BBK11: ಸ್ಪರ್ಧಿಗಳ ಆಯ್ಕೆಗೆ ವೋಟಿಂಗ್‌ To ಫೇಸ್‌ ರಿವೀಲ್; ಹೇಗಿರಲಿದೆ ಈ ಬಾರಿ ಬಿಗ್‌ಬಾಸ್?

ಹೊಸ ಅಧ್ಯಾಯದಲ್ಲಿ ಏನಿರಲಿದೆ ವಿಶೇಷ?

Team Udayavani, Sep 23, 2024, 5:28 PM IST

16

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada-11) ಆರಂಭಕ್ಕೆ ದಿನ ನಿಗದಿಯಾದ ಹಿನ್ನೆಲೆಯಲ್ಲಿ ʼಬಿಗ್‌ ಬಾಸ್ʼ ಮಹತ್ವದ ಸುದ್ದಿಗೋಷ್ಠಿ ನಡೆಸಿದೆ.

ಕಿಚ್ಚ ಸುದೀಪ್‌ ಅವರು ಮಾತನಾಡಿ, ಪ್ರತಿ ಬಾರಿ ಹೊಸ ಸ್ಪರ್ಧಿಗಳು ಬಂದಾಗ, ಹೊಸ ವ್ಯಕ್ತಿತ್ವಗಳು ಒಳಗೆ ಬರುತ್ತವೆ. ಹೊಸ ವ್ಯಕ್ತಿತ್ವಗಳು ಒಳಗೆ ಬಂದಾಗ ಅವರಿಗೆ ನೀವು ಒಂದೇ ವಿಷಯವನ್ನು ಕೊಟ್ಟರೆ ಅವರು ಹ್ಯಾಂಡಲ್‌ ಮಾಡುವ ರೀತಿ ಬೇರೆ ಆಗಿರುತ್ತದೆ. ಬಿಗ್‌ ಬಾಸ್‌ ತಂಡದ ಮೇಲೆ ದೊಡ್ಡ ಜವಬ್ದಾರಿಯಿದೆ ಎಂದು ಕಿಚ್ಚ ಹೇಳಿದ್ದಾರೆ.

ಸ್ವರ್ಗ – ನರಕ.. ಮೊದಲಿನಿಂದಲೂ ಇರಲಿದೆ ಎರಡು ತಂಡ: ಈ ಬಾರಿ ಸ್ವರ್ಗ – ನರಕ ಎನ್ನುವ ಥೀಮ್‌ ಬಗ್ಗೆ ಮಾತನಾಡಿದ ಅವರು, “ನಾವು ಹೀಗೆ ಮಾಡದೆ ಇದ್ರೆ ಮನೆಗೆ ಹೋದ ಕೂಡಲೇ ಎರಡು ಟೀಮ್‌ ಆಗಿ ಎಲ್ಲರೂ ಕಿತ್ತಾಡಿಕೊಳ್ಳುತ್ತಾರೆ. ಬರೀ ಸ್ವರ್ಗವನ್ನೇ ತೋರಿಸಿದರೆ ನೀವು ನೋಡುತ್ತೀರಾ? ಅದಕ್ಕೆ ಈ ಬಾರಿ ಮೊದಲಿನಿಂದಲೇ ಎರಡು ಟೀಮ್‌ ಇರುತ್ತದೆ. ಮೊದಲಿನಿಂದಲೇ ಸ್ವರ್ಗ – ನರಕದ ಕಾನ್ಸೆಪ್ಟ್‌ ಇರುವುದರಿಂದ ಇದು ಅಷ್ಟು ಸುಲಭವಾಗಿರಲ್ಲ ಎಂದು ಕಿಚ್ಚ ಹೇಳಿದ್ದಾರೆ. ‌

ಮೊದಲೇ ರಿವೀಲ್‌ ಆಗಲಿದೆ ಸ್ಪರ್ಧಿಗಳ ಹೆಸರು..  ಈ ಸಲ ಏನೆಲ್ಲಾ ಹೊಸತನ್ನು ಪ್ರೇಕ್ಷಕರು ನಿರೀಕ್ಷೆ ಮಾಡಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಆಯೋಜಕರು, ಸ್ವರ್ಗ – ನರಕ ಎಂಬ ಕಾನ್ಸೆಪ್ಟ್‌  ಇರುವುದು ಗೊತ್ತೇ ಇದೆ. ಇದು ಬಿಟ್ಟು ಈ ಬಾರಿ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಲಿದ್ದೇವೆ. ʼರಾಜಾರಾಣಿʼ ಫಿನಾಲೆಯಲ್ಲಿ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡುತ್ತೇವೆ. ಸ್ಪರ್ಧಿಗಳ ವಿಚಾರಕ್ಕೆ ಬಂದರೆ ಈ ಬಾರಿ ಕಳೆದ ಬಾರಿಗಿಂತ ಭಿನ್ನವಾದ ಸ್ಪರ್ಧಿಗಳು ಇರಲಿದ್ದಾರೆ ಎಂದು ಹೇಳಿದ್ದಾರೆ.

ವೋಟಿಂಗ್‌ ಮೂಲಕ ಸ್ಪರ್ಧಿಗಳ ಆಯ್ಕೆ: ಶನಿವಾರ ಸಂಜೆ ʼರಾಜಾರಾಣಿʼ ಫಿನಾಲೆಯಲ್ಲಿ ಕೆಲ ಸ್ಪರ್ಧಿಗಳ ಹೆಸರುಗಳು ರಿವೀಲ್‌ ಆಗಲಿದೆ. ಈ ಸಂದರ್ಭದಲ್ಲಿ ಪ್ರೇಕ್ಷಕರಿಗೆ ವೋಟ್‌ ಮಾಡುವ ಅವಕಾಶವಿರುತ್ತದೆ. ವೋಟಿನ ಆಧಾರದಲ್ಲಿ ಹೆಚ್ಚು ವೋಟ್‌ ಬಂದ ಸ್ಪರ್ಧಿಗಳನ್ನು ನಮ್ಮ ತಂಡ ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕಿಚ್ಚ: ಈ ಬಾರಿ ಶೋವನ್ನು ಕಿಚ್ಚ ಅವರು ನಿರೂಪಣೆ ಮಾಡುತ್ತಾರೋ ಇಲ್ವೋ ಎನ್ನುವುದರ ಬಗ್ಗೆ ಪ್ರಶ್ನೆ ಇತ್ತು. ನಿಮ್ಮ ಮನಸ್ಸಿನಲ್ಲಿ ಶೋ ನಡೆಸಬೇಕೋ ಬೇಡ್ವೋ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಇತ್ತು. ಗಿಮಿಕ್‌ ಮಾಡಿ ನಾನೇನು ಪ್ರೋಮೋ ಮಾಡಬೇಕಾಗಿಲ್ಲ. ಗಿಮಿಕ್‌ ಮಾಡಿಕೊಂಡು ಹೋಗುವವನು ನಾನಲ್ಲ. ಓಪನ್‌ ಆಗಿ ಈ ಬಗ್ಗೆ ನಾನು ಅವರ ಬಳಿ ಹೇಳಿದ್ದೆ. ಬಿಗ್‌ ಬಾಸ್‌ ಒಂದು ಸುಂದರ ವೇದಿಕೆ. ಇದನ್ನು ಜನ ಪ್ರೀತಿಯಿಂದ ನೋಡುತ್ತಾರೆ. ಆದರೆ ಶೋ ಶುರುವಾದ ಬಳಿಕ ನನ್ನ ಲೈಫ್‌ ಸ್ವಲ್ಪ ಮ್ಯೂಟ್‌ ಆಗುತ್ತದೆ. ವಾರಾಂತ್ಯದಲ್ಲಿ ನಾನು ಎಲ್ಲೇ ಇದ್ರು ನಾನು ಸ್ಟುಡಿಯೋಗೆ ಓಡಿ ಬರಬೇಕು. ಹೀಗಾಗಿ ನಾನು ಅವರ ಬಳಿ ನೀವು ಬೇರೆಯವರನ್ನು ನೋಡಿ ಎಂದು ಹೇಳಿದ್ದು ನಿಜ. ಹೀಗೆ ಹೇಳಿದ ಮೇಲೆ ನನ್ನ ಮನೆಗೆ ಕಲರ್ಸ್‌ ನಲ್ಲಿನ ಎಲ್ಲರೂ ಒಪ್ಪಿಸೋಕೆ ಬಂದಿದ್ದರು ಎಂದು ಹೇಳಿದರು.

ಮನೆ ಕೂಡ ಸ್ವರ್ಗ – ನರಕದ ಕಾನ್ಸೆಪ್ಟ್‌ ಆಗಿಯೇ ಇರುತ್ತದೆ ಎಂದು ಕಿಚ್ಚ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಮೊದಲ ದಿನದ  ಕಾರ್ಯಕ್ರಮ ಶೂಟಿಂಗ್‌ ವರೆಗೆ ನಾನು ಸ್ಪರ್ಧಿಗಳ ಹೆಸರನ್ನು ನನ್ನ ಬಳಿ ಹೇಳಬೇಡಿ ಎಂದು ಆಯೋಜಕರ ಬಳಿ ಹೇಳುತ್ತೇನೆ ಎಂದು ಕಿಚ್ಚ ಹೇಳಿದ್ದಾರೆ.

ಓಟಿಟಿ ಸೀಸನ್‌ ಮಾಡುವ ಯಾವುದೇ ಯೋಜನೆ ಸದ್ಯಕ್ಕಿಲ್ಲ. ಆದರೆ ಕೆಲ ಸಮಯದ ಬಳಿ ಮಿನಿ ಸೀಸನ್‌ ನಡೆಸುವ ಯೋಜನೆಯಿದೆ ಎಂದು ಪ್ರೋಗ್ರಾಂ ಹೆಡ್‌ ಪ್ರಶಾಂತ್‌ ಹೇಳಿದ್ದಾರೆ.

ಮೂರು ಹ್ಯಾಷ್‌ ಟ್ಯಾಗ್‌ ರಿವೀಲ್..‌: ಈ ಸಂದರ್ಭದಲ್ಲಿ ಈ ಬಾರಿಯ ಮೂರು ಹೊಸ ಹ್ಯಾಷ್‌ ಟ್ಯಾಗ್‌ ಗಳನ್ನು ರಿವೀಲ್‌ ಮಾಡಲಾಯಿತು. #ಕಲರ್ಸ್‌ ಕನ್ನಡ, #ಬಿಬಿಕೆ11, #ಹೊಸಅಧ್ಯಾಯ ಎನ್ನುವ ಹ್ಯಾಷ್‌ ಟ್ಯಾಗ್‌ ಗಳನ್ನು ರಿವೀಲ್‌ ಮಾಡಲಾಯಿತು.

ಇದೇ ಸೆ.29ರಿಂದ ಬಿಗ್‌ ಬಾಸ್‌ ಶೋ ಆರಂಭಗೊಳ್ಳಲಿದೆ.

ಟಾಪ್ ನ್ಯೂಸ್

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

sanjay-raut

Ajit Pawar-led NCP ಹೊರಹಾಕಲು ಬಿಜೆಪಿ-ಶಿಂಧೆ ಸೇನೆ ಯತ್ನ: ಸಂಜಯ್ ರಾವುತ್

11

Kukke Subrahmanya; ಸರಕಾರದ ವೈಫಲ್ಯ ಬಗ್ಗೆ ಜನಜಾಗೃತಿ; ನಿಖಿಲ್‌ ಕುಮಾರಸ್ವಾಮಿ

Puttur: ಆಂಬ್ಯುಲೆನ್ಸ್-ಪಿಕಪ್ ನಡುವೆ ಢಿಕ್ಕಿ: ಹಸುಳೆಗೆ ಗಾಯ

Puttur: ಆಂಬ್ಯುಲೆನ್ಸ್-ಪಿಕಪ್ ನಡುವೆ ಢಿಕ್ಕಿ: ಹಸುಳೆಗೆ ಗಾಯ

1-udupi

Udupi; ಹೊರರಾಜ್ಯದ ಕಾರ್ಮಿಕರ ತಂಡಗಳ ಬೀದಿ ಕಾಳಗ: ಹಲವರು ವಶಕ್ಕೆ

Rain

Rain: ದ.ಕ.ಜಿಲ್ಲೆಯ ಹಲವೆಡೆ ಮಳೆ; ಸೆ.24ಕ್ಕೆ ಕರಾವಳಿಗೆ ರೆಡ್‌ ಅಲರ್ಟ್‌

1-ravi

Secularism ಯುರೋಪಿಯನ್ ಪರಿಕಲ್ಪನೆ, ಭಾರತದಲ್ಲಿ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

Bigg Boss 18: ಬಿಗ್‌ ಬಾಸ್‌ ಆರಂಭಕ್ಕೆ ಡೇಟ್‌ ಫಿಕ್ಸ್; ನಿರೂಪಣೆಗೆ ರೆಡಿಯಾದ ಸಲ್ಮಾನ್

Bigg Boss 18: ಬಿಗ್‌ ಬಾಸ್‌ ಆರಂಭಕ್ಕೆ ಡೇಟ್‌ ಫಿಕ್ಸ್; ನಿರೂಪಣೆಗೆ ರೆಡಿಯಾದ ಸಲ್ಮಾನ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಚೈತ್ರಾ ಕುಂದಾಪುರ To ಕೆಜಿಎಫ್‌ ಬಾಬು.. ಬಿಗ್‌ ಬಾಸ್‌ ಸ್ಪರ್ಧಿಗಳ ಹೊಸ ಪಟ್ಟಿ ವೈರಲ್

BBK11: ಚೈತ್ರಾ ಕುಂದಾಪುರ To ಕೆಜಿಎಫ್‌ ಬಾಬು.. ಬಿಗ್‌ ಬಾಸ್‌ ಸ್ಪರ್ಧಿಗಳ ಹೊಸ ಪಟ್ಟಿ ವೈರಲ್

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

sanjay-raut

Ajit Pawar-led NCP ಹೊರಹಾಕಲು ಬಿಜೆಪಿ-ಶಿಂಧೆ ಸೇನೆ ಯತ್ನ: ಸಂಜಯ್ ರಾವುತ್

11

Kukke Subrahmanya; ಸರಕಾರದ ವೈಫಲ್ಯ ಬಗ್ಗೆ ಜನಜಾಗೃತಿ; ನಿಖಿಲ್‌ ಕುಮಾರಸ್ವಾಮಿ

accident

Kaup; ಮೂಳೂರು: ಪಾದಯಾತ್ರೆ ಹೋಗುತ್ತಿದ್ದ ಭಕ್ತರಿಗೆ ಕಾರು ಢಿಕ್ಕಿ; ಮೂವರಿಗೆ ಗಾಯ

Puttur: ಆಂಬ್ಯುಲೆನ್ಸ್-ಪಿಕಪ್ ನಡುವೆ ಢಿಕ್ಕಿ: ಹಸುಳೆಗೆ ಗಾಯ

Puttur: ಆಂಬ್ಯುಲೆನ್ಸ್-ಪಿಕಪ್ ನಡುವೆ ಢಿಕ್ಕಿ: ಹಸುಳೆಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.