Gujarat: 6 ವರ್ಷದ ವಿದ್ಯಾರ್ಥಿನಿ ಮೇಲೆ ರೇ*ಪ್ ಗೆ ಪ್ರತಿರೋಧ-ಹತ್ಯೆ: ಪ್ರಾಂಶುಪಾಲನ ಬಂಧನ
ಉಸಿರುಗಟ್ಟಿಸಿ ಕೊಂದ ನಂತರ ಶವವನ್ನು ಶಾಲಾ ಆವರಣದೊಳಗೆ ಎಸೆದಿದ್ದ
Team Udayavani, Sep 24, 2024, 4:39 PM IST
ಅಹ್ಮದಾಬಾದ್(ಗುಜರಾತ್): ದೈಹಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ವೇಳೆ ಪ್ರತಿರೋಧ ವ್ಯಕ್ತಪಡಿಸಿದ 6 ವರ್ಷದ ವಿದ್ಯಾರ್ಥಿನಿಯನ್ನು ಉಸಿರುಗಟ್ಟಿಸಿ ಕೊ*ಲೆಗೈದಿರುವ ಘಟನೆ ಗುಜರಾತ್ ನ ದಾಹೋದ್ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲನನ್ನು ಬಂಧಿಸಲಾಗಿದೆ. ದೈಹಿಕ ದೌರ್ಜನ್ಯಕ್ಕೆ ಪ್ರಯತ್ನಿಸಿ, ಬಾಲಕಿಯನ್ನು ಉಸಿರುಗಟ್ಟಿಸಿ ಕೊಂದ ನಂತರ ಶವವನ್ನು ಶಾಲಾ ಆವರಣದೊಳಗೆ ಎಸೆದಿದ್ದ.
ಬಾಲಕಿಯ ಬ್ಯಾಗ್, ಶೂಗಳು ಕ್ಲಾಸ್ ರೂಂ ಸಮೀಪ ಪತ್ತೆಯಾಗಿದೆ. ಆರೋಪಿ ಗೋವಿಂದ್ ನಾಥ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ರಾಜ್ ದೀಪ್ ಸಿಂಗ್ ಝಾಲಾ ಮಾತನಾಡಿ, ಆರು ವರ್ಷದ ವಿದ್ಯಾರ್ಥಿನಿಯ ಶವ ಶಾಲಾ ಆವರಣದೊಳಗೆ ಮಂಗಳವಾರ (23)ಸಂಜೆ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಘಟನೆ ನಂತರ ಪ್ರದೇಶದಲ್ಲಿ ಜನರು ಭಯಭೀತಿಗೊಳಗಾಗಿದ್ದರು.. ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬ ಅಂಶ ಪೋಸ್ಟ್ ಮಾರ್ಟ್ ಮ್ ವರದಿಯಲ್ಲಿ ಬಹಿರಂಗವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಾಗಿ ಹತ್ತು ತಂಡವನ್ನು ರಚಿಸಿದ್ದರು. ಮಗು ಪ್ರತಿದಿನ ಪ್ರಾಂಶುಪಾಲ ಗೋವಿಂದ್ ನಾಥ್ ಜೊತೆ ಶಾಲೆಗೆ ಹೋಗುತ್ತಿತ್ತು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಳು.
ಆರಂಭದಲ್ಲಿ ಪ್ರಾಂಶುಪಾಲನ ಬಳಿ ವಿಚಾರಿಸಿದಾಗ ತಾನು ಶಾಲೆಗೆ ಬಿಟ್ಟು, ಬೇರೆಡೆಗೆ ಕೆಲಸದ ನಿಮಿತ್ತ ತೆರಳಿರುವುದಾಗಿ ಹೇಳಿದ್ದ. ಆದರೆ ಘಟನೆ ನಡೆದ ದಿನದಂದು ಗೋವಿಂದ್ ಫೋನ್ ಲೊಕೇಶನ್ ವಿವರ ಪರಿಶೀಲಿಸಿದಾಗ ಆತನ ಅಸಲಿ ಮುಖ ಬಯಲಾಗಿತ್ತು. ಬಳಿಕ ಪ್ರಾಂಶುಪಾಲನನ್ನು ಬಂಧಿಸಿ ವಿಚಾರಿಸಿದಾಗ ಕೊಲೆಗೈದ ವಿಚಾರ ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!
ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲು ಪಾಲಾದ ರೈಲ್ವೆ ಸಿಬ್ಬಂದಿಗಳು
Tobacco: ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಗಂಭೀರ ಆರೋಪ
Mini Moon!;ಇದೇ 29ರಿಂದ ಭೂಮಿಗೆ ಬರಲಿದೆ ಹೊಸ ಅತಿಥಿ
4th term ಅಧಿಕಾರ ಗ್ಯಾರಂಟಿ ಇಲ್ಲ, ಆದರೆ…: ಕೇಂದ್ರ ಸಚಿವ ಗಡ್ಕರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mudbidri ಅರಮನೆ ಆನೆಬಾಗಿಲಿಗೆ ಟ್ರಕ್ ಡಿಕ್ಕಿ ಹೊಡೆದು ಹಾನಿ
Mudhol: ಲೈಂಗಿಕ ದೌರ್ಜನ್ಯ, ಯತ್ನಾಳ್ ವಿರುದ್ದ ಅವಹೇಳನಕ್ಕೆ ಖಂಡನೆ; ಮನವಿ ಸಲ್ಲಿಕೆ
High Court Order: ನಾವು ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಲ್ಲುತ್ತೇವೆ: ಸಚಿವ ಎಸ್ಸೆಸ್ಸೆಂ
Hunsur: ಮಾಜಿ ಶಾಸಕ ಮಂಜುನಾಥ್ಗೆ ಎಚ್1ಎನ್1 ದೃಢ; ಖಾಸಗಿ ಆಸ್ಪತ್ರೆಗೆ ದಾಖಲು
MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್ಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.