Mangalore-Bangalore Highway:”ಕಾರಿನಲ್ಲಿ ಬೆಂಕಿ ಬರುತ್ತಿದೆ’ ಎಂದು ನಂಬಿಸಿ ದೋಚುವ ತಂಡ
ಮಂಗಳೂರು - ಬೆಂಗಳೂರು ಹೆದ್ದಾರಿಯಲ್ಲಿ ಹೆಚ್ಚು ಸಕ್ರಿಯ
Team Udayavani, Sep 24, 2024, 6:30 AM IST
ಮಂಗಳೂರು: ಮಂಗಳೂರು – ಬೆಂಗಳೂರು ಹೆದ್ದಾರಿಯ ಚೆನ್ನರಾಯಪಟ್ಟಣ, ಮದ್ದೂರು ಮೊದಲಾದ ಕಡೆಗಳಲ್ಲಿ ಕಾರಿನಲ್ಲಿ ಪ್ರಯಾಣಿಸುವವರಿಗೆ ಬೈಕ್ನಲ್ಲಿ ಬರುವರು “ಕಾರಿನ ಚಕ್ರಕ್ಕೆ ಬೆಂಕಿ ಹತ್ತಿಕೊಂಡಿದೆ’ ಎಂದು ಸುಳ್ಳು ಹೇಳಿ ಹಗಲು ದರೋಡೆ ಮಾಡುವ ಪ್ರಕರಣಗಳು ವರದಿಯಾಗುತ್ತಿದೆ.
ಇತ್ತೀಚೆಗೆ ಮಂಗಳೂರು ಮೂಲದ ಅಶೋಕವರ್ಧನ್ ಅವರು ಪತ್ನಿಯೊಂದಿಗೆ ಬೆಂಗಳೂರಿನತ್ತ ಹೋಗುತ್ತಿದ್ದಾಗ ಚೆನ್ನರಾಯಪಟ್ಟಣದ ಬಳಿ ಹಿಂದಿನಿಂದ ಬೈಕ್ನಲ್ಲಿ ಬಂದ ಇಬ್ಬರು ಕಾರಿನ ಮುಂಭಾಗದ ಚಕ್ರದತ್ತ ಕೈ ತೋರಿಸಿ, ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಅಶೋಕ್ವರ್ಧನ್ ಅದನ್ನು ನಿರ್ಲಕ್ಷಿಸಿ ವೇಗ ಹೆಚ್ಚಿಸಿ ಸಾಗಿದ್ದಾರೆ. ಮತ್ತೆ ಎಡಭಾಗದಿಂದ ಬಂದು ಏನೋ ಹೊತ್ತಿ ಹೊಗೆ ಬರುತ್ತಿರುವಂತೆ ಕೈಯಲ್ಲಿ ತೋರಿಸಿದ್ದಾರೆ.
ಕಾರನ್ನು ನಿಲ್ಲಿಸಿದಾಗ ಬೈಕ್ ಸವಾರರು ಕಾರಿನತ್ತ ಬಂದು ಚಕ್ರದಲ್ಲಿ ಹೊಗೆ ಬರುತ್ತಿದೆ ಎಂದು ಹೇಳಿದ್ದಾರೆ. ಎಂಜಿನ್ ಒಳಗೆ ಏನೋ ಆಗಿರಬೇಕು “ಬಾನೆಟ್ ಎತ್ತಿ’ ಎಂದು ಹೇಳಿದ್ದಾರೆ. ಅಶೋಕ್ವರ್ಧನ್ ಅವರಿಗೆ ಈ ಹಿಂದೆ ಇಂತಹುದೇ ಘಟನೆ ನಡೆದುದರ ಬಗ್ಗೆ ಅರಿವಿದ್ದ ಕಾರಣ, ಹಾಗೇನೂ ಇಲ್ಲ ಎಂದು ಹೇಳಿ ಕಾರಿನಲ್ಲಿ ಬೆಂಗಳೂರಿನತ್ತ ಹೊರಟು ದರೋಡೆಯರಿಂದ ಬಚಾವಾಗಿದ್ದಾರೆ. ಘಟನೆ ಬಗ್ಗೆ ಅಶೋಕ ವರ್ಧನ್ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಇದೇ ರೀತಿಯ ಎರಡು ಘಟನೆಗಳು ಕರಾವಳಿಯ ಇನ್ನಿಬ್ಬರಿಗೆ ಆಗಿದೆ. ಬೈಕ್ನಲ್ಲಿ ಬಂದ ಸವಾರರು ಹೇಳಿದ್ದನ್ನು ನಿಜವೆಂದು ನಂಬಿ ಒಬ್ಬರು 7 ಸಾ. ರೂ. ಮತ್ತು ಇನ್ನೊಬ್ಬರು 27 ಸಾ. ರೂ. ಕಳೆದುಕೊಂಡಿದ್ದಾರೆ.
ಇಂತಹ ವಂಚಕರ ಜಾಲ ಹೆದ್ದಾರಿಯಲ್ಲಿ ಸಕ್ರಿಯವಾಗಿದ್ದು, ಹೆದ್ದಾರಿಯಲ್ಲಿ ಸಾಗುವಾಗ ಜನ ಸಂದಣಿ ಇರದ ಪ್ರದೇಶದಲ್ಲಿ ಈ ರೀತಿ ಹೇಳಿಕೊಂಡು ಬರುತ್ತಾರೆ. ಅವರನ್ನು ನಿರ್ಲಕ್ಷಿಸಿ ಬಿಡಬೇಕು. ಜನರು ಇರುವ ಕಡೆಯಲ್ಲಿ ಕಾರು ನಿಲ್ಲಿಸಿ ಪರೀಕ್ಷಿಸಿ ಮುಂದುವರಿಯಬಹುದು. ಅವರು ಹೇಳಿದಂತೆ ಕಾರಿನ ಬಾನೆಟ್ ತೆಗೆದರೆ ರಾಳ, ಕರ್ಪೂರ ಇತ್ಯಾದಿಗಳನ್ನು ಬಳಸಿ ಬಾನೆಟ್ ಒಳಗಿನಿಂದ ಬೆಂಕಿ ಬರುವಂತೆ ಮಾಡುತ್ತಾರೆ. ಇಂಜಿನ್ನ ಯಾವುದೋ ಭಾಗ ಸುಟ್ಟ ಹೋಗಿದೆ. ತಾನು ಮೆಕಾನಿಕ್, ತನ್ನ ಬಳಿ ಬಿಡಿ ಭಾಗ ಇದೆ ಎಂದು ಹೇಳಿ ಸಿಕ್ಕಿಸಿ ಸಾವಿರಾರು ರೂ. ವಸೂಲಿ ಮಾಡುತ್ತಾರೆ. ಇಂತಹವರ ವಿರುದ್ಧ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಅಶೋಕ್ವರ್ಧನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಅಂತಾರಾಷ್ಟ್ರೀಯ ಪಂಜ ಕುಸ್ತಿ:ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!
Vijayapura: ಜಲಾವೃತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೂಬಾಲನ್ ಭೇಟಿ, ಪರಿಶೀಲನೆ
Gangavathi: ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಮಾರಾಮಾರಿ… ಓರ್ವನಿಗೆ ಚಾಕು ಇರಿತ
Vijayapura: ಜಿಲ್ಲೆಯಲ್ಲಿ 5 ಗಂಟೆಗೂ ಅಧಿಕ ಕಾಲ ಸುರಿದ ಮಳೆ… ತುಂಬಿ ಹರಿದ ಹಳ್ಳ-ಕೊಳ್ಳಗಳು
Aranthodu : ಸ್ಕೂಟಿ- ಕಂಟೈನರ್ ನಡುವೆ ಭೀಕರ ಅಪಘಾತ… ಸ್ಕೂಟಿ ಸವಾರ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.