UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!

2007ರ ಫೆಬ್ರವರಿ 10ರಂದು ಮನೆಯ ಹೊರಗೆ ಆಟವಾಡುತ್ತಿದ್ದ ಗರ್ಗ್‌ ನನ್ನು ತಂಡವೊಂದು ಅಪಹರಿಸಿತ್ತು.

Team Udayavani, Sep 24, 2024, 5:37 PM IST

UP:ಅಪಹರಣಕ್ಕೊಳಗಾಗಿದ್ದ ಬಾಲಕನೇ 17 ವರ್ಷದ ಬಳಿಕ ವಕೀಲರಾಗಿ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ!

ನವದೆಹಲಿ: ಏಳು ವರ್ಷದ ಬಾಲಕನನ್ನು ಅಪಹರಿಸಿದ್ದ ಆರೋಪಿಗಳಿಗೆ ಆಗ್ರಾ (Agra Court) ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಅಂದ ಹಾಗೆ ಈ ಪ್ರಕರಣದಲ್ಲೊಂದು ವಿಶೇಷತೆ ಇದೆ. ಅದೇನೆಂದರೆ ಯಾವ ಬಾಲಕ ಅಂದು ಅಪಹರಣಕ್ಕೊಳಗಾಗಿದ್ದಾನೋ ಅದೇ ಬಾಲಕ ಇಂದು ವಕೀಲರಾಗಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ವಾದಮಂಡಿಸಿರುವುದು!

ಏನಿದು ಪ್ರಕರಣ?

ಆಗ್ರಾದ ಖೇರ್‌ ಗಢ್‌ ನಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಮಗುವನ್ನು ಅಪಹರಿಸಿದ್ದ ಈ ಪ್ರಕರಣ ನಡೆದು 17 ವರ್ಷಗಳೇ ಕಳೆದಿದೆ. ಪ್ರಕರಣದ ವಿಚಾರಣೆ ನಡೆಸಿದ ಅಡಿಷನಲ್‌ ಜಿಲ್ಲಾ ನ್ಯಾಯಾಧೀಶರಾದ ನೀರಜ್‌ ಕುಮಾರ್‌ ಬಕ್ಷಿ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದರು.

ಅಂದು ಅಪಹರಿಸಲ್ಪಟ್ಟ ಹರ್ಷ ಗರ್ಗ್‌ (Harsh Garg) ಎಂಬ ಬಾಲಕ ಈ 17 ವರ್ಷಗಳಲ್ಲಿ ಬಹಳಷ್ಟು ಬದಲಾವಣೆ ಕಂಡಿದ್ದು…ಈಗ ಆತ 24ರ ಹರೆಯದ ಯುವ ವಕೀಲರಾಗಿದ್ದಾರೆ. ತನ್ನ ಅಪಹರಣಕಾರ ಆರೋಪಿಗಳಿಗೆ ಬಗ್ಗೆ ಕೋರ್ಟ್‌ ನಲ್ಲಿ ಸಮರ್ಥವಾಗಿ ವಾದ ಮಂಡಿಸಿ ಶಿಕ್ಷೆ ವಿಧಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

2007ರ ಫೆಬ್ರವರಿ 10ರಂದು ಮನೆಯ ಹೊರಗೆ ಆಟವಾಡುತ್ತಿದ್ದ ಗರ್ಗ್‌ ನನ್ನು ತಂಡವೊಂದು ಅಪಹರಿಸಿತ್ತು. ಈ ಸಂದರ್ಭದಲ್ಲಿ ಅಪಹರಣ ತಡೆಯಲು ಯತ್ನಿಸಿದ್ದ ಗರ್ಗ್‌ ತಂದೆ ರವಿ ಕುಮಾರ್‌ ಗರ್ಗ್‌ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ನಂತರ ಹರ್ಷ ಗರ್ಗ್‌ ಬಿಡುಗಡೆಗೆ 55 ಲಕ್ಷ ರೂಪಾಯಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಸುಮಾರು 26 ದಿನಗಳ ನಂತರ ಮಧ್ಯಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಗರ್ಗ್‌ ನನ್ನು ರಕ್ಷಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುಡ್ಡಾನ್‌ ಕಾಛಿ, ರಾಜೇಶ್‌ ಶರ್ಮಾ, ರಾಜ್‌ ಕುಮಾರ್‌, ಫತೇಹ್‌ ಸಿಂಗ್‌ ಅಲಿಯಾಸ್‌ ಛಿಗಾ, ಅಮರ್‌ ಸಿಂಗ್‌, ಬಲ್ವೀರ್‌, ರಾಮ್‌ ಪ್ರಕಾಶ್‌, ಭೀಮ್‌ ಅಲಿಯಾಸ್‌ ಭಿಖಾರಿ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದರು. 17 ವರ್ಷಗಳ ಬಳಿಕ ಕೋರ್ಟ್‌ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ನಾಲ್ವರು ಆರೋಪಿಗಳು ಖುಲಾಸೆಗೊಂಡಿದ್ದರು.

ಈ ಪ್ರಕರಣದಲ್ಲಿ ಗರ್ಗ್‌ ಸಾಕ್ಷ್ಯ ಪ್ರಮುಖ ಪಾತ್ರ ವಹಿಸಿತ್ತು. 2022ರಲ್ಲಿ ಹರ್ಷ ಗರ್ಗ್‌ ಕಾನೂನು ಪದವಿ ಪಡೆದಿದ್ದು, ಬಳಿಕ ಗರ್ಗ್‌ ಈ ಪ್ರಕರಣದ ವಾದ, ಪ್ರತಿವಾದ ಪ್ರಕ್ರಿಯೆಯಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. 2024ರ ಸೆಪ್ಟೆಂಬರ್‌ 17ರಂದು ಕೋರ್ಟ್‌ ನಲ್ಲಿ ತನ್ನ ಅಪಹರಣ ಪ್ರಕರಣದ ಬಗ್ಗೆ ಅಂತಿಮ ವಾದ ಸಮರ್ಥವಾಗಿ ಮಂಡಿಸಿದ್ದರು.

ಟಾಪ್ ನ್ಯೂಸ್

PC-Gaddigowder

MUDA Scam: ಪಾರದರ್ಶಕ ತನಿಖೆಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಗದ್ದಿಗೌಡರ್‌

baRabkavi Banhatti: ಸಂಭ್ರಮ ಸಡಗರದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ

Rabkavi Banhatti: ಸಂಭ್ರಮ ಸಡಗರದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ

SSM

High Court Order: ನಾವು ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಲ್ಲುತ್ತೇವೆ: ಸಚಿವ ಎಸ್ಸೆಸ್ಸೆಂ

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

12-mng

ಮುಡಾ ಪ್ರಕರಣ;ಸಿ.ಎಂ.ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

18-nail-polish

Nail Polish: ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ನಲ್ಲಿದೆ ಕ್ಯಾನ್ಸರ್ ನ ರಾಸಾಯನಿಕ ಅಂಶ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dassault maintenance center in Noida for Rafale?

Rafale: ರಫೇಲ್‌ ಗಾಗಿ ನೋಯ್ಡಾದಲ್ಲಿ ಡಸಾಲ್ಟ್ ನಿರ್ವಹಣಾ ಕೇಂದ್ರ?

Gujarat: 6 ವರ್ಷದ ವಿದ್ಯಾರ್ಥಿನಿ ಮೇಲೆ ರೇ*ಪ್‌ ಗೆ ಪ್ರತಿರೋಧ-ಹತ್ಯೆ: ಪ್ರಾಂಶುಪಾಲನ ಬಂಧನ

Gujarat: 6 ವರ್ಷದ ವಿದ್ಯಾರ್ಥಿನಿ ಮೇಲೆ ರೇ*ಪ್‌ ಗೆ ಪ್ರತಿರೋಧ-ಹತ್ಯೆ: ಪ್ರಾಂಶುಪಾಲನ ಬಂಧನ

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲಿಗೆ ಹೋದ ರೈಲ್ವೆ ಸಿಬ್ಬಂದಿಗಳು

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲು ಪಾಲಾದ ರೈಲ್ವೆ ಸಿಬ್ಬಂದಿಗಳು

Tobacco: ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಆರೋಪ

Tobacco: ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಗಂಭೀರ ಆರೋಪ

Chandra

Mini Moon!;ಇದೇ 29ರಿಂದ ಭೂಮಿಗೆ ಬರಲಿದೆ ಹೊಸ ಅತಿಥಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Dassault maintenance center in Noida for Rafale?

Rafale: ರಫೇಲ್‌ ಗಾಗಿ ನೋಯ್ಡಾದಲ್ಲಿ ಡಸಾಲ್ಟ್ ನಿರ್ವಹಣಾ ಕೇಂದ್ರ?

PC-Gaddigowder

MUDA Scam: ಪಾರದರ್ಶಕ ತನಿಖೆಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಗದ್ದಿಗೌಡರ್‌

Gangolli

Bantwal: ಮನೆಯ ಮೆಟ್ಟಿಲಿನಿಂದ ಬಿದ್ದು ಮೃತ್ಯು

baRabkavi Banhatti: ಸಂಭ್ರಮ ಸಡಗರದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ

Rabkavi Banhatti: ಸಂಭ್ರಮ ಸಡಗರದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ

POlice

Udupi: ಪತ್ನಿ, ಮಕ್ಕಳನ್ನು ಬಿಟ್ಟು ಪರಾರಿಯಾದ ಪತಿ!: ಪ್ರಕರಣ ಸುಖಾಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.