Bantwal: ಮುಂಬಯಿ ಪೊಲೀಸರೆಂದು ಹೇಳಿ ವಂಚನೆ
Team Udayavani, Sep 25, 2024, 6:55 AM IST
ಬಂಟ್ವಾಳ: ಅಕ್ರಮ ಪಾರ್ಸೆಲ್ ವಿಚಾರದಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂದು ಮುಂಬಯಿ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಹೆದರಿಸಿ ವೀರಕಂಭದ ವ್ಯಕ್ತಿಯೊಬ್ಬರಿಗೆ 90 ಸಾವಿರ ರೂ. ವಂಚಿಸಿರುವ ಕುರಿತು ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಕಂಭದ ಹರ್ಷ ಹೆಗ್ಡೆ ಕೆ. ಅವರು ಹಣ ಕಳೆದುಕೊಂಡ ವ್ಯಕ್ತಿ. ಸೆ. 21ರಂದು ಬೆಳಗ್ಗೆ ಅವರ ಮೊಬೈಲ್ಗೆ ಅಪರಿಚಿತನ ಕರೆ ಬಂದಿದ್ದು, ಹಿಂದಿಯಲ್ಲಿ ಮಾತನಾಡಿ ಕೋರಿಯರ್ ಕಂಪೆನಿಯ ಮುಂಬಯಿ ಶಾಖೆಯಿಂದ ಮಾಡುತ್ತಿದ್ದೇವೆ. ನಿಮ್ಮ ಹೆಸರಿನಲ್ಲಿ ಸೆ. 4ರಂದು ಆಧಾರ ಕಾರ್ಡ್ ಬಳಸಿ ಪಾರ್ಸೆಲ್ ಬುಕ್ ಆಗಿದ್ದು, ಅದರಲ್ಲಿ ಅಕ್ರಮ ಸಾಮಗ್ರಿ, ನಗದು ಇದೆ. ನಿಮ್ಮ ವಿರುದ್ಧ ಮುಂಬಯಿ ಪೊಲೀಸರು ಪ್ರಕರಣ ದಾಖಲಿಸಿದ್ದು, ನಿಮಗೆ ಅವರ ಕರೆ ಬರುತ್ತದೆ ಎಂದಿದ್ದ.
ಬಳಿಕ ಅವರಿಗೆ ವಾಟ್ಸಾಪ್ ಕಾಲ್ ಬಂದಿದ್ದು, ಅವರು ಅಂಧೇರಿ ಸಬ್ಇನ್ಸ್ಪೆಕ್ಟರ್ ಎಂಬ ಐಡಿಯನ್ನು ಕಳುಹಿಸಿ ಪ್ರಕರಣದ ಕುರಿತು ವಿಚಾರಣೆ ನಡೆಸಿ ಆಧಾರ್ ಕಾರ್ಡ್ ವಾಟ್ಸಾಪ್ ಮಾಡುವಂತೆ ಹೇಳಿದ್ದಾರೆ. ಜತೆಗೆ ನಿಮ್ಮ ಮೇಲೆ ಪ್ರಕರಣ ದಾಖಲಾಗಿ ಅರೆಸ್ಟ್ ವಾರೆಂಟ್ ಕೂಡ ಆಗಿದ್ದು, ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದ್ದರು.
ನಿಮ್ಮ ವಾಟ್ಸಾಪ್ಗೆ ಪತ್ರವೊಂದನ್ನು ಕಳುಹಿಸಲಾಗಿದ್ದು, ನಿಮ್ಮ ಖಾತೆಯಿಂದ ಅದರಲ್ಲಿರುವ ರುಕ್ಮಾದೇವಿ ಹೆಸರಿಗೆ 15 ಸಾವಿರ ರೂ. ಕಳುಹಿಸಿ. ಈ ಹಣವನ್ನು 4 ದಿನದಲ್ಲಿ ನಿಮಗೆ ಹಿಂದಿರುಗಿಸಲಾಗುತ್ತದೆ ಎಂದು ಹೇಳಿದ್ದರು.
ಅದರಂತೆ ಅವರು ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ಮತ್ತೊಂದು ವಾಟ್ಸಾಪ್ ಕರೆ ಮಾಡಿ ನಿಮಗೆ ಬೇಲ್ ಬಾಂಡ್ ತೆಗೆಯಲು 75 ಸಾವಿರ ರೂ. ಕಳುಹಿಸಬೇಕಿದ್ದು, ನಿಮ್ಮ ಮೇಲಿನ ಪ್ರಕರಣ ಖುಲಾಸೆಯಾದ ಬಳಿಕ ಈ ಹಣವು ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ ಎಂದು ಪತ್ರವೊಂದನ್ನು ಕಳುಹಿಸಿದ್ದರು. ಅವರು ಈ ಹಣವನ್ನೂ ವರ್ಗಾವಣೆ ಮಾಡಿದ್ದು, ಹೀಗೆ ಎರಡು ಪ್ರತ್ಯೇಕ ಖಾತೆಗಳಿಗೆ 90 ಸಾವಿರ ರೂ. ವರ್ಗಾಯಿಸಿ ವಂಚನೆಗೊಳಗಾಗಿರುವುದಾಗಿ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು; ಸುಳ್ಯದಲ್ಲಿ ಭಾರೀ ಪ್ರತಿಭಟನೆ
Belthangady ಹೃದಯಾಘಾತ: ಶಾಮಿಯಾನ ಉದ್ಯಮಿ ಸಾವು
Bantwala: ಲಾರಿ- ಬೈಕ್ ಭೀಕರ ಅಪಘಾತ; ಗಂಭೀರ ಗಾಯಗೊಂಡಿದ್ದ ಮೂವರ ಪೈಕಿ ಓರ್ವ ಮೃತ್ಯು
Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು
ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿದ ಆರೋಪ;ಸುಳ್ಯ ಪೊಲೀಸ್ ಠಾಣೆ ಬಳಿ ಪ್ರತಿಭಟನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Ravi Katapadi: ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ
Divorce; 8 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್
Sanatana Dharma; ಮುಂದುವರೆದ ಪವನ್ ಕಲ್ಯಾಣ್ vs ಪ್ರಕಾಶ್ ರಾಜ್ ಸಮರ
US’s full support ಬಾಂಗ್ಲಾಕ್ಕಿದೆ; ಬೈಡೆನ್ ಭೇಟಿಯಾದ ಮೊಹಮ್ಮದ್ ಯೂನಸ್
3 farm laws; ಕಂಗನಾ ರಣಾವತ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.