![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 23, 2024, 7:49 PM IST
ಮೂಡಿಗೆರೆ: ನಿಮ್ಮ ಹೃದಯದಲ್ಲಿ ನನ್ನ ಜೀವನದ ನೆನಪು ಮರಣದ ನಂತರವೂ ಸಾವಿರ ಕಾಲ ಇರುವ ರೀತಿ ಬಾಳಿ ಬದುಕಬೇಕು ಎಂದು ಹಿರೇಮಗಳೂರು ಕಣ್ಣನ್ ತಿಳಿಸಿದರು.
ಇಲ್ಲಿನ ಜೆಸಿ ಭವನದಲ್ಲಿ ನಡೆದ ದಿ. ಉಲ್ಲಾಳ ದಯಾನಂದ ನಾಯಕರ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ ಮೇಲಿನ ವಾಕ್ಯ ನಾಯಕರಿಗೆ ಸದಾ ಪ್ರಸ್ತುತ ಹುಟ್ಟಿದಾಗ ಉಸಿರಿರುತ್ತದೆ ನಂತರ ಹೆಸರು ಬರುವುದು ಆ ಹೆಸರು ಚಿರಸ್ಥಾಯಿಯಾಗಿರಬೇಕು ಆದರೆ ಧಾರ್ಮಿಕವಾಗಿ ಇಂದು ಹಬ್ಬ ಹರಿದಿನಗಳಲ್ಲಿ ಸಂತೋಷವಾಗಿ ಕುಣಿಯೋಣ ಬಾರ ಎಂದರೆ. ಕೆಲವರು ಕೆಣಕೋಣ ಬಾರ ಎಂದರೆ, ರಾಜಕೀಯ ನಾಯಕರು ನುಂಗೋಣ ಬಾರ ಎನ್ನುತ್ತಿದ್ದು. ಸಮಾಜ ಕಟ್ಟುವ ಕೈಂಕರ್ಯ ಮರೆತು ಹೋಗಿದೆ. ದೇಶ ಭಕ್ತ, ದೇಶ ಪ್ರೇಮಿ ಎಂಬ ವಾಕ್ಯಗಳೇ ನಾಶವಾಗಿವೆ. ಮನುಷ್ಯನಲ್ಲಿ ಸಮಾಜ ಕಟ್ಟುವ ಸುಗುಣಗಳಿರಬೇಕು. ಮತ್ಸರ ಬಿಟ್ಟು ಸಮಾಜ ಬೆಳೆಸಬೇಕು ಎಂದರು.
ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ ದಯಾನಂದ ನಾಯಕರ ಬಗ್ಗೆ ಮಾತನಾಡುವುದು ಸೂರ್ಯನಿಗೆ ಬೆಟ್ಟು ಮಾಡಿದಷ್ಟು ಸಮ. ವ್ಯಾಪಾರಕ್ಕಾಗಿ ಬಂದವರು. ಅನ್ನಕ್ಕಾಗಿ ಮಾತ್ರ ಉಳಿಸಿಕೊಂಡು ಉಳಿದೆಲ್ಲ ಸಮಾಜಕ್ಕೆ ದಾನ ಮಾಡಿದವರು. ಜೀವನದ ದಾರಿ ಹೇಗೆ ನಡೆಸಬೇಕು ಎಂಬ ಸಂದರ್ಭದಲ್ಲಿ ಸಂಸ್ಕಾರ ನೀಡುವ ಶಿಕ್ಷಣ ಕೊಡಿಸಿದರು. ಸಮಾಜದಲ್ಲಿ ಯುವಕರಲ್ಲಿ ದೇಶಾಭಿಮಾನ ಹುಟ್ಟುವ ಕೆಲಸದ ಜೊತೆಗೆ ಸಿದ್ದಾಂತದಲ್ಲಿ ರಾಜಿ ಆಗದೆ ಜಾತಿ, ಮತ, ಭೇದ ಮೀರಿ ದೇಶಕ್ಕೆ ಏನು ಕೊಡಬೇಕು ಎಂಬ ಮನಸ್ಸಿನ ಯುವ ಪೀಳಿಗೆ ತಯಾರು ಮಾಡಿದರು. ರಾಜಕಾರಣದಲ್ಲಿ ವೈಯಕ್ತಿಕ ಬೇಡವೇ ಬೇಡ ನಿಸ್ವಾರ್ಥವಾಗಿ ಬದುಕೋಣ ಎಂದು ತೋರಿಸಿದರು ಎಂದರು.
ಸ್ವಾರ್ಥಕ್ಕಾಗಿ ಸಮಾಜ ಬಳಸಿಕೊಂಡಿಲ್ಲ:
ಮಾಜಿ ಸಚಿವ ಬಿ.ಎಲ್. ಶಂಕರ್ ಮಾತನಾಡಿ ದಯಾನಂದ ನಾಯಕರು ಸಂಘಟನೆಗಾಗಿ ದುಡಿದವರು, ರಾಜಕೀಯಕ್ಕಾಗಿ ಆಸೆ ಪಟ್ಟವರಲ್ಲ. ಠಾಕ್ರೆ, ಯಡಿಯೂರಪ್ಪ, ವಾಜಪೇಯಿ, ಆಡ್ವಾಣಿಯವರ ಸಂಪರ್ಕವಿದ್ದರೂ ತನಗಾಗಿ ಬಳಸದೆ ಸಮಾಜಕ್ಕಾಗಿ ಬಳಸಿಕೊಂಡವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಘವನ್ನು ನಿಷೇಧಿಸಿದಾಗ ಮೂರು ಬಾರಿ ಸಂಘಟನೆಗಾಗಿ ಜೈಲು ಸೇರಿದ್ದರು. ಎಲ್ಲಾ ಸಂಘಟನೆಯಲ್ಲೂ ಒಳ್ಳೆಯವರು ಇರಬೇಕು ಎನ್ನುವ ಅಭಿಪ್ರಾಯ ನಾಯಕರು ಹೊಂದಿದ್ದರು. ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಹಣ ಮಾಡುವ ಕುತಂತ್ರಿಗಳೇ ತುಂಬಿದ್ದು ಈ ಕ್ಯಾನ್ಸರ್ ಗುಣ ಮಾಡಿದರೆ ಮಾತ್ರ ಸಮಾಜ ಉಳಿಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೀತಾರಾಮ್ ಕೆದಿಲಾಯ, ಕಾಸ ನಿರ್ಮಲ್ ಕುಮಾರ್, ಸುಮತಿ ದಯಾನಂದ ನಾಯಕ್, ಎಂ. ಆರ್. ಜಗದೀಶ್, ಎನ್ಎಲ್ ಸುಂದರೇಶ್ವರ್ ಎಂಜಿ ದಿನೇಶ್, ಕೆಂಜಿಗೆ ಕೇಶವ್, ಪ್ರಶಾಂತ್ ಚಿಪ್ರಗುತ್ತಿ, ದೀಪಕ್ ದೊಡ್ಡಯ್ಯ, ಜೈರಾಮ್ ಬಿದ್ರಹಳ್ಳಿ, ಸುಂದರೇಶ್ ಕೊಣಗೆರೆ, ಮನಮೋಹನ್, ಜಗದೀಪ್, ಸುರೇಶ್ ಮತ್ತಿತರರಿದ್ದರು.
You seem to have an Ad Blocker on.
To continue reading, please turn it off or whitelist Udayavani.