Karnataka: ಇನ್ನು ಮುಂದೆ ಶನಿವಾರ, ರವಿವಾರವೂ ಉಪನೋಂದಣಿ ಕಚೇರಿ ಕಾರ್ಯಾಚರಣೆ !
ಅ. 21ರಿಂದ ಹೊಸ ವೇಳಾಪಟ್ಟಿ ಅನ್ವಯ; ವಾರಾಂತ್ಯದಲ್ಲೂ ನೋಂದಣಿ ಸೌಲಭ್ಯ
Team Udayavani, Sep 24, 2024, 7:10 AM IST
ಬೆಂಗಳೂರು: ಮುಂದಿನ ತಿಂಗಳು ಅಂದರೆ, ಅ. 21ರ ಅನಂತರದ ಎಲ್ಲ ಶನಿವಾರ, ರವಿವಾರಗಳಂದು ಕೂಡ ರಾಜ್ಯದ 35 ಉಪ ನೋಂದಣಾಧಿಕಾರಿ ಕಚೇರಿಗಳು ತೆರೆದಿರಲಿದ್ದು, ಆ ಕಚೇರಿಗಳಿಗೆ ಮಂಗಳವಾರ ರಜೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
“ಎನಿವೇರ್ ರಿಜಿಸ್ಟ್ರೇಶನ್’ ಯಶಸ್ವಿಯಾಗಿ ನಡೆಯುತ್ತಿದೆ. ಇದರ ನಡುವೆ ವಾರಾಂತ್ಯ ದಲ್ಲೂ ನೋಂದಣಿಗೆ ಅವಕಾಶ ನೀಡಬೇಕೆಂದು ದುಡಿಯುವ ವರ್ಗದಿಂದ ಬೇಡಿಕೆ ಬಂದಿದೆ ಎಂದು ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಅನೇಕರು ಹೊರರಾಜ್ಯಗಳಲ್ಲೂ ಉದ್ಯೋಗದಲ್ಲಿದ್ದು, ವಾರಾಂತ್ಯಗಳಲ್ಲಿ ನೋಂದಣಿ ಪ್ರಕ್ರಿಯೆಗೆ ಅವಕಾಶ ಇದ್ದರೆ ಅನುಕೂಲಕರ ಎಂಬ ಸಲಹೆಗಳು ಬಂದಿದ್ದವು. ದುಡಿಯುವ ವರ್ಗಕ್ಕೆ ಅನುಕೂಲವಾಗಲೆಂದು ಇನ್ನು ಮುಂದೆ 2 ಮತ್ತು 4ನೇ ಶನಿವಾರ ಹಾಗೂ ಎಲ್ಲ ರವಿವಾರಗಳಂದು ಕೂಡ ಜಿಲ್ಲೆಗೊಂದು ಉಪನೋಂದಣಾಧಿಕಾರಿ ಕಚೇರಿಯನ್ನು ತೆರೆದಿರಲು ನಿರ್ಧರಿಸಲಾಗಿದೆ ಎಂದರು.
ಯಾವ ಉಪನೋಂದಣಾಧಿಕಾರಿ ಕಚೇರಿ ಯಾವ ದಿನ ತೆರೆದಿರಲಿದೆ ಎಂಬ ಮಾಹಿತಿಯನ್ನು ಮೊದಲೇ ನೀಡಲಾಗಿರುತ್ತದೆ. ಅಂದು ಅವಕಾಶ ಇದ್ದರೆ ಮಾಡಿಸಿಕೊಳ್ಳಬಹುದು. ಇಲ್ಲದಿದ್ದರೆ ಅನುಕೂಲ ಆದ ದಿನ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಶೀಘ್ರದಲ್ಲೇ ಪೌತಿ ಖಾತೆ ಆಂದೋಲನ
ರಾಜ್ಯದಲ್ಲಿ 48 ಲಕ್ಷ ಕೃಷಿ ಭೂಮಿಗಳು ತೀರಿ ಹೋದವರ ಹೆಸರಿನಲ್ಲೇ ಇಂದಿಗೂ ಇದ್ದು, ಇವುಗಳನ್ನು ಅವರ ಮಕ್ಕಳು ಅಥವಾ ವಾರಸುದಾರರ ಹೆಸರಿಗೆ ಮಾಡಿಕೊಳ್ಳಲು ಅವಕಾಶ ಕೊಡಲಾಗುತ್ತಿದೆ. ಎಲ್ಲರೂ ತಮ್ಮ ಜಮೀನುಗಳ ಪಹಣಿ (ಆರ್ಟಿಸಿ)ಗೆ ಆಧಾರ್ ವಿಲೀನ ಮಾಡಬೇಕೆಂದು ಈಗಾಗಲೇ ತಿಳಿಸಲಾಗಿದೆ. ಕುಟುಂಬ ಸದಸ್ಯರ ನಡುವೆ ವಿವಾದ ಇದ್ದರೆ ಅದನ್ನು ಅವರೇ ಬಗೆಹರಿಸಿಕೊಳ್ಳಬೇಕು ಇಲ್ಲವೇ ಪೌತಿ ಖಾತೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಶೀಘ್ರದಲ್ಲೇ ಹೋಬಳಿ ಅಥವಾ ಗ್ರಾಮ ಲೆಕ್ಕಿಗರ ವ್ಯಾಪ್ತಿಯಲ್ಲಿ ಪೌತಿ ಆಂದೋಲನ ನಡೆಸಲಾಗುತ್ತದೆ. ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಸೇವಕರ ಮೂಲಕ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು
Female Staff: ಇನ್ನು ರಾತ್ರಿ ಪಾಳಿ ವೈದ್ಯೆ ಜತೆ ಮಹಿಳಾ ಸಿಬಂದಿ ಕಡ್ಡಾಯಕ್ಕೆ ಆದೇಶ
Vijayapura: ಜಲಾವೃತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೂಬಾಲನ್ ಭೇಟಿ, ಪರಿಶೀಲನೆ
Gangavathi: ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಮಾರಾಮಾರಿ… ಓರ್ವನಿಗೆ ಚಾಕು ಇರಿತ
Vijayapura: ಜಿಲ್ಲೆಯಲ್ಲಿ 5 ಗಂಟೆಗೂ ಅಧಿಕ ಕಾಲ ಸುರಿದ ಮಳೆ… ತುಂಬಿ ಹರಿದ ಹಳ್ಳ-ಕೊಳ್ಳಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
City Lights Kannada Movie: ವಿಜಯ್ ‘ಸಿಟಿ ಲೈಟ್ಸ್’ಗೆ ವಿನಯ್ ಹೀರೋ
Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು
Arrested: ವಿಲ್ಲಾಗಳಿಗೆ ರಾತ್ರಿ ಕನ್ನ ಹಾಕುತ್ತಿದ್ದ ತ್ರಿಪುರ ಯುವಕ
Gangolli: ಅರಾಟೆ ಸೇತುವೆ ಬಳಿ ನಿಲ್ಲಿಸಿದ್ದ ಕಾರಿಗೆ ಬಸ್ ಡಿಕ್ಕಿ; ಕಾರು ಚಾಲಕ ಮೃತ್ಯು
House arrest: 10 ದಿನ ಹೌಸ್ ಅರೆಸ್ಟ್ ಮಾಡಿ 30 ಲಕ್ಷ ರೂ. ಸುಲಿಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.