಣೆಗೊಂಡು ಸ್ಟೆಪ್‌ ಹಾಕೋದಿದೆ. ಅವರ ಡ್ಯಾನ್ಸ್‌ ಮೂವ್ಸ್‌ ಗಳು ಯುವಜನರನ್ನೇ ನಾಚಿಸುವಷ್ಟು ಸೂಪರ್‌ ಆಗಿರುತ್ತದೆ.  ಅವರು ತನ್ನ 46  ವರ್ಷಗಳ ಸಿನಿ ಜರ್ನಿಯಲ್ಲಿ 156 ಸಿನಿಮಾಗಳಲ್ಲಿ 537 ಹಾಡುಗಳಲ್ಲಿ 24,000 ಸ್ಟೆಪ್ಸ್ ಹಾಕಿದ್ದಾರೆ. ಆ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ ತನ್ನ ಹೆಸರನ್ನು ದಾಖಲಾಗುವ ಸಾಧನೆಯನ್ನು ಮಾಡಿದ್ದಾರೆ.

ಗಿನ್ನಿಸ್ ತಂಡವು ಕೇವಲ 143 ಚಿತ್ರಗಳನ್ನು ಮಾತ್ರ ಇದರಲ್ಲಿ ಉಲ್ಲೇಖಿಸಿದೆ. ಚಿರಂಜೀವಿ 156 ಚಿತ್ರಗಳಲ್ಲಿ ನಟಿಸಿದ್ದಾರೆ.

“ನೀವು ಅವರ ಯಾವುದೇ ಹಾಡುಗಳನ್ನು ವೀಕ್ಷಿಸಿದರೆ, ಅವರ ಮನಸ್ಸು ಸಂಪೂರ್ಣವಾಗಿ ಅದರಲ್ಲಿದೆ. ಅವರು ತನ್ನ ಪ್ರತಿ ಮೂವ್ಸ್‌ ಗಳನ್ನು ಆನಂದಿಸುತ್ತಾರೆ. ಅದರಿಂದಾಗಿಯೇ ಅವರನ್ನು ನೋಡುತ್ತಲೇ ಇರಬೇಕೆನಿಸುತ್ತದೆ.” ಎಂದು ಅಮೀರ್‌ ಹೇಳಿ ಚಿರಂಜೀವಿ ಅವರನ್ನು ಅಭಿನಂದಿಸಿದ್ದಾರೆ.

ನಟರಾದ ವರುಣ್ ತೇಜ್, ಸಾಯಿ ಧರಮ್ ತೇಜ್ ಮತ್ತು ಪಂಜಾ ವೈಷ್ಣವ್ ತೇಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವಿಶೇಷ ಗೌರವಕ್ಕೆ ಕುಟುಂಬ ಸಮೇತ ಚಿರಂಜೀವಿ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಸಿನಿಮಾದ ವಿಚಾರಕ್ಕೆ ಬಂದರೆ ಚಿರಂಜೀವಿ ಮುಂದೆ ʼವಿಶ್ವಂಭರʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಲ್ಲಿಡಿ ವಸಿಷ್ಟ ನಿರ್ದೇಶನದ ಈ ಚಿತ್ರವು ಜನವರಿ 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಟಾಪ್ ನ್ಯೂಸ್

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Oscars 2025: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Oscars: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

chaitra j achar joins Marnami movie team

Chaithra J Achar: ಮಾರ್ನಮಿ ತಂಡ ಸೇರಿದ ಚೈತ್ರಾ

Will discuss about Rayanna Chennamma Brigade: K.S.Eshwarappa

Shimoga; ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಬಗ್ಗೆ ಶೀಘ್ರ ತೀರ್ಮಾನ: ಕೆ.ಎಸ್.ಈಶ್ವರಪ್ಪ

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

Tirupati Laddu ವಿವಾದ: ತಿರುಪತಿ ದೇಗುಲದಲ್ಲಿ ಮಹಾ ಶಾಂತಿ ಹೋಮ, ಶುದ್ದೀಕರಣ…

Tirupati Laddu ವಿವಾದ: ತಿರುಪತಿ ದೇಗುಲದಲ್ಲಿ ಮಹಾ ಶಾಂತಿ ಹೋಮ, ಶುದ್ದೀಕರಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

Pushpa 2: ಅಲ್ಲು ಅರ್ಜುನ್‌ ʼಪುಷ್ಪ-2ʼನಲ್ಲಿ ಕ್ರಿಕೆಟಿಗ ಡೇವಿಡ್‌ ವಾರ್ನರ್?‌- ಫೋಟೋ ವೈರಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

14

Jani Master: ನನ್ನ ಪತಿ ಎಲ್ಲಿದ್ದಾರೆ.. ಠಾಣೆ ಬಳಿ ಜಾನಿ ಮಾಸ್ಟರ್‌ ಪತ್ನಿ ರಾದ್ಧಾಂತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Oscars 2025: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Oscars: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Mudhol: ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು

Mudhol: ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು,

Thekkatte: ಇಂದಿನಿಂದ ಹೆದ್ದಾರಿ ಬದಿಯ ಅನಧಿಕೃತ ಒತ್ತುವರಿ ತೆರವು

Thekkatte: ಇಂದಿನಿಂದ ಹೆದ್ದಾರಿ ಬದಿಯ ಅನಧಿಕೃತ ಒತ್ತುವರಿ ತೆರವು

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.