Fish: ಬಂಗುಡೆಗೆ ಬರ; ಮತ್ಸ್ಯೋದ್ಯಮಕ್ಕೆ ಹೊಡೆತ; 2 ತಿಂಗಳಾದರೂ ಸುಧಾರಣೆ ಇಲ್ಲ

ಹೇರಳವಾಗಿ ಸಿಗುತ್ತಿದ್ದ ಬಂಗುಡೆ ಈಗ ಬಲೆಗೆ ಬೀಳುತ್ತಿಲ್ಲ

Team Udayavani, Sep 24, 2024, 7:10 AM IST

Fish: ಬಂಗುಡೆಗೆ ಬರ; ಮತ್ಸ್ಯೋದ್ಯಮಕ್ಕೆ ಹೊಡೆತ; 2 ತಿಂಗಳಾದರೂ ಸುಧಾರಣೆ ಇಲ್ಲ

ಕುಂದಾಪುರ: ಸಮುದ್ರದಲ್ಲಿ ರಾಶಿ ರಾಶಿ ಸಿಗುತ್ತಿದ್ದ ಬಂಗುಡೆ (ಮ್ಯಾಕರೆಲ್‌) ಮೀನಿಗೆ ಈಗ ಬರ ಬಂದಿದೆ. ಹೌದು, ಬಹು ವರ್ಷಗಳಿಂದ ಆಳ ಸಮುದ್ರದಲ್ಲಿ ಬೋಟುಗಳಿಗೆ ಹೇರಳವಾಗಿ ಸಿಗುತ್ತಿದ್ದ ಬಂಗುಡೆ ಈಗ ಅಷ್ಟು ಸಿಗುತ್ತಿಲ್ಲ. ಇದು ಕರಾವಳಿಯ ಮತ್ಸ್ಯೋದ್ಯಮಕ್ಕೆ ಬಹು ದೊಡ್ಡ ಹೊಡೆತ ನೀಡಿದೆ.

ಕರಾವಳಿಯ ಮೀನುಗಾರರಿಗೆ ಬೂತಾಯಿ, ಬಂಗುಡೆಗಳೇ ಹೆಚ್ಚಾಗಿ ದೊರಕುತ್ತಿದ್ದು, ಲಾಭ ತಂದುಕೊಡುತ್ತವೆ. ಆದರೆ ಕೆಲವು ವರ್ಷಗಳಿಂದ ಬೂತಾಯಿ ಕಡಿಮೆಯಾಗಿದ್ದು, ಈ ವರ್ಷ ಬಂಗುಡೆಯೂ ಸಿಗುತ್ತಿಲ್ಲ. ಇದೇ ಮೊದಲ ಬಾರಿಗೆ ಬಂಗುಡೆ ಇಷ್ಟು ಕಡಿಮೆ ಸಿಗುತ್ತಿದ್ದು, ನಿರ್ದಿಷ್ಟ ಕಾರಣ ಏನು ಎಂದು ಗೊತ್ತಾಗುತ್ತಿಲ್ಲ ಎನ್ನುವುದು ಮೀನುಗಾರರ ಅಭಿಪ್ರಾಯ.

ಬಂಗುಡೆ ಸಿಗದಿದ್ದರೆ ನಷ್ಟ
ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಮೀನುಗಳಲ್ಲಿ ಬಂಗುಡೆಗೆ ಅಗ್ರಸ್ಥಾನ. ಮಾರುಕಟ್ಟೆ ಮಾತ್ರವಲ್ಲ, ಮೀನಿನ ಕಾರ್ಖಾನೆ, ರಫ್ತಿನಲ್ಲೂ ಬಂಗುಡೆ ಮೀನಿಗೆ ಭಾರೀ ಬೇಡಿಕೆ ಇರುತ್ತದೆ. ಅಂಜಲ್‌, ಪಾಂಫ್ರೆಟ್‌ನಂತಹ ಮೀನುಗಳು ಸಿಕ್ಕಿದರೂ ಅವು ದುಬಾರಿ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಖರೀದಿಗೆ ಮುಂದಾಗುವುದಿಲ್ಲ. ಫಿಶ್‌ ಮೀಲ್‌ಗ‌ೂ ಅವು ಅಷ್ಟಾಗಿ ರವಾನೆಯಾಗುವುದಿಲ್ಲ. ಹೀಗಾಗಿ ಬೋಟುಗಳಿಗೆ ಬಂಗುಡೆ ಸಿಕ್ಕಿದರೆ ಮಾತ್ರ ಹೆಚ್ಚು ಲಾಭ. ಆದರೆ ಈ ವರ್ಷ ಬಂಗುಡೆ ಅಷ್ಟಾಗಿ ಲಭಿಸುತ್ತಲೇ ಇಲ್ಲ. ಉತ್ತರ ಕನ್ನಡಕ್ಕೆ ಇಲ್ಲಿಂದ ಪ್ರತೀ ದಿನ 20-30 ಕಂಟೈನರ್‌ಗಳಷ್ಟು ಬಂಗುಡೆ ಮೀನು ರವಾನೆಯಾಗುತ್ತಿತ್ತು. ಆದರೆ ಈ ವರ್ಷ ಒಂದೆರಡು ಕಂಟೈನರ್‌ಗಳಷ್ಟೇ ಹೋಗುತ್ತಿವೆ. ಬುಲ್‌ಟ್ರಾಲ್‌, ಲೈಟ್‌ ಫಿಶಿಂಗ್‌ನಿಂದಾಗಿಯೂ ಬಂಗುಡೆ ಕಡಿಮೆಯಾಗುತ್ತಿದೆ. ಬಂಗುಡೆ ಸಿಗದಿದ್ದರೆ ಬಹಳ ಕಷ್ಟ ಎನ್ನುತ್ತಾರೆ ಉತ್ತರ ಕರ್ನಾಟಕದ ಮೀನುಗಾರ ಮುಖಂಡ ಮಹೇಶ್‌.

ಖರ್ಚು ಹುಟ್ಟುತ್ತಿಲ್ಲ
ಗಂಗೊಳ್ಳಿ, ಮಲ್ಪೆ, ಮಂಗಳೂರು ಬಂದರುಗಳಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬಹುತೇಕ ಪರ್ಸಿನ್‌ ಬೋಟುಗಳು ಬಂಗುಡೆ ಸಹಿತ ಹೆಚ್ಚಿನ ಮೀನು ಸಿಗದೆ ವಾಪಸ್‌ ಆಗುತ್ತಿರುವುದು ಕಂಡುಬರುತ್ತಿದೆ. ಟ್ರಾಲ್‌ ಬೋಟುಗಳಿಗೂ ಅಷ್ಟೊಂದು ಮೀನು ಸಿಗುತ್ತಿಲ್ಲ. ಒಂದು ಪರ್ಸಿನ್‌ ಬೋಟು ಕಡಲಿಗೆ ಇಳಿದರೆ ದಿನಕ್ಕೆ 300 400 ಲೀ. ಡೀಸೆಲ್‌ ಬೇಕು, 30 ಜನ ಮೀನುಗಾರರು ಇರುತ್ತಾರೆ. ಒಟ್ಟಾರೆ ಕನಿಷ್ಠ 40 50 ಸಾವಿರ ರೂ. ಖರ್ಚಿದೆ. ಆದರೆ ಈಗ ಸಿಗುತ್ತಿರುವ ಮೀನಿನಿಂದ ಖರ್ಚು ಹುಟ್ಟುತ್ತಿಲ್ಲ ಅನ್ನುವುದು ಮೀನುಗಾರರ ಅಳಲು.

ದರವೂ ದುಬಾರಿ
ಮತ್ಸ್ಯಕ್ಷಾಮದಿಂದಾಗಿ ಬೇಡಿಕೆಯಷ್ಟು ಮೀನು ಮಾರುಕಟ್ಟೆಗೆ ಬರುತ್ತಿಲ್ಲ. ಹಾಗಾಗಿ ಇರುವ ಮೀನಿಗೂ ಭಾರೀ ಬೇಡಿಕೆ ಇದ್ದು, ದರ ದುಬಾರಿಯಾಗಿದೆ. ಬಂಗುಡೆ ಕೆ.ಜಿ.ಗೆ 250 – 300 ರೂ., ಬೂತಾಯಿ 150-200 ರೂ., ಅಂಜಲ್‌ 500 -700 ರೂ., ಪಾಂಫ್ರೆಟ್‌ 800- 900 ರೂ., ಕಾಣೆ (ಕಂಡಿಗೆ) 750 – 800 ರೂ., ಬಿಳಿ ಮೀನು 250 ರೂ. ದರದಲ್ಲಿ ಮಾರಾಟವಾಗುತ್ತಿದೆ.

ಸಮುದ್ರದಲ್ಲಿ ಈಗ ವಾತಾವರಣ ಸ್ಥಿರವಾಗಿಲ್ಲ. ಗಾಳಿಯ ತೀವ್ರತೆ, ಅಲೆಗಳ ಏರಿಳಿತ ಹೆಚ್ಚಿದೆ. ಹಾಗಾಗಿ ಬಂಗುಡೆ ಮೀನು ಆಳ ಸಮುದ್ರದಲ್ಲಿ ಬಹು ದೂರಕ್ಕೆ ಹೋಗಿರಬಹುದು. ಪರಿಸ್ಥಿತಿ ಸುಧಾರಿಸಬಹುದು. ವಾತಾವರಣ ಸ್ಥಿರಗೊಂಡಾಗ ಮತ್ತೆ ಬಂಗುಡೆ ಸಿಗಬಹುದು. ಮೀನುಗಾರರಿಗೆ ಆತಂಕ ಬೇಡ, ಒಳ್ಳೆಯ ಮೀನುಗಾರಿಕೆ ಆಗಬಹುದು. ಕಳೆದ ವರ್ಷವೂ ಆಗಸ್ಟ್‌ನಲ್ಲಿ ಹೀಗೆ ಮತ್ಸ್ಯಕ್ಷಾಮ ಉಂಟಾಗಿತ್ತು, ಬಳಿಕ ಚೇತರಿಕೆ ಕಂಡಿತ್ತು.
-ಡಾ| ಶಿವಕುಮಾರ ಹರಗಿ, ಸಹಾಯಕ ಪ್ರಾಧ್ಯಾಪಕ, ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರ, ಕಾರವಾರ

ಬಂಗುಡೆ ಈ ವರ್ಷದಷ್ಟು ಕಡಿಮೆ ಪ್ರಮಾಣದಲ್ಲಿ ಬೇರೆ ಯಾವ ವರ್ಷವೂ ಸಿಕ್ಕಿಲ್ಲ. ಇದರಿಂದ ಮೀನುಗಾರಿಕೆಗೆ ಭಾರೀ ಹೊಡೆತ ಬಿದ್ದಿದೆ. ಇಷ್ಟು ವರ್ಷ ಈ ರೀತಿ ಆದದ್ದಿಲ್ಲ. ಬಂಗುಡೆ ಹೆಚ್ಚು ಸಿಕ್ಕಿದಷ್ಟು ಮತೊÕéàದ್ಯಮಕ್ಕೆ ಒಳ್ಳೆಯದು. ಬೂತಾಯಿಯೂ ಸಣ್ಣ ಗಾತ್ರದ್ದು ಮಾತ್ರ ಸಿಗುತ್ತಿವೆ. ಈ ಎರಡು ತಿಂಗಗಳುಗಳಲ್ಲಿ ಅಷ್ಟೊಂದು ಮೀನುಗಾರಿಕೆ ನಡೆದಿಲ್ಲ. ಇವು ಮೀನುಗಾರರಿಗೆ ಸಂಕಷ್ಟದ ದಿನಗಳು.
-ರಮೇಶ್‌ ಕುಂದರ್‌ ಗಂಗೊಳ್ಳಿ, ಮೀನುಗಾರ ಮುಖಂಡರು

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೀನು ಲಭ್ಯತೆ ತೀರಾ ಕಡಿಮೆಯಾಗಿದೆ. ಉತ್ತಮ ಗಾತ್ರದ ಬಂಗುಡೆ ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಸಿಗುವುದೇ ಅಪರೂಪ ಎಂಬಂತಾಗಿದೆ. ಹವಾಮಾನ ಬದಲಾವಣೆ ಮತ್ತು ಮೀನಿನ ವಲಸೆಯೂ ಇದಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.
-ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

-  ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು

Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು

2

Gangolli: ಅರಾಟೆ ಸೇತುವೆ ಬಳಿ ನಿಲ್ಲಿಸಿದ್ದ ಕಾರಿಗೆ ಬಸ್‌ ಡಿಕ್ಕಿ; ಕಾರು ಚಾಲಕ ಮೃತ್ಯು

House arrest: 10 ದಿನ ಹೌಸ್‌ ಅರೆಸ್ಟ್‌ ಮಾಡಿ 30 ಲಕ್ಷ ರೂ. ಸುಲಿಗೆ!

House arrest: 10 ದಿನ ಹೌಸ್‌ ಅರೆಸ್ಟ್‌ ಮಾಡಿ 30 ಲಕ್ಷ ರೂ. ಸುಲಿಗೆ!

Female Staff: ಇನ್ನು ರಾತ್ರಿ ಪಾಳಿ ವೈದ್ಯೆ ಜತೆ ಮಹಿಳಾ ಸಿಬಂದಿ ಕಡ್ಡಾಯಕ್ಕೆ ಆದೇಶ

Female Staff: ಇನ್ನು ರಾತ್ರಿ ಪಾಳಿ ವೈದ್ಯೆ ಜತೆ ಮಹಿಳಾ ಸಿಬಂದಿ ಕಡ್ಡಾಯಕ್ಕೆ ಆದೇಶ

ಅಂತಾರಾಷ್ಟ್ರೀಯ ಪಂಜ ಕುಸ್ತಿ:ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

ಅಂತಾರಾಷ್ಟ್ರೀಯ ಪಂಜ ಕುಸ್ತಿ:ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

Vijayapura: ಜಲಾವೃತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೂಬಾಲನ್ ಭೇಟಿ, ಪರಿಶೀಲನೆ

Vijayapura: ಜಲಾವೃತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೂಬಾಲನ್ ಭೇಟಿ, ಪರಿಶೀಲನೆ

Gangavathi: ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಮಾರಾಮಾರಿ… ಓರ್ವನಿಗೆ ಚಾಕು ಇರಿತ

Gangavathi: ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಮಾರಾಮಾರಿ… ಓರ್ವನಿಗೆ ಚಾಕು ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂತಾರಾಷ್ಟ್ರೀಯ ಪಂಜ ಕುಸ್ತಿ:ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

ಅಂತಾರಾಷ್ಟ್ರೀಯ ಪಂಜ ಕುಸ್ತಿ:ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

5

City Lights Kannada Movie: ವಿಜಯ್‌ ‘ಸಿಟಿ ಲೈಟ್ಸ್‌’ಗೆ ವಿನಯ್‌ ಹೀರೋ

Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು

Tragedy: ಗಣೇಶನ ಮೂರ್ತಿ ವಿಸರ್ಜಿಸಿ ಬರುವಾಗ ರಸ್ತೆ ಅಪಘಾತ… ಯುವಕ ಮೃತ್ಯು

4

Arrested: ವಿಲ್ಲಾಗಳಿಗೆ ರಾತ್ರಿ ಕನ್ನ ಹಾಕುತ್ತಿದ್ದ ತ್ರಿಪುರ ಯುವಕ

2

Gangolli: ಅರಾಟೆ ಸೇತುವೆ ಬಳಿ ನಿಲ್ಲಿಸಿದ್ದ ಕಾರಿಗೆ ಬಸ್‌ ಡಿಕ್ಕಿ; ಕಾರು ಚಾಲಕ ಮೃತ್ಯು

House arrest: 10 ದಿನ ಹೌಸ್‌ ಅರೆಸ್ಟ್‌ ಮಾಡಿ 30 ಲಕ್ಷ ರೂ. ಸುಲಿಗೆ!

House arrest: 10 ದಿನ ಹೌಸ್‌ ಅರೆಸ್ಟ್‌ ಮಾಡಿ 30 ಲಕ್ಷ ರೂ. ಸುಲಿಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.