![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 24, 2024, 6:45 AM IST
ಕುಂದಾಪುರ: ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯ ನಿವಾಸಿ ಕರುಣಾಕರ ಶೆಟ್ಟಿ (72) ಅವರ ಮೃತದೇಹವು ತಲೆ ಬೇರ್ಪಟ್ಟ ಸ್ಥಿತಿಯಲ್ಲಿ ಶನಿವಾರ ಗುಜ್ಜಾಡಿ ಗ್ರಾಮದ ಕಳಿಹಿತ್ಲುವಿನ ಪಂಚಗಂಗಾವಳಿ ಹೊಳೆಯಲ್ಲಿ ಪತ್ತೆಯಾಗಿದ್ದು, ಮೂರು ದಿನ ಕಳೆದರೂ ಇನ್ನೂ ತಲೆ ಮಾತ್ರ ಪತ್ತೆಯಾಗಿಲ್ಲ. ಸೋಮವಾರವೂ ರುಂಡಕ್ಕಾಗಿ ಗಂಗೊಳ್ಳಿ ಠಾಣಾ ಪೊಲೀಸರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯಿತು.
ಗಂಗೊಳ್ಳಿ ಎಸ್ಐ ಹರೀಶ್ ಆರ್. ಮಾರ್ಗದರ್ಶನದಲ್ಲಿ ಸಿಬಂದಿಯ ಸಹಕಾರದೊಂದಿಗೆ ಸ್ಥಳೀಯ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದಲ್ಲಿ ರುಂಡಕ್ಕಾಗಿ ಹುಡುಕಾಟ ನಡೆಯಿತು. ಸೋಮವಾರ ಸ್ಥಳೀಯ ಮೀನುಗಾರರು ಸಹ ಪತ್ತೆ ಕಾರ್ಯದಲ್ಲಿ ಭಾಗಿಯಾದರು. ದೋಣಿಯ ಮೂಲಕ ಶೋಧ ಕಾರ್ಯಾಚರಣೆ ನಡೆದರೂ, ಯಾವುದೇ ಪ್ರಯೋಜನವಾಗಿಲ್ಲ.
ಸಾವಿಗೆ ಕಾರಣ ನಿಗೂಢ: ಕರುಣಾಕರ ಶೆಟ್ಟಿಯವರ ಸಾವಿಗೆ ಕಾರಣ ನಿಗೂಢವಾಗಿದೆ. ಸೆ. 19ರ ರಾತ್ರಿ ನಾಪತ್ತೆಯಾಗಿದ್ದು, ಸೆ. 21ರ ಬೆಳಗ್ಗೆ ಮೃತದೇಹ ಕಳಿಹಿತ್ಲುವಿನ ಹೊಳೆಯಲ್ಲಿ ಪತ್ತೆಯಾಗಿತ್ತು. ಬಂಟ್ವಾಡಿಯ ಸೇತುವೆಯಿಂದ ಕುತ್ತಿಗೆಗೆ ಹಗ್ಗ ಕಟ್ಟಿಕೊಂಡು ಹಾರಿರಬಹುದೇ? ಹಾಗೆ ಹಾರಿದಾಗ ದೇಹ ಹಾಗೂ ತಲೆ ಬೇರ್ಪಟ್ಟಿರಬಹುದೇ? ಅಥವಾ ಯಾರಾದರೂ ಕೊಲೆ ಮಾಡಿ ಹೀಗೆ ನದಿಗೆ ಎಸೆದಿರಬಹುದೇ ಎನ್ನುವ ಸಂಶಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು, ಪೊಲೀಸರ ತನಿಖೆ ಮುಂದುವರಿದಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.