Sullia ನಗರ: ಕೊಂಚ ಎಚ್ಚರ ತಪ್ಪಿದರೂ ಹರೋಹರ!
ಮುರಿದ ಸ್ಲ್ಯಾಬ್; ಬಾಯ್ದೆರೆದ ಚರಂಡಿ; ಹೆದ್ದಾರಿ ತಡೆಬೇಲಿಯೂ ಅಸಮರ್ಪಕ
Team Udayavani, Sep 23, 2024, 1:04 PM IST
ಸುಳ್ಯ: ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಹಾಗೂ ರಾಷ್ಟ್ರೀಯ ಹೆದ್ದಾರಿಯಾಗಿ ವಿಸ್ತರಣೆಗೊಳ್ಳಲಿರುವ ಸುಳ್ಯ ನಗರದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣ ಗೊಂಡಿದೆ.
ಸುಳ್ಯ ನ.ಪಂ.ವ್ಯಾಪ್ತಿಯಲ್ಲಿರುವ ಸುಳ್ಯ ನಗರದಲ್ಲಿ ಚರಂಡಿ ಸ್ಲ್ಯಾಬ್ ಮುರಿದು, ಚರಂಡಿ ಬಾಯ್ದೆರೆದಿದೆ, ಹೆದ್ದಾರಿ ತಡೆಬೇಲಿಗಳೂ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ನಗರದಲ್ಲಿ ಹಾದು ಹೋಗುವ ರಸ್ತೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿದ್ದರೂ ನಗರದ ನಿರ್ವಹಣೆಗೂ ನಿರ್ಲಕ್ಷ್ಯ ವಹಿಸಲಾಗಿದೆ ಎಂಬುದು ಎದ್ದು ಕಾಣುವಂತಿದೆ.
ಬಾಯ್ದೆರೆದಿವೆ ಚರಂಡಿಗಳು
ಸುಳ್ಯ ನಗರದಲ್ಲಿ ಎಲ್ಲವೂ ಸರಿ ಇದೆ ಎಂದುಕೊಂಡರೂ ಕಾಲ ಎಲ್ಲ ಸಮಸ್ಯೆಗಳನ್ನು ಮುನ್ನೆಲೆಗೆ ತರುತ್ತದೆ. ನಗರದಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ ಇದೆ ಎನ್ನುವುದು ಜೋರು ಮಳೆ ಬಂದರೆ ಕಾಣಬಹುದಾಗಿದೆ. ನಗರದ ಹೆದ್ದಾರಿ ಬದಿಗಳಲ್ಲಿ ಅಳವಡಿಸಲಾಗಿರುವ ಚರಂಡಿ ಸ್ಲ್ಯಾಬ್ಗಳು, ಚರಂಡಿ ಸರಳುಗಳು ಮುರಿದು ಬಿದ್ದು ಚರಂಡಿ ಬಾಯ್ದೆರೆದಿದ್ದು ಪಾದಚಾರಿಗಳು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯವನ್ನು ಎಳೆದುಕೊಳ್ಳಬೇಕಾದ ಸ್ಥಿತಿಯಿದೆ. ಗಾಂಧಿನಗರ, ಶ್ರೀರಾಮ್ಪೇಟೆ, ಖಾಸಗಿ ಬಸ್ ನಿಲ್ದಾಣ, ಜ್ಯೋತಿ ಸರ್ಕಲ್ ಬಳಿ ಸೇರಿದಂತೆ ನಗರದ ವಿವಿಧೆಡೆ ಚರಂಡಿ ಸ್ಲ್ಯಾಬ್ಗಳು ಮುರಿದು ಅಪಾಯಕಾರಿಯಾಗಿದೆ.
ಶಿಥಿಲ ತಡೆಬೇಲಿ
ಹೆದ್ದಾರಿಯ 2 ಬದಿಗಳಲ್ಲಿ ಹಲವು ವರ್ಷಗಳ ಹಿಂದೆ ಕಬ್ಬಿಣದ ತಡೆಬೇಲಿ ಅಳವಡಿಸಲಾಗಿದ್ದು, ಇದೀಗ ಕಬ್ಬಿಣದ ತಡೆಬೇಲಿ ಶಿಥಿಲಗೊಂಡು ಮುರಿದಿದ್ದು, ಬಾಗಿಕೊಂಡಿದೆ. ಸ್ವಲ್ಪ ಎಡವಿದರೂ ಕಬ್ಬಿಣ ಮೈಗೆ ತಾಗಿ ಗಾಯಗೊಳ್ಳುವ ಸ್ಥಿತಿಯಿದೆ.
ಹೆದ್ದಾರಿ ಹೊಂಡ-ಗುಂಡಿಮಯ
ಸುಳ್ಯ ನಗರದ ಸುಗಮ ಸಂಚಾರಕ್ಕೂ ಇಲ್ಲಿನ ಕೆಲವು ಸಮಸ್ಯೆಗಳು ಅಡ್ಡಿಯಾಗಿದೆ. ಪೊಲೀಸ್ ಠಾಣಾ ಸಮೀಪದ ಜಂಕ್ಷನ್ ಹಾಗೂ ಆಲೆಟ್ಟಿ ಕ್ರಾಸ್ ಜಂಕ್ಷನ್ನಲ್ಲಿ ಮಾಣಿ- ಮೈಸೂರು ಹೆದ್ದಾರಿಯ ಹೊಂಡ- ಗುಂಡಿಗಳು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿವೆ. ಇಲ್ಲಿನ ಹೊಂಡಕ್ಕೆ ತಾತ್ಕಾಲಿಕ ದುರಸ್ತಿ ಮಾತ್ರವೇ ಮಾಡ ಲಾಗುತ್ತಿದ್ದು, ಮತ್ತೆ ಮತ್ತೆ ಹೊಂಡ ನಿರ್ಮಾಣವಾಗುತ್ತಿದೆ ಎಂಬುದು ಆರೋಪ.
ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ
ಸುಳ್ಯ ನಗರದಲ್ಲಿನ ಈ ಸಮಸ್ಯೆಗಳ ಬಗ್ಗೆ ಸ್ಥಳೀಯಾಡಳಿತ, ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದಾಗ ಕ್ರಮಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿ ಬಳಿಕದಲ್ಲಿ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದೇ ಸಮಸ್ಯೆಗಳು ಜೀವಂತವಾಗಿರಲು ಕಾರಣ. ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯಾಡಳಿತದ ಸಭೆಗಳಲ್ಲಿ ಪ್ರಸ್ತಾವಗೊಳ್ಳುತ್ತಿದ್ದರೂ ಇನ್ನೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗದೇ ಇರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪರಿಹಾರಕ್ಕೆ ಇನ್ನಾದರೂ ಕ್ರಮ ವಹಿಸಲಿ ಎಂದು ಆಗ್ರಹಿಸಿದ್ದಾರೆ.
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!
Prakarana Tanikha Hantadallide Movie; ಟ್ರೇಲರ್ ನಲ್ಲಿ ಪ್ರಕರಣದ ವಿವರ
Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ
Kiran Rao ಚಿತ್ರ ಆಸ್ಕರ್ ಗೆ ಪ್ರವೇಶ: ಮಾಜಿ ಪತಿ ಆಮಿರ್ ಖಾನ್ ಹರ್ಷ
ಜೋಯಿಡಾ: ಕಾಳಿ ನದಿಯಲ್ಲಿ ರಾಫ್ಟಿಂಗ್-ಜಲಸಾಹಸ ಕ್ರೀಡೆಗೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.