Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

ತ್ಯಾಜ್ಯದ ಬಗ್ಗೆ ನಿಗಾ ವಹಿಸುವ ಸಿಸಿ ಕೆಮರಾ 'ಬಂದ್‌'!

Team Udayavani, Sep 23, 2024, 2:43 PM IST

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

ಮಹಾನಗರ: ಮಂಗಳೂರು ನಗರದ ಸುಮಾರು 18 ಕಡೆಗಳಲ್ಲಿ  ಸೋಲಾರ್‌ ಆಧಾರಿತ ಸಿಸಿ ಕೆಮರಾಗಳಿವೆ ಆದೆ ಬಳಕೆಗಿಲ್ಲ. ಕೆಮರಾಗಳ ಮುಂದೆಯೇ ಕಸದ ರಾಶಿ ಬೀಳುತ್ತಿದ್ದು, ಪಾಲಿಕೆ ಲಕ್ಷಾಂತರ ರೂ. ಖರ್ಚು ಮಾಡಿದ ಹಣ ಉಪಯೋಗಕ್ಕೆ ಇಲ್ಲದಂತಾಗಿದೆ.

ನಾಲ್ಕು ವರ್ಷಗಳ ಹಿಂದೆ ನಗರದ ಸುಮಾರು 18 ಕಡೆ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಲು  ಪಾಲಿಕೆಯು ಸೋಲಾರ್‌ ಪೋಲ್‌ ಕೆಮರಾಗಳನ್ನು ಅಳವಡಿಸಿತ್ತು. ಆರಂಭಿಕ ಹಂತದಲ್ಲಿ ಸಮರ್ಪಕವಾಗಿ ಕಾರ್ಯಾಚರಿಸುತ್ತಿದ್ದವು. ಅಪರೂಪಕ್ಕೆ ಕೆಲವರಿಗೆ ದಂಡ ವಿಧಿಸಲಾಗಿತ್ತು. ಆದರೆ ಇದೀಗ ಕೆಮರಾಗಳು ಕಾರ್ಯಾಚರಿಸುತ್ತಿಲ್ಲ ಎನ್ನುವುದಕ್ಕೆ ನಿತ್ಯ ಕೆಮರಾ ಮಂಭಾಗದಲ್ಲಿ ಬೀಳುತ್ತಿರುವ ಕಸದ ರಾಶಿಯೇ ಸಾಕ್ಷಿ!

ಸಿಮ್‌ ರೀಚಾರ್ಜ್‌ ಮಾಡದೆ ಕೆಮರಾ ಆಫ್‌!
ಸೋಲಾರ್‌ ಬೇಸ್ಡ್ ಪೋಲ್‌ ಕೆಮರಾಗಳನ್ನು ನಗರದ 18 ಕಡೆಗಳಲ್ಲಿ ಅಳವಡಿಸಲಾಗಿದೆ. ಇಂಟರ್‌ನೆಟ್‌ಗಾಗಿ ಸಿಮ್‌ ಅಳವಡಿಸಲಾಗಿದ್ದು, ಪ್ರತೀ ತಿಂಗಳು ಪಾಲಿಕೆ ಮೂಲಕ ಬಿಲ್‌ ಪಾವತಿಸಬೇಕಾಗುತ್ತದೆ. ಕಳೆದ ಮೂರು ತಿಂಗಳಿನಿಂದ ಬಿಲ್‌ ಪಾವತಿಯಾಗಿಲ್ಲ ಎನ್ನಲಾಗಿದ್ದು, ಇದರಿಂದಾಗಿ ಸಂಪರ್ಕ ಕಡಿತಗೊಳಿಸಲಾಗಿದೆ.

2 ಕೆಮರಾ ಕಳವು!
ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ಅಳವಡಿಸಲಾಗಿದ್ದ ಕೆಮರಾಗಳ ಪೈಕಿ ಎರಡು ಕೆಮರಾಗಳು ಕಳವಾಗಿವೆ. ಸುರತ್ಕಲ್‌ ಹಾಗೂ ಕಾವೂರು ಸಮೀಪದಲ್ಲಿ ಅಳವಡಿಸಿದ್ದ ಕೆಮರಾ ಕಳವು ಮಾಡಲಾಗಿದೆ. ಈ ಬಗ್ಗೆ ಪಾಲಿಕೆ ಮೂಲಕ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರತೀ ಕೆಮರಾ ಅಳವಡಿಕೆಗೆ ಪಾಲಿಕೆ ಸರಿಸುಮಾರು 60 ಸಾವಿರ ರೂ. ಖರ್ಚು ಮಾಡಿದ್ದು, ಒಟ್ಟು 10.80 ಲಕ್ಷ ರೂ. ವ್ಯಯಿಸಿದೆ.

ಬಂದಿ ನೇಮಿಸಲಾಗುವುದು
ಕೆಮರಾಗಳ ಸಿಮ್‌ಗಳಿಗೆ ಮಾಸಿಕವಾಗಿ ಬಿಲ್‌ ಪಾವತಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಬಿಲ್‌ ಪಾವತಿ ಬಿಳಂಬವಾಗಿದ್ದು, ಸಂಪರ್ಕ ಕಡಿತವಾಗಿದೆ. ಮುಂದಿನ ದಿನಗಳಲ್ಲಿ ವಾರ್ಷಿಕವಾಗಿ ಬಿಲ್‌ ಪಾವತಿಗೆ ಕ್ರಮವಹಿಸಲಾಗುವುದು. ವೀಡಿಯೋ ಮಾನಿಟರ್‌ ಮಾಡಲು ಸಿಬಂದಿ ನೇಮಿಸಲಾಗುವುದು.
ದಯಾನಂದ ಪೂಜಾರಿ ಪರಿಸರ ಅಭಿಯಂತ

ಸಾಂಕ್ರಾಮಿಕ ರೋಗ ಭೀತಿ
ಸಾರ್ವಜನಿಕ ಪ್ರದೇಶಗಳಲ್ಲಿ ಕಸ ರಾಶಿ ಹಾಕುವುದರಿಂದ ಪರಿಸರ ದುರ್ವಾಸನೆಯಿಂದ ಕೂಡುತ್ತದೆ. ಸಾಂಕ್ರಾಮಿಕ ರೋಗ ಭೀತಿಯೂ ಇದೆ. ನಿಗಾ ವಹಿಸಲು ಅಳವಡಿಸಲಾಗಿರುವ ಕೆಮರಾಗಳ ಮುಂದೆಯೇ ತ್ಯಾಜ್ಯ ಎಸೆಯುತ್ತಿರುವುದು ವಿಪರ್ಯಾಸ. ಪಾಲಿಕೆ ನಿರ್ಲಕ್ಷ್ಯ ವಹಿಸದೆ ಕ್ರಮಕೈಗೊಳ್ಳಬೇಕು.
ನಿತಿನ್‌ ಕುಮಾರ್‌, ಮಂಗಳೂರು ನಿವಾಸಿ

ಮಾನಿಟರಿಂಗ್‌ ತಂಡವಿಲ್ಲದೆ ನಿಷ್ಕ್ರಿಯ
ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಿ ಕಸ ಎಸೆಯುವವರಿಗೆ ದಂಡ ವಿಧಿಸುವ ಮೂಲಕ ಬೀದಿಯಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಲು ಪಾಲಿಕೆ ಒಂದು ಹಂತದಲ್ಲಿ ಕ್ರಮ ವಹಿಸಿದ್ದರೂ ಕೆಮರಾ ಅಳವಡಿಕೆಯ ಬಳಿಕ ತ್ಯಾಜ್ಯ ಎಸೆಯುವುದು ನಿಂತಿಲ್ಲ. ಪಾಲಿಕೆಯಿಂದ ದಂಡ ವಿಧಿಸುವ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಪಾಲಿಕೆಯಲ್ಲಿ ಸಮರ್ಪಕವಾಗಿ ಮಾನಿಟರಿಂಗ್‌ ನಡೆಸಲು ತಂಡವಿಲ್ಲದ ಕಾರಣ ದಂಡ ವಿಧಿಸುವ ಕೆಲಸವಾಗುತ್ತಿಲ್ಲ.

ಪೌರ ಕಾರ್ಮಿಕರಿಂದ ತೆರವು
ಪ್ರತಿನಿತ್ಯ ಸಾರ್ವಜನಿಕರು ವಿವಿಧ ಕಾರಣಗಳನ್ನು ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿ ಹಾಕುತ್ತಾರೆ. ಅಂತಹ ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಿ ಸಿಸಿ ಕೆಮರಾಗಳನ್ನು ಅಳವಡಿಸುವ ಕೆಲಸ ಪಾಲಿಕೆ ಮೂಲಕ ನಡೆಸಲಾಗಿದೆ. ಆದರೆ ಅವುಗಳ ಸುತ್ತ ಕಸ ರಾಶಿ ಹಾಕುತ್ತಿದ್ದು, ಸ್ವಚ್ಚತಾ ಕೆಲಸ ಮಾಡುವ ಪೌರ ಕಾರ್ಮಿಕರು ನಿತ್ಯ ಈ ರಾಶಿಯನ್ನು ತೆರವು ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾವಂತರೇ ಕಸ ಎಸೆಯುತ್ತಿರುವುದು ವಿಪರ್ಯಾಸ.

ಸಂತೋಷ್‌ ಮೊಂತೇರೊ

ಟಾಪ್ ನ್ಯೂಸ್

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

RabkaviRabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

Childhood traumas and their long-term effects on mental health

Health; ಬಾಲ್ಯದ ಆಘಾತಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಅವುಗಳ ದೀರ್ಘಕಾಲೀನ ಪರಿಣಾಮಗಳು

Kottigehara

Kottigehara: ಮೇಗೂರು ಚಹಾ ತೋಟಕ್ಕೆ ಕಾಡಾನೆ ದಾಳಿ; ಬಾಳೆ, ಕಾಫಿ ಗಿಡಗಳು ಧ್ವಂಸ

Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

Miracle: ಈ ಶಿವಲಿಂಗಕ್ಕೆ ದಿನದ 24 ಗಂಟೆ ಸಮುದ್ರದೇವನಿಂದಲೇ ಅಭಿಷೇಕ… ಏನಿದು ಮಹಿಮೆ

Miracle: ಈ ಶಿವಲಿಂಗಕ್ಕೆ ದಿನದ 24 ಗಂಟೆ ಸಮುದ್ರದೇವನಿಂದಲೇ ಅಭಿಷೇಕ… ಏನಿದು ಮಹಿಮೆ

Bantwal: KSRTC ಬಸ್ ಪಲ್ಟಿ; ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರು..!

Bantwal: KSRTC ಬಸ್ ಪಲ್ಟಿ; ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರು..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

Hospital

Mangaluru: ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಬಂದ ಪಿಜಿ ವೈದ್ಯ!

BK-hariprasad

Arkavathi: 25 ವರ್ಷಗಳ ಅಕ್ರಮ ಸುಪ್ರೀಂ ನ್ಯಾಯಮೂರ್ತಿಯವರಿಂದ ತನಿಖೆಯಾಗಲಿ: ಹರಿಪ್ರಸಾದ್‌

ganja

Bajpe; ಗಾಂಜಾ ಸೇವನೆ; ಮೂವರು ವಶಕ್ಕೆ

10

Multi level parking ಇನ್ನೆಷ್ಟು ವರ್ಷ ಬೇಕು? ಬರೀ ಪಾರ್ಕಿಂಗಲ್ಲ, ಶಾಪಿಂಗ್‌ ಮಾಲೂ ಇದೆ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

prakarana tanikha hantadallide movie trailer out

Prakarana Tanikha Hantadallide Movie; ಟ್ರೇಲರ್‌ ನಲ್ಲಿ ಪ್ರಕರಣದ ವಿವರ

RabkaviRabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

1-ddd

Kiran Rao ಚಿತ್ರ ಆಸ್ಕರ್ ಗೆ ಪ್ರವೇಶ: ಮಾಜಿ ಪತಿ ಆಮಿರ್ ಖಾನ್ ಹರ್ಷ

ಜೋಯಿಡಾ: ಕಾಳಿ ನದಿಯಲ್ಲಿ ರಾಫ್ಟಿಂಗ್‌-ಜಲಸಾಹಸ ಕ್ರೀಡೆಗೆ ಚಾಲನೆ‌

ಜೋಯಿಡಾ: ಕಾಳಿ ನದಿಯಲ್ಲಿ ರಾಫ್ಟಿಂಗ್‌-ಜಲಸಾಹಸ ಕ್ರೀಡೆಗೆ ಚಾಲನೆ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.