Karkala: ಒಳಚರಂಡಿ ಅಲ್ಲ ಹೊರ ಚರಂಡಿಯಾಗಿಬಿಟ್ಟಿದೆ!
Team Udayavani, Sep 24, 2024, 3:25 PM IST
ನಗರದಲ್ಲಿ ಸಂಗ್ರಹಗೊಂಡಿರುವ ಒಳಚರಂಡಿ ಕೊಳಚೆ ನೀರು
ಕಾರ್ಕಳ: ಕಾರ್ಕಳ ಪುರಸಭೆಯ ನೂತನ ಆಡಳಿತದ ಮುಂದೆ ಹಲವು ಸವಾಲುಗಳಿವೆ. ಅದರಲ್ಲಿ ಮೊದಲ ಪಂಕ್ತಿಯಲ್ಲಿ ಕಾಣುವುದು ನಗರದ ಒಳಚರಂಡಿ ಸಮಸ್ಯೆಯ ಶಾಶ್ವತ ನಿವಾರಣೆ.
ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇದೆ. ಆದರೆ, ಅದು ಒಳಚರಂಡಿಯಾಗಿ ಉಳಿದಿಲ್ಲ. ಬದಲಾಗಿ ಹೊರಚರಂಡಿಯಾಗಿ ಹರಿಯುತ್ತಿದೆ. ನಗರದ ಎಲ್ಲೆಂದರಲ್ಲಿ ತ್ಯಾಜ್ಯ ನೀರು ಸೋರಿಕೆಯಿಂದಾಗಿ ಗಬ್ಬೆದ್ದು ಹೋಗಿದೆ. ನಗರ ನೈರ್ಮಲ್ಯ, ಆರೋಗ್ಯ ದೃಷ್ಟಿಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕಾಗಿದೆ. ಜನರ ನಿರೀಕ್ಷೆಯೂ ಇದೇ ಆಗಿದೆ.
ಮ್ಯಾನ್ ಹೋಲ್ಗಳು ದುರಸ್ತಿಯಲ್ಲಿ
ಪುರಸಭೆ ವ್ಯಾಪ್ತಿಯಲ್ಲಿ 13 ಕೋ.ರೂ ವೆಚ್ಚದ ಒಳಚರಂಡಿ ವ್ಯವಸ್ಥೆ ಜಾರಿಯಲ್ಲಿದೆ. ಪ್ರಮುಖವಾಗಿ ಮೂರು ಮಾರ್ಗದಿಂದ ವೆಂಕಟರಮಣ ದೇವಸ್ಥಾನ, ಮುಂದೆ ಸಾಲ್ಮರ, ಬಂಡಿಮಠದ, ಆನೆಕೆರೆ, ಕಾಬೆಟ್ಟು ಮುಂತಾದ ಪ್ರದೇಶಗಳಲ್ಲಿ ಹಾದು ಹೋದ ಪೈಪ್ ಲೈನ್ಗಳ ಮಾರ್ಗದಲ್ಲಿ ತ್ಯಾಜ್ಯ ನೀರು ಸೋರಿಕೆಯಾಗುತ್ತಿದೆ.
ನಗರದಲ್ಲಿ ಸುಮಾರು 100ಕ್ಕೂ ಅಧಿಕ ಮ್ಯಾನ್ಹೋಲ್ಗಳಿವೆ. ಅವುಗಳು ದುಸ್ತಿಯಲ್ಲಿವೆ. ಹೀಗಾಗಿ ಒಳಚರಂಡಿಯಲ್ಲಿ ತ್ಯಾಜ್ಯ ಸರಾಗವಾಗಿ ಹರಿಯದಂತಾಗಿದೆ. ಮಳೆಗಾಲ, ಬೇಸಗೆ ಎರಡೂ ಅವಧಿಯಲ್ಲಿ ಇಲ್ಲಿನ ಪ್ರಮುಖ ರಸ್ತೆ ಸಹಿತ ವಿವಿಧೆಡೆ ತ್ಯಾಜ್ಯ ನೀರು ಸೋರಿಕೆಯಾಗುತ್ತಿರುತ್ತದೆ. ಅಲ್ಲಲ್ಲಿ ಮಲೀನ ನೀರು ಸಂಗ್ರಹವಾಗುತ್ತಿರುತ್ತದೆ. ಇದರಿಂದ ನಗರದ ನಿವಾಸಿಗಳು, ವ್ಯಾಪಾರಿಗಳು, ಪಾದಚಾರಿಗಳು, ನಾಗರಿಕರು, ಶಾಲಾ ಮಕ್ಕಳು ಹೀಗೆ ಎಲ್ಲರೂ ತೊಂದರೆ ಅನುಭವಿಸುತ್ತಿರುತ್ತಾರೆ.
ಏನೇನು ಸಮಸ್ಯೆ?
- ಅಲ್ಲಲ್ಲಿ ಮ್ಯಾನ್ಹೋಲ್ಗಳು ಬ್ಲಾಕ್ ಆಗಿ ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದೆ.
- ಮಳೆಗಾಲದಲ್ಲಿ ಕೊಳಚೆ ನೀರು ಮಳೆ ನೀರಿನ ಜತೆ ಸೇರಿ ರಸ್ತೆ, ಆಸುಪಾಸಿನ ಸ್ಥಳಗಳಲ್ಲಿ ಸಂಗ್ರಹವಾಗುತ್ತದೆ.
- ಸೋರಿಕೆಯಾದ ಮಲೀನ ನೀರು ನಗರ ನಿವಾಸಿಗಳ ಬಾವಿಗೆ ಸೇರಿ ಬಾವಿಯಲ್ಲಿನ ನೀರು ಕಲುಷಿತಗೊಳ್ಳುತ್ತದೆ.
- ನೀರಿನ ಸಮಸ್ಯೆಯಿಂದಾಗಿ ಕಾಯಿಲೆಗಳೂ ಕಾಣಿಸಿಕೊಳ್ಳುತ್ತಿವೆ.
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saligrama: ಚತುಷ್ಪಥ ರಸ್ತೆಯ ಅನಧಿಕೃತ ಒತ್ತುವರಿ ತೆರವಿಗೆ ಅಂತಿಮ ಹಂತದ ಸಿದ್ಧತೆ
Udupi: ಕತ್ತಲಲ್ಲಿ ಶೀಂಬ್ರಾ ಸೇತುವೆ: ಅಕ್ರಮಗಳ ಅಡ್ಡೆ!
Malpe: ಆಗ ಕೆಸರು, ಈಗ ಧೂಳು!; ಅರ್ಧಕ್ಕೆ ನಿಂತ ಆದಿಉಡುಪಿ-ಮಲ್ಪೆ ರಸ್ತೆ ಕಾಮಗಾರಿಯ ಕಿರಿಕಿರಿ
Udupi: ಶಾರ್ಟ್ ಸರ್ಕ್ಯೂಟ್; ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ
Kota: ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್ಡಿಕೆ
Saligrama: ಚತುಷ್ಪಥ ರಸ್ತೆಯ ಅನಧಿಕೃತ ಒತ್ತುವರಿ ತೆರವಿಗೆ ಅಂತಿಮ ಹಂತದ ಸಿದ್ಧತೆ
Udupi: ಕತ್ತಲಲ್ಲಿ ಶೀಂಬ್ರಾ ಸೇತುವೆ: ಅಕ್ರಮಗಳ ಅಡ್ಡೆ!
3 ಡಿ ಮ್ಯೂರಲ್ ಹೃದಯಗಳೊಂದಿಗೆ ಕೆಂಪಾದ ಬೆಂಗಳೂರು ನಗರ
ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.