ಆರು ತಿಂಗಳಲ್ಲಿ ಏಳು ಹರಕೆ ಕೋಣಗಳ ಸಾವು: ಭಕ್ತರ ನಂಬಿಕೆ ಚ್ಯುತಿ ತರಬೇಡಿ…
Team Udayavani, Sep 23, 2024, 3:01 PM IST
■ ಉದಯವಾಣಿ ಸಮಾಚಾರ
ಶಿಗ್ಗಾವಿ: ಕಳೆದ ಆರು ತಿಂಗಳಲ್ಲಿ ಪಟ್ಟಣದ ಗ್ರಾಮ ದೇವಿಗೆ ಹರಿಕೆ ಬಿಟ್ಟ ಸುಮಾರು ಏಳು ಕೋಣಗಳು ಮೃತಪಟ್ಟಿವೆ. ಗ್ರಾಮ ದೇವಿಗೆ ಹರಕೆ ಕಟ್ಟಿಕೊಂಡ ಭಕ್ತರು ದೇವಿಯ ಹೆಸರಲ್ಲಿ ಕೋಣಗಳನ್ನು ಬಿಡುವ ವಾಡಿಕೆ ಇದ್ದು, ಕಮಿಟಿ ವತಿಯಿಂದಲೂ ಪ್ರತಿ ಜಾತ್ರೆ ಮತ್ತು ವಿಶೇಷ ಸಂದರ್ಭಗಳಲ್ಲಿ ದೇವರ ಕೋಣ ಬಿಡುವ ಸಂಪ್ರದಾಯ ಬಂದಿದೆ. ದೇವಸ್ಥಾನ ಕಮಿಟಿಯವರು ತಾವು ಬಿಟ್ಟಿರುವ ದೇವರ ಕೋಣದ ಮೇಲೆ ನಿಗಾ ವಹಿಸಿರುತ್ತಾರೆ. ಆದರೆ ಭಕ್ತರು ದೇವರ ಹೆಸರಲ್ಲಿ ಬಿಟ್ಟಿರುವ ಕೋಣಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಪಟ್ಟಣದ ಗ್ರಾಮದೇವಿಗೆ ಭಕ್ತಾದಿಗಳು ಬಿಟ್ಟಿರುವ ಕೋಣಗಳಲ್ಲಿ ಮೂರು ಕೋಣಗಳು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಳಿ ತೆಗೆದ ಗುಂಡಿಗಳಲ್ಲಿ ಬಿದ್ದು ಮರಣ ಹೊಂದಿದ್ದರೆ, ನಾಲ್ಕು ಕೋಣಗಳು ರಸ್ತೆ ಅಪಘಾತದಲ್ಲಿ ತೀರಿವೆ.
ತೀರಿರುವ ಕೋಣಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಯಾವುದೇ ಗುರುತಿನ ಚಿನ್ಹೆ ಹಾಕದಿರುವುದು ಕಂಡು ಬಂದಿದೆ.
ಅಪಘಾತಗೊಳಗಾಗಿ ಮೃತಪಟ್ಟ ಕೆಲ ಕೋಣಗಳನ್ನು ಪುರಸಭೆಯವರು ದೇವಿ ಪಾದಗಟ್ಟಿ ಬಳಿ ಅಂತ್ಯ ಸಂಸ್ಕಾರ ಮಾಡಿದ್ದು, ಇನ್ನು ಕೆಲ ಕೋಣಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೂಳಲಾಗಿದೆ. ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯದಡಿ ಭಕ್ತರು ದೇವಿಗೆ ಹರಕೆ ನೀಡುವ ಕೋಣಗಳನ್ನು ದೇವಸ್ಥಾನ ಕಮಿಟಿಯವರು ಸರಿಯಾಗಿ ನಿರ್ವಹಿಸುವ ಮೂಲಕ ಭಕ್ತರ ನಂಬಿಕೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗ್ರಾಮದೇವಿ ಕಮಿಟಿಯವರು ದೇವಿಯ ಹರಕೆ ಕೋಣಗಳನ್ನು ಸುಲಭವಾಗಿ ಗುರುತಿಸುವಂತೆ ವ್ಯವಸ್ಥೆ ಮಾಡಬೇಕು. ಅವುಗಳಿಗೆ ಇನ್ಸುರನ್ಸ್ ಮಾಡಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು. ಭಕ್ತಾದಿಗಳು ಹರಕೆ ಕೋಣಗಳನ್ನು ದೇವರ ಹೆಸರಲ್ಲಿ ಬಿಡುವ ಮುಂಚೆಯೇ ಕಮಿಟಿ ಸದಸ್ಯರ ಗಮನಕ್ಕೆ ತರಬೇಕು.
*ರಮೆಶ ವನಹಳ್ಳಿ, ಪುರಸಭೆ ಸದಸ್ಯ
ದೇವಿ ಹೆಸರಲ್ಲಿ ಭಕ್ತರು ಹರಕೆ ರೂಪದಲ್ಲಿ ನೀಡುವ ಕೋಣಗಳ ನಿರ್ವಹಣೆಗೆ ಸುಸರ್ಜಿತ ವ್ಯವಸ್ಥೆ, ದೇವಸ್ಥಾನದ ಕೋಣಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಕೋಣಗಳಿಗೆ ಯಾವುದೇ ಹಾನಿಯಾಗದಂತೆ ಸಾಕಲು ಗ್ರಾಮದೇವಿ ಸೇವಾ ಸಮಿತಿ ವ್ಯವಸ್ಥೆ ಮಾಡಬೇಕು.
ಸುಭಾಸ ಚೌವ್ಹಾಣ,
ಗ್ರಾಮದೇವಿ ಸೇವಾ ಸಮಿತಿ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!
Prakarana Tanikha Hantadallide Movie; ಟ್ರೇಲರ್ ನಲ್ಲಿ ಪ್ರಕರಣದ ವಿವರ
Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ
Kiran Rao ಚಿತ್ರ ಆಸ್ಕರ್ ಗೆ ಪ್ರವೇಶ: ಮಾಜಿ ಪತಿ ಆಮಿರ್ ಖಾನ್ ಹರ್ಷ
ಜೋಯಿಡಾ: ಕಾಳಿ ನದಿಯಲ್ಲಿ ರಾಫ್ಟಿಂಗ್-ಜಲಸಾಹಸ ಕ್ರೀಡೆಗೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.