Udupi: ತಂಗುದಾಣದ ಎದುರು ವಾಹನ ಪಾರ್ಕಿಂಗ್‌ಗೆ ಕಡಿವಾಣ

ಪೊಲೀಸರಿಂದ ಕಾರ್ಯಾಚರಣೆ; ಬ್ಯಾರಿಕೇಡ್‌, ಕೋನ್‌, ಟೇಪ್‌ ಅಳವಡಿಕೆ  

Team Udayavani, Sep 23, 2024, 3:10 PM IST

Udupi: ತಂಗುದಾಣದ ಎದುರು ವಾಹನ ಪಾರ್ಕಿಂಗ್‌ಗೆ ಕಡಿವಾಣ

ಉಡುಪಿ: ಮಣಿಪಾಲದ ಎಂಐಟಿ ಹಾಗೂ ಸಿಂಡಿಕೇಟ್‌ ಸರ್ಕಲ್‌ ಬಳಿ ಇರುವ ಬಸ್‌ ತಂಗುದಾಣದ ಎದುರು ಭಾಗದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಬಗ್ಗೆ ಉದಯವಾಣಿಯ ಸುದಿನದಲ್ಲಿ ರವಿವಾರ ವರದಿ ಪ್ರಕಟಗೊಂಡಿದ್ದು, ಮಣಿಪಾಲ ಪೊಲೀಸರು ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ ಬ್ಯಾರಿಕೇಡ್‌ ಹಾಗೂ ಟೇಪ್‌ ಅಳವಡಿಕೆ ಮಾಡಿದ್ದಾರೆ.

ಮಣಿಪಾಲ ಠಾಣೆಯ ಠಾಣಾಧಿಕಾರಿ ದೇವರಾಜ್‌ ಟಿ.ವಿ. ನೇತೃತ್ವದಲ್ಲಿ ಎಸ್‌ಐ ರಾಘವೇಂದ್ರ ಹಾಗೂ ಸಿಬಂದಿ ಮೊದಲಿಗೆ ಎಂಐಟಿ ಬಸ್‌ ನಿಲ್ದಾಣಕ್ಕೆ ತೆರಳಿ ನಿಲುಗಡೆ ಮಾಡಿರುವ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು. ಅನಂತರ ಇಲ್ಲಿ ಕೋನ್‌ಗಳನ್ನು ಅಳವಡಿಸುವ ಜತೆಗೆ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿರುವ ಜಾಗಕ್ಕೆ ಟೇಪ್‌ ಅಳವಡಿಕೆ ಮಾಡಲಾಯಿತು. ಇದರಿಂದಾಗಿ ರವಿವಾರ ಬಸ್‌ಗಳು ತಂಗುದಾಣದ ಎದುರು ಭಾಗದಲ್ಲಿ ನಿಂತ ಕಾರಣ ಯಾವುದೇ ಸಂಚಾರ ದಟ್ಟಣೆೆ ಕಂಡುಬರಲಿಲ್ಲ.

ಇಲ್ಲಿಂದ ಸಿಂಡಿಕೇಟ್‌ ಸರ್ಕಲ್‌ ಬಳಿ ಇರುವ ತಂಗುದಾಣದತ್ತ ತೆರಳಿದ ಪೊಲೀಸರು ತಂಗುದಾಣದ ಎದುರುಭಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವು ಮಾಡುವಂತೆ ಸೂಚನೆ ನೀಡಿದರು. ಸ್ಥಳೀಯಹೊಟೇಲ್‌ನ ಸೆಕ್ಯೂರಿಟಿ ಗಾರ್ಡ್‌ಗೂ ಈ ಭಾಗದಲ್ಲಿ ವಾಹನ ನಿಲುಗಡೆ ಮಾಡದಂತೆ ಸಂಬಂಧಪಟ್ಟವರಿಗೆ ತಿಳಿಸುವಂತೆ ಸೂಚಿಸಿದರು. ಇದರಿಂದಾಗಿ ರವಿವಾರ ಯಾವುದೇ ವಾಹನಗಳು ಇದರ ಎದುರು ಭಾಗದಲ್ಲಿ ನಿಲ್ಲಲಿಲ್ಲ. ಆದರೂ ಬಸ್‌ಗಳು ತಂಗುದಾಣದಲ್ಲಿ ನಿಲ್ಲದೆ ಎದುರು ಭಾಗದಲ್ಲಿರುವ ವೈನ್‌ಶಾಪ್‌ ಎದುರುಗಡೆಯೇ ನಿಲುಗಡೆ ಮಾಡುತ್ತಿರುವ ದೃಶ್ಯಾವಳಿಗಳು ಕಂಡುಬಂತು.

ನಿಯಮಾವಳಿ ಪಾಲಿಸಿದರಷ್ಟೇ ಸಂಚಾರ ದಟ್ಟಣೆೆ ನಿಯಂತ್ರಣ
ಸಿಂಡಿಕೇಟ್‌ ಸರ್ಕಲ್‌ ಬಳಿಯ ವೈನ್‌ ಶಾಪ್‌ ಎದುರು ಬಸ್‌ಗಳನ್ನು ನಿಲ್ಲಿಸುವ ಕಾರಣ ಜಿಲ್ಲಾಧಿಕಾರಿ ಮಾರ್ಗದಿಂದ ಉಡುಪಿಯತ್ತ ತೆರಳುವ ವಾಹನಗಳು ಹಾಗೂ ಅನಂತನಗರದತ್ತ ತೆರಳುವ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗುತ್ತದೆ. ಈ ವೇಳೆ ಮಣಿಪಾಲದಿಂದ ಉಡುಪಿಯತ್ತ ತೆರಳುವ ವಾಹನಗಳನ್ನೂ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಈ ಬಗ್ಗೆಯೂ ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದೇ ರೀತಿ ಮಣಿಪಾಲದ ಎಂಐಟಿ ಬಸ್‌ ತಂಗುದಾಣದ ಬಳಿಯೂ ಸಮಸ್ಯೆ ಉಂಟಾಗುತ್ತಿದ್ದು, ಪೊಲೀಸರ ಈ ಕ್ರಮದಿಂದ ಸ್ವಲ್ಪ ಮಟ್ಟಿಗೆ ದಟ್ಟಣೆ ಕಡಿಮೆಯಾಗಿದೆ. ಈ ಕಾರ್ಯಾಚರಣೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದು, ಇದನ್ನು ಮುಂದುವರಿಸುವಂತೆ ಸಲಹೆ ನೀಡಿದ್ದಾರೆ.

ಸ್ಥಳೀಯರಿಗೆ ಸೂಚನೆ
ಈಗಾಗಲೇ ಎಂಐಟಿ ಬಸ್‌ ತಂಗುದಾಣದ ಎದುರು ಕೋನ್‌ ಹಾಗೂ ಟೇಪ್‌ಗ್ಳನ್ನು ಅಳವಡಿಕೆ ಮಾಡಿದ್ದೇವೆ. ಇಲ್ಲಿ ಪೊಲೀಸ್‌ ಸಿಬಂದಿಯನ್ನೂ ನಿಯೋಜಿಸಲಾಗಿದೆ. ಈ ಘಟನೆಗಳು ಮರುಕಳಿಸಿದರೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚನೆಯನ್ನೂ ನೀಡಲಾಗಿದೆ. ಸುಗಮ ಸಂಚಾರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಇಲಾಖೆ ಬದ್ಧವಾಗಿದ್ದು, ಇದಕ್ಕೆ ಬೇಕಿರುವ ಪೂರಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
-ದೇವರಾಜ್‌ ಟಿ.ವಿ., ಠಾಣಾಧಿಕಾರಿ, ಮಣಿಪಾಲ ಪೊಲೀಸ್‌ ಠಾಣೆೆ

ಟಾಪ್ ನ್ಯೂಸ್

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

RabkaviRabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

Childhood traumas and their long-term effects on mental health

Health; ಬಾಲ್ಯದ ಆಘಾತಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಅವುಗಳ ದೀರ್ಘಕಾಲೀನ ಪರಿಣಾಮಗಳು

Kottigehara

Kottigehara: ಮೇಗೂರು ಚಹಾ ತೋಟಕ್ಕೆ ಕಾಡಾನೆ ದಾಳಿ; ಬಾಳೆ, ಕಾಫಿ ಗಿಡಗಳು ಧ್ವಂಸ

Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

Nothing- CMF ಉತ್ಪನ್ನಗಳಿಗೆ ಶೇ.50ಕ್ಕೂ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ ನಥಿಂಗ್

Miracle: ಈ ಶಿವಲಿಂಗಕ್ಕೆ ದಿನದ 24 ಗಂಟೆ ಸಮುದ್ರದೇವನಿಂದಲೇ ಅಭಿಷೇಕ… ಏನಿದು ಮಹಿಮೆ

Miracle: ಈ ಶಿವಲಿಂಗಕ್ಕೆ ದಿನದ 24 ಗಂಟೆ ಸಮುದ್ರದೇವನಿಂದಲೇ ಅಭಿಷೇಕ… ಏನಿದು ಮಹಿಮೆ

Bantwal: KSRTC ಬಸ್ ಪಲ್ಟಿ; ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರು..!

Bantwal: KSRTC ಬಸ್ ಪಲ್ಟಿ; ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರು..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಪರ್ಮಿಟ್‌ ಇದ್ದರೂ ಓಡದ ಸರಕಾರಿ ಬಸ್‌ಗಳು!

Udupi: ಪರ್ಮಿಟ್‌ ಇದ್ದರೂ ಓಡದ ಸರಕಾರಿ ಬಸ್‌ಗಳು!

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Santhekatte-Road

Udupi Santhekatte Road: ನಾಲ್ಕಲ್ಲ, ಕನಿಷ್ಠ ಒಂದು ರಸ್ತೆಯನ್ನಾದರೂ ಕೊಡಿ

PRAVASI-Mandir

Udupi: ಬ್ರಹ್ಮಗಿರಿಯಲ್ಲಿರುವ ಪ್ರವಾಸಿ ಮಂದಿರಕ್ಕೆ ಕತ್ತಲ ಭಾಗ್ಯ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

prakarana tanikha hantadallide movie trailer out

Prakarana Tanikha Hantadallide Movie; ಟ್ರೇಲರ್‌ ನಲ್ಲಿ ಪ್ರಕರಣದ ವಿವರ

RabkaviRabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

1-ddd

Kiran Rao ಚಿತ್ರ ಆಸ್ಕರ್ ಗೆ ಪ್ರವೇಶ: ಮಾಜಿ ಪತಿ ಆಮಿರ್ ಖಾನ್ ಹರ್ಷ

ಜೋಯಿಡಾ: ಕಾಳಿ ನದಿಯಲ್ಲಿ ರಾಫ್ಟಿಂಗ್‌-ಜಲಸಾಹಸ ಕ್ರೀಡೆಗೆ ಚಾಲನೆ‌

ಜೋಯಿಡಾ: ಕಾಳಿ ನದಿಯಲ್ಲಿ ರಾಫ್ಟಿಂಗ್‌-ಜಲಸಾಹಸ ಕ್ರೀಡೆಗೆ ಚಾಲನೆ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.