Test: ನ್ಯೂಜಿಲ್ಯಾಂಡ್ ಎದುರು 63 ರನ್ನುಗಳಿಂದ ಗೆದ್ದ ಶ್ರೀಲಂಕಾ
Team Udayavani, Sep 23, 2024, 10:58 PM IST
ಗಾಲೆ: ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ಗಾಲೆ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ 63 ರನ್ನುಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಗೆಲುವಿಗೆ 275 ರನ್ ಗುರಿ ಪಡೆದ ಕಿವೀಸ್, ಅಂತಿಮ ದಿನದಾಟದಲ್ಲಿ 211ಕ್ಕೆ ಸರ್ವಪತನ ಕಂಡಿತು.
4ನೇ ದಿನದ ಅಂತ್ಯಕ್ಕೆ ನ್ಯೂಜಿಲ್ಯಾಂಡ್ 8 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತ್ತು. ರಚಿನ್ ರವೀಂದ್ರ 91 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡ ಕಾರಣ ಫಲಿತಾಂಶ ತೀವ್ರ ಕುತೂಹಲ ಮೂಡಿಸಿತ್ತು. ಆದರೆ ರಚಿನ್ ಸೋಮವಾರದ ಆಟದಲ್ಲಿ ತನ್ನ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ಔಟಾಗುವುದರೊಂದಿಗೆ ಕುತೂಹಲವೆಲ್ಲ ತಣಿಯಿತು (168 ಎಸೆತ, 92 ರನ್, 9 ಬೌಂಡರಿ, 1 ಸಿಕ್ಸರ್).
ಒಟ್ಟು 9 ವಿಕೆಟ್ ಉರುಳಿಸಿದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ದ್ವಿತೀಯ ಟೆಸ್ಟ್ ಸೆ. 26ರಂದು ಇದೇ ಅಂಗಳದಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-305 ಮತ್ತು 309. ನ್ಯೂಜಿಲ್ಯಾಂಡ್-340 ಮತ್ತು 211 (ರಚಿನ್ 92, ವಿಲಿಯಮ್ಸನ್ 30, ಬ್ಲಿಂಡೆಲ್ 30, ಲ್ಯಾಥಂ 28, ಪ್ರಭಾತ್ ಜಯಸೂರ್ಯ 68ಕ್ಕೆ 5, ರಮೇಶ್ ಮೆಂಡಿಸ್ 83ಕ್ಕೆ 3).
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್: ಮೂರನೇ ಸ್ಥಾನಕ್ಕೇರಿದ ಲಂಕಾ
ದುಬಾೖ: ನಿರೀಕ್ಷೆಯಂತೆ ಶ್ರೀಲಂಕಾ- ನ್ಯೂಜಿಲ್ಯಾಂಡ್ ನಡುವಿನ ಗಾಲೆ ಟೆಸ್ಟ್ ಪಂದ್ಯದ ಫಲಿತಾಂಶದ ಬಳಿಕ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಬದಲಾವಣೆ ಸಂಭವಿಸಿದೆ. ಈ ಪಂದ್ಯವನ್ನು ಜಯಿಸಿದ ಶ್ರೀಲಂಕಾ 4ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿದೆ.
2023-25ರ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯ 8 ಟೆಸ್ಟ್ಗಳಲ್ಲಿ ಶ್ರೀಲಂಕಾ ಸಾಧಿಸಿದ 4ನೇ ಜಯ ಇದಾಗಿದೆ. ಅದೀಗ 48 ಅಂಕಗಳೊಂದಿಗೆ 50.00 ಗೆಲುವಿನ ಪ್ರತಿಶತ ದಾಖಲೆ (ಪಿಸಿಟಿ) ಹೊಂದಿದೆ. ಇನ್ನೊಂದೆಡೆ 3ನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್ 4ಕ್ಕೆ ಕುಸಿದಿದೆ (42.86). ಅದು 7 ಟೆಸ್ಟ್ ಗಳಲ್ಲಿ 3ನೇ ಸೋಲನುಭವಿಸಿತು. ಭಾರತ ಅಗ್ರಸ್ಥಾನ ಉಳಿಸಿಕೊಂಡಿದ್ದು (71.67), ಆಸ್ಟ್ರೇಲಿಯ 2ನೇ (62.50) ಸ್ಥಾನಿಯಾಗಿದೆ.
ಶ್ರೀಲಂಕಾಕ್ಕೆ ಫೈನಲ್ ಪ್ರವೇಶ ಸಾಧ್ಯವೇ ಎಂಬುದು ಮುಂದಿನ ಕುತೂಹಲ. ಅದು ನ್ಯೂಜಿಲ್ಯಾಂಡ್ ವಿರುದ್ಧ 2-0, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ಎದುರಿನ ತವರಿನ ಸರಣಿಯ ಎಲ್ಲ ಪಂದ್ಯಗಳನ್ನು ಗೆದ್ದರೆ ಇದು ಸಾಧ್ಯವಾಗಲಿದೆ. ಆಗ 69.23 ಪ್ರತಿಶತ ಗೆಲುವಿನ ಸಾಧನೆಯೊಂದಿಗೆ ಶ್ರೀಲಂಕಾ ಫೈನಲ್ ತಲುಪಲಿದೆ ಎಂಬುದೊಂದು ಲೆಕ್ಕಾಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Shivamogga: ತಿರುಪತಿ ಲಡ್ಡಿಗೆ ಅಪಚಾರ: ಕೂಡಲಿ ಶ್ರೀಗಳಿಂದ 3 ದಿನ ಉಪವಾಸ ವ್ರತ
High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್
High Court: ಕೋರ್ಟ್ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ
Bihar; ಮತ್ತೊಂದು ಸೇತುವೆ ಕುಸಿತ: ನಾಲ್ಕು ತಿಂಗಳಲ್ಲಿ 17ನೇ ಪ್ರಕರಣ
Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.