ಜೋಯಿಡಾ: ಕಾಳಿ ನದಿಯಲ್ಲಿ ರಾಫ್ಟಿಂಗ್-ಜಲಸಾಹಸ ಕ್ರೀಡೆಗೆ ಚಾಲನೆ
Team Udayavani, Sep 23, 2024, 6:17 PM IST
ಉದಯವಾಣಿ ಸಮಾಚಾರ
ಜೋಯಿಡಾ: ತಾಲೂಕಿನ ಇಳವಾ ಗಣೇಶ ಗುಡಿಯಲ್ಲಿ ಮತ್ತೆ ರಾಫ್ಟಿಂಗ್ ಮತ್ತು ಇತರೆ ಜಲ ಸಾಹಸ ಕ್ರೀಡೆಗಳು ಪ್ರಾರಂಭವಾದ ಕಾರಣ ಸಾವಿರಾರು ಯುವಕರಿಗೆ ಮತ್ತೆ ಕೆಲಸ ಸಿಕ್ಕಂತಾಗಿದ್ದು, ಇದರಿಂದಾಗಿ ತಾಲೂಕಿನಲ್ಲಿ ಮತ್ತೆ ಪ್ರವಾಸೋದ್ಯಮ ಚಿಗುರೊಡೆದಿದೆ. ಹೌದು ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮ ಈಗ ಮತ್ತೆ ಪ್ರಾರಂಭವಾಗಿದೆ.
ಜೋಯಿಡಾ ತಾಲೂಕಿನ ಗಣೇಶಗುಡಿ ಇಳವಾದಲ್ಲಿ ನಡೆಯುವ ರಾಫ್ಟಿಂಗ್ ಮತ್ತು ಇತರೆ ಜಲಸಾಹಸ ಕ್ರೀಡೆಗಳಿಂದ ಬಹಳಷ್ಟು ಸ್ಥಳೀಯ ಜನತೆಗೆ ಉದ್ಯಮ ಸಿಗುತ್ತಿದೆ, ಜೋಯಿಡಾ ಹಾಗೂ ದಾಂಡೇಲಿ ತಾಲೂಕಿನ ನಿರುದ್ಯೋಗಿ ಯುವಕರಿಗೆ ಇಲ್ಲಿನ ಪ್ರವಾಸೋದ್ಯಮದಿಂದ ಅನುಕೂಲವಾಗುತ್ತಿದೆ.
ಈ ಹಿಂದೆ ಜೋಯಿಡಾ ಭಾಗದ ಯುವಕರು ಕೆಲಸಕ್ಕಾಗಿ ನೆರೆಯ ಗೋವಾಕ್ಕೆ ತೆರಳುತ್ತಿದ್ದರು. ಆದರೆ ಈಗ ಇಲ್ಲಿಯ ರೆಸಾರ್ಟ್ ಮತ್ತು ಹೋಮ ಸ್ಟೇ ಗಳಲ್ಲಿ ಉದ್ಯೋಗರೆಯುತ್ತಿರುವುದರಿಂದ ಸ್ಥಳೀಯ ಯುವಕರಿಗೆ ಪ್ರವಾಸೋದ್ಯಮ ನೆರವಾಗಿದೆ.
ಜೋಯಿಡಾ – ದಾಂಡೇಲಿ ಇದು ಅವಳಿ ನಗರವಾಗಿದ್ದು ಇಲ್ಲಿರುವ ದಟ್ಟ ಕಾಡಿನಿಂದ ಹಾಗೂ ಕಾಳಿ ನದಿಯಿಂದಾಗಿ ಇಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಮೊದಲು ಹೆಚ್ಚಿನ ಜನರು ವೀಕೆಂಡ್ನಲ್ಲಿ ಪ್ರವಾಸಕ್ಕೆಂದು ಗೋವಾಕ್ಕೆ ತೆರಳುತ್ತಿದ್ದರು. ಆದರೆ ಕಳೆದ ಒಂದೆರಡು ವರ್ಷಗಳಿಂದ ದಾಂಡೇಲಿ- ಜೋಯಿಡಾ ಭಾಗಕ್ಕೆ ಆಗಮಿಸುತ್ತಿದ್ದಾರೆ.
ಇಲ್ಲಿನ ರಾಫ್ಟಿಂಗ್ ಪಾಯಂಟ್ ಹಾಗೂ ಅದ್ಭುತ ರೆಸಾರ್ಟ್ಗಳಿಗೆ ಮತ್ತು ಪ್ರವಾಸಿ ತಾಣ ಸಿಂಥೇರಿ ರಾಕ್ಸ್, ಗಣೇಶಗುಡಿ ಡ್ಯಾಂ, ಕ್ಯಾನೋಪಿ ವಾಕ್ ಹಾಗೂ ಪುರಾಣ ಪ್ರಸಿದ್ಧ ಉಳವಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ.
ಪ್ರವಾಸೋದ್ಯಮಕ್ಕೆ ಜೀವ ತುಂಬಿದ ಜಲಸಾಹಸ ಕ್ರೀಡೆ: ರಾಫ್ಟಿಂಗ್ ಮತ್ತು ಇತರೆ ಜಲಸಾಹಸ ಕ್ರೀಡೆಗಳು ಇಲ್ಲಿನ ಪ್ರವಾಸೋದ್ಯಮಕ್ಕೆ ಜೀವ ತುಂಬಿದೆ. ಕಳೆದ ಎರಡು ತಿಂಗಳಿನಿಂದ ರಾಫ್ಟಿಂಗ್ ಬಂದ್ ಆದ ಕಾರಣ ಈ ಭಾಗದಲ್ಲಿ ಸಂಪೂರ್ಣ ಪ್ರವಾಸೋದ್ಯಮ ಬಂದ್ ಆಗಿತ್ತು, ಸಾಲ ಮಾಡಿ ಹೋಮ್ ಸ್ಟೇ ರೆಸಾರ್ಟ್ ಮಾಡಿದ ಮಾಲಿಕರ ಪರಿಸ್ಥಿತಿ ಗಂಭೀರವಾಗಿತ್ತು. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಶಾಸಕರು ಹಾಗೂ ತಾಲೂಕು ಆಡಳಿತ ಮತ್ತು ಸ್ಥಳೀಯ ಗ್ರಾಪಂ ನೆರವಿನಿಂದ ಮತ್ತೆ ರಾಫ್ಟಿಂಗ್ ಶುರುವಾಗಿರುವುದು ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡಿದೆ.
ರಾಫ್ಟಿಂಗ್ ಮತ್ತು ಇತರೆ ಜಲಸಾಹಸ ಕ್ರೀಡೆಗಳಿಂದಲೇ ಇಲ್ಲಿನ ಪ್ರವಾಸೋದ್ಯಮ ಬೆಳೆದಿದೆ. ಹೆಚ್ಚಿನ ಪ್ರವಾಸಿಗರು ರಾಫ್ಟಿಂಗ್ ಮಾಡಲೆಂದೇ ಇಲ್ಲಿಗೆ ಬರುತ್ತಾರೆ. ದೇಶದಲ್ಲಿ ಅದ್ಭುತವಾಗದ ರಾಫ್ಟಿಂಗ್ ಅನುಭವ ಇಲ್ಲಿ ಪಡೆಯಬಹುದಾಗಿದೆ.
ಸಂಜಯ ನಂದ್ಯಾಳಕರ, ಸುಪಾ ವಾಟರ್
ಎಕ್ಟಿವಿಟಿಸ್ ಮಾಲಿಕರ ಸಂಘದ ಅಧ್ಯಕ್ಷ
ರಾಫ್ಟಿಂಗ್ ಮತ್ತೆ ಶುರುಮಾಡಿದ ಕಾರಣ ಎಲ್ಲಾ ಪ್ರವಾಸೋದ್ಯಮಿಗಳಿಗೆ ಬಹಳಷ್ಟು ಸಂತೋಷವಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಂತಾಗಿದೆ. ಜಿಲ್ಲಾಡಳಿತಕ್ಕೆ ಪ್ರವಾಸೋದ್ಯಮಿಗಳ ಪರವಾಗಿ ಅಭಿನಂದಿಸುತ್ತೇವೆ.
ಅನಿಲ್ ಪಾಕ್ಲೃಕರ, ಪ್ರವಾಸೋದ್ಯಮಿ.
■ ಸಂದೇಶ ದೇಸಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiruru Landslide Tragedy: ಟ್ಯಾಂಕರ್ ಎಂಜಿನ್, ಸ್ಕೂಟಿ ಪತ್ತೆ
Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ
Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ
Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!
Ajit Pawar-led NCP ಹೊರಹಾಕಲು ಬಿಜೆಪಿ-ಶಿಂಧೆ ಸೇನೆ ಯತ್ನ: ಸಂಜಯ್ ರಾವುತ್
Kukke Subrahmanya; ಸರಕಾರದ ವೈಫಲ್ಯ ಬಗ್ಗೆ ಜನಜಾಗೃತಿ; ನಿಖಿಲ್ ಕುಮಾರಸ್ವಾಮಿ
Kaup; ಮೂಳೂರು: ಪಾದಯಾತ್ರೆ ಹೋಗುತ್ತಿದ್ದ ಭಕ್ತರಿಗೆ ಕಾರು ಢಿಕ್ಕಿ; ಮೂವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.