Siddapura: ಬೀಡಾಡಿ ದನಗಳಿಂದ ವಾಹನ ಸವಾರರಿಗೆ ಆತಂಕ

ಕ್ರಮಕ್ಕೆ ಸಿದ್ದಾಪುರ: ಪಂಚಾಯತ್‌ ನಿರ್ಲಕ್ಷ್ಯ; ಗ್ರಾಮಸ್ಥರಿಂದ ಪ್ರತಿಭಟನೆಗೆ ನಿರ್ಧಾರ

Team Udayavani, Sep 24, 2024, 3:37 PM IST

Siddapura: ಬೀಡಾಡಿ ದನಗಳಿಂದ ವಾಹನ ಸವಾರರಿಗೆ ಆತಂಕ

ಸಿದ್ದಾಪುರ: ಸಿದ್ದಾಪುರ ಪೇಟೆಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರ ಜೀವಕ್ಕೆ ಆಪತ್ತು ತಂದಿದೆ. ದ್ವಿಚಕ್ರ ವಾಹನ ಸವಾರರು, ಬೀಡಾಡಿ ಹಸುಗಳಿಗೆ ಢಿಕ್ಕಿ ಹೊಡೆದು ಆಸ್ಪತ್ರೆಗೆ ದಾಖಲಾಗುತ್ತಿರುವ ಘಟನೆಗಳು ಪ್ರತಿನಿತ್ಯ ನಡೆಯುತ್ತಿದೆ. ಬೀಡಾಡಿ ಹಸುಗಳ ಹಾವಳಿ ನಿಯಂತ್ರಿಸಬೇಕಾದವರು, ತಮ್ಮೇಗೂ ಸಂಬಂಧ ಇಲ್ಲವೆಂಬಂತೆ ನಿರ್ಲಿಪ್ತತೆಯಿಂದ ವರ್ತಿಸುತ್ತಿದ್ದಾರೆ.
ರಾತ್ರಿಯ ವೇಳೆಯಲ್ಲಿ ರಸ್ತೆಯ ಮಧ್ಯೆ ಹಾಗೂ ಬದಿಗಳಲ್ಲಿ ಬೀಡಾಡಿ ದನಗಳು ಮಲಗಿರುತ್ತವೆ. ವಾಹನ ಸವಾರರಿಗೆ ಅವುಗಳು ಕಾಣಿಸದೇ ಬಂದು ಡಿಕ್ಕಿ ಹೊಡೆಯುತ್ತಾರೆ. ಕೆಲವೊಂದು ಸಲ ಬೀಡಾಡಿ ದನಗಳ ಕಾಲುಗಳು ಮುರಿದು, ರಸ್ತೆಯ ಬದಿಗಳಲ್ಲಿ ಒದ್ದಾಡುತ್ತಿರುತ್ತವೆ. ಇನ್ನೂ ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರು ಹಸುಗಳು ಢಿಕ್ಕಿ ಹೊಡೆದು, ಕೈ ಕಾಲುಗಳು ಮುರಿದುಕೊಂಡು ಆಸ್ಪತ್ರೆಗೆ ಸೇರುವುದು ಮಾಮೂಲಿಯಾಗಿದೆ. ಅವುಗಳ ನಿಯಂತ್ರಣ ಮಾಡಬೇಕಾದ ಗ್ರಾ.ಪಂ. ಮಾತ್ರ ತಮ್ಮಗೇನು ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ.

ಮೈಕ್‌ ಕಟ್ಟಿ ಕೂಗಿದ್ದೇ ಕೂಗಿದ್ದು…
ಗ್ರಾ.ಪಂ.ಗೆ ಬೀಡಾಡಿ ದನಗಳ ಹಾವಳಿ ಹೆಚ್ಚಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಾಕಿದ ದನಕರುಗಳನ್ನು ರಾತ್ರಿ ವೇಳೆಯಲ್ಲಿ ಪೇಟೆಯಲ್ಲೇ ಬಿಡುವುದು ಮತ್ತು ವಾಹನ ಸವಾರರಿಗೆ ತೊಂದರೆ ಉಂಟುಮಾಡುವ ದನಕರುಗಳ ಮಾಲಕರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪಂಚಾಯತ್‌ ವತಿಯಿಂದ ಆಟೋಗೊಂದು ಮೈಕ್‌ ಕಟ್ಟಿ ಸರ್ವ ವ್ಯಾಪ್ತಿಯಲ್ಲೂ ಕೂಗಿದ್ದೇ ಕೂಗಿದ್ದು. ಇದಾಗಿ ತಿಂಗಳು ಕಳೆದರೂ, ಇಂದಿಗೂ ಯಾವುದೇ ಕ್ರಮವಾಗಿಲ್ಲ.

ನಿಯಂತ್ರಿಸದಿದ್ದರೆ ಪ್ರತಿಭಟನೆ
ಹಗಲು ವೇಳೆಯಲ್ಲಿ ಪೇಟೆಯ ಹತ್ತಿರದ ಮನೆಯ ಹಿತ್ತಲುಗಳಿಗೆ ಹಸುಗಳು ದಾಳಿ ಮಾಡಿ, ಕೃಷಿ, ತರಕಾರಿ ಬೆಳೆಗಳನ್ನು ಮತ್ತು ಹೂ ಗಿಡಗಳನ್ನು ತಿಂದು ನಾಶ ಮಾಡುತ್ತಿವೆ. ಗ್ರಾ.ಪಂ. ಬೀಡಾಡಿ ಹಸುಗಳನ್ನು ಹಾವಳಿಯನ್ನು ನಿಯಂತ್ರಿಸದಿದ್ದರೆ, ಪಂಚಾಯತ್‌ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗ್ರಾ.ಪಂ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಚರ್ಚಿಸಿ ಕ್ರಮ
ಸಿದ್ದಾಪುರ ಪೇಟೆಯಲ್ಲಿ ಬೀಡಾಡಿ ದನಗಳ ಬಗ್ಗೆ ವಾಹನ ಸವಾರರಿಂದ ಮತ್ತು ಗ್ರಾಮಸ್ಥರಿಂದ ದೂರುಗಳು ಬಂದಿವೆ. ಪಂಚಾಯತ್‌ ವತಿಯಿಂದ ಆಟೋಗೊಂದು ಮೈಕ್‌ ಕಟ್ಟಿ ಪ್ರಚಾರ ಮಾಡಿದ್ದೇವೆ. ಇಲ್ಲಿಯ ತನಕ ಯಾರೂ ಕೂಡ ತಮ್ಮ ಹಸುಗಳನ್ನು ತೆಗೆದುಕೊಂಡು ಹೋಗಿಲ್ಲ. ಮುಂದೆ ಏನ್ನು ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿ, ಕ್ರಮ ತೆಗೆದುಕೊಳ್ಳುತ್ತೇವೆ.
-ಶ್ರೀಲತಾ ಶೆಟ್ಟಿ ಕಡ್ರಿ, ಅಧ್ಯಕ್ಷರು, ಗ್ರಾ.ಪಂ. ಸಿದ್ದಾಪುರ

ಟಾಪ್ ನ್ಯೂಸ್

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

12-mng

ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

18-nail-polish

Nail Polish: ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ನಲ್ಲಿದೆ ಕ್ಯಾನ್ಸರ್ ನ ರಾಸಾಯನಿಕ ಅಂಶ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

11-bellary

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

CM-preess

MUDA Scam: ಹೈಕೋರ್ಟ್‌ ಅಭಿಯೋಜನೆಗೆ ತಿರಸ್ಕರಿಸಿ ತನಿಖೆಗಷ್ಟೇ ಅನುಮತಿ ಕೊಟ್ಟಿದೆ: ಸಿಎಂ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ

ಧಾರವಾಡ: ವರ್ಷವಿಡೀ ಕಬ್ಬಿನ ಹಾಲು ಕೆಡದಂತೆ ಇಡುವ ತಂತ್ರ ಶೋಧಿಸಿದ ರೈತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

Saligrama: ಚತುಷ್ಪಥ ರಸ್ತೆಯ ಅನಧಿಕೃತ  ಒತ್ತುವರಿ ತೆರವಿಗೆ ಅಂತಿಮ ಹಂತದ ಸಿದ್ಧತೆ

18(1)

Udupi: ಕತ್ತಲಲ್ಲಿ ಶೀಂಬ್ರಾ ಸೇತುವೆ: ಅಕ್ರಮಗಳ ಅಡ್ಡೆ!

Malpe: ಆಗ ಕೆಸರು, ಈಗ ಧೂಳು!; ಅರ್ಧಕ್ಕೆ ನಿಂತ ಆದಿಉಡುಪಿ-ಮಲ್ಪೆ ರಸ್ತೆ ಕಾಮಗಾರಿಯ ಕಿರಿಕಿರಿ

Malpe: ಆಗ ಕೆಸರು, ಈಗ ಧೂಳು!; ಅರ್ಧಕ್ಕೆ ನಿಂತ ಆದಿಉಡುಪಿ-ಮಲ್ಪೆ ರಸ್ತೆ ಕಾಮಗಾರಿಯ ಕಿರಿಕಿರಿ

8-udupi

Udupi: ಶಾರ್ಟ್ ಸರ್ಕ್ಯೂಟ್; ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ

7(1)

Kota: ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

21

Saligrama: ಚತುಷ್ಪಥ ರಸ್ತೆಯ ಅನಧಿಕೃತ  ಒತ್ತುವರಿ ತೆರವಿಗೆ ಅಂತಿಮ ಹಂತದ ಸಿದ್ಧತೆ

18(1)

Udupi: ಕತ್ತಲಲ್ಲಿ ಶೀಂಬ್ರಾ ಸೇತುವೆ: ಅಕ್ರಮಗಳ ಅಡ್ಡೆ!

3 ಡಿ ಮ್ಯೂರಲ್ ಹೃದಯಗಳೊಂದಿಗೆ ಕೆಂಪಾದ ಬೆಂಗಳೂರು ನಗರ

3 ಡಿ ಮ್ಯೂರಲ್ ಹೃದಯಗಳೊಂದಿಗೆ ಕೆಂಪಾದ ಬೆಂಗಳೂರು ನಗರ

12-mng

ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.