Women’s T20 World Cup; ಟಿ20 ವಿಶ್ವಕಪ್‌ಗೆ ಹೊರಟು ನಿಂತ ವನಿತೆಯರು


Team Udayavani, Sep 25, 2024, 7:12 AM IST

india team left to women’s t20 world cup 2024

ಮುಂಬಯಿ: “ಇದೊಂದು ಪ್ರಬಲ ತಂಡ. ನಾವೆಲ್ಲ ಜತೆಗೂಡಿ ಕಳೆದ ಅನೇಕ ಸಮಯದಿಂದ ಆಡುತ್ತ ಬಂದಿದ್ದೇವೆ. ಟಿ20 ವಿಶ್ವಕಪ್‌ ಪಂದ್ಯಾವಳಿಗೆ ನಮ್ಮ ತಂಡ ಸರ್ವವಿಧದಲ್ಲೂ ಸಜ್ಜುಗೊಂಡಿದೆ. ಈ ಸಲ ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವುದು ನಮ್ಮೆಲ್ಲರ ಗುರಿ ಆಗಿದೆ’ ಎಂಬುದಾಗಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದಾರೆ.

ಭಾರತ ತಂಡ ವಿಶ್ವಕಪ್‌ಗೆ ತೆರಳುವ ಮುನ್ನ ಮುಂಬಯಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕೋಚ್‌ ಅಮೋಲ್‌ ಮುಜುಮ್ದಾರ್‌, ಆಯ್ಕೆ ಸಮಿತಿ ಅಧ್ಯಕ್ಷೆ ನೀತು ಡೇವಿಡ್‌ ಕೂಡ ಉಪಸ್ಥಿತರಿದ್ದರು.

ಭಾರತ ಈವರೆಗೆ ಟಿ20 ವಿಶ್ವಕಪ್‌ ಗೆದ್ದಿಲ್ಲ. 2009ರಲ್ಲಿ ಟಿ20 ವಿಶ್ವಕಪ್‌ ಮೊದ ಲ್ಗೊಂಡ ಬಳಿಕ ಒಮ್ಮೆಯಷ್ಟೇ ಫೈನಲ್‌ ತಲುಪಿದೆ. 2020ರ ಈ ಪ್ರಶಸ್ತಿ ಸಮರದಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿತ್ತು. 2017ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲೂ ಭಾರತ ಪರಾಭವಗೊಂಡಿತ್ತು. ಈ ಎರಡೂ ಸಂದರ್ಭಗಳಲ್ಲಿ ಹರ್ಮನ್‌ಪ್ರೀತ್‌ ಅವರೇ ನಾಯಕಿಯಾಗಿದ್ದರು. ಕಳೆದ ಏಷ್ಯಾ ಕಪ್‌ ಫೈನಲ್‌ನಲ್ಲೂ ಭಾರತದ ವನಿತೆಯರಿಗೆ ಅದೃಷ್ಟ ಕೈಕೊಟ್ಟಿತ್ತು.

“ಕಳೆದ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೆವು. ಆದರೆ ಆ ಒಂದು ದಿನದಂದು ಮಾತ್ರ ನಮ್ಮ ಯೋಜನೆಯಂತೆ ಯಾವುದೂ ಸಾಗಲಿಲ್ಲ. ನಾನು 19 ವರ್ಷದಿಂದ ಅದೆಷ್ಟೋ ವಿಶ್ವಕಪ್‌ ಆಡಿದ್ದೇನೆ. ಈಗಲೂ ಅದೇ ಉತ್ಸಾಹದಲ್ಲಿದ್ದೇನೆ’ ಎಂದು 35 ವರ್ಷದ ಹರ್ಮನ್‌ಪ್ರೀತ್‌ ಹೇಳಿದರು.

“ಈ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ತಂಡಗಳು ಭಾರೀ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೆ ನಾವು ಯಾವ ತಂಡವನ್ನೂ ಮಣಿಸಬಲ್ಲೆವು. ಆಸ್ಟ್ರೇಲಿಯಕ್ಕೂ ತಿಳಿದಿದೆ, ತಮ್ಮನ್ನು ಸೋಲಿಸುವುದಿದ್ದರೆ ಭಾರತ ಮಾತ್ರ ಎಂದು…’ ಎಂಬುದಾಗಿ ಹರ್ಮನ್‌ಪ್ರೀತ್‌ ಅಭಿಪ್ರಾಯಪಟ್ಟರು. ಭಾರತ ತನ್ನ ಮೊದಲ ಪಂದ್ಯವನ್ನು ಅ. 4ರಂದು ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಿದೆ.

ಧ್ಯೇಯಗೀತೆ ಬಿಡುಗಡೆ

ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಧ್ಯೇಯಗೀತೆ ಬಿಡುಗಡೆಗೊಂಡಿದೆ. “ವಾಟ್‌ ಎವರ್‌ ಇಟ್‌ ಟೇಕ್ಸ್‌…’ ಎನ್ನುವ ಸಾಲಿನೊಂದಿಗೆ ಇದು ಆರಂಭವಾಗುತ್ತದೆ. ಮೈಕಿ ಮೆಕ್‌ಕ್ಲಿಯರಿ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಆಲ್‌ ಗರ್ಲ್ ಪಾಪ್‌ ಗ್ರೂಪ್‌ನ “ವಿಶ್‌’ ತಂಡದವರು ಹಾಡಿದ್ದಾರೆ. ಪಾಪ್‌ ಶೈಲಿಯ ಈ ಹಾಡು ಈಗಾಗಲೇ ವೈರಲ್‌ ಆಗಿದೆ. ಇದನ್ನು ಡೌನ್‌ಲೋಡ್‌ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಟಾಪ್ ನ್ಯೂಸ್

Kapil Sibal;

Siddaramaiah ವಿರುದ್ಧ ಹೈ ಕೋರ್ಟ್ ತೀರ್ಪು: ಕಪಿಲ್ ಸಿಬಲ್ ಪ್ರತಿಕ್ರಿಯೆ

5

Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ

1-jk

J&K; ಮತದಾನ ಪ್ರಕ್ರಿಯೆ ವೀಕ್ಷಿಸುತ್ತಿರುವ ವಿದೇಶಗಳ ಉನ್ನತ ಮಟ್ಟದ ರಾಜತಾಂತ್ರಿಕರು

Sudeep: ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೇನೆ.. ಮ್ಯಾಕ್ಸ್‌ ಬಗ್ಗೆ ಕಿಚ್ಚ ಮಾತು

Sudeep: ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೇನೆ.. ಮ್ಯಾಕ್ಸ್‌ ಬಗ್ಗೆ ಕಿಚ್ಚ ಮಾತು

1-kammala

Arizona;ಕಮಲಾ ಹ್ಯಾರಿಸ್ ಚುನಾವಣ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ

ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

Ravi Katapadi: ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

1-urmila

Divorce; 8 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Irani Cup: Ruturaj Gaikwad is the captain for the rest of India

Irani Cup: ಶೇಷ ಭಾರತಕ್ಕೆ ಋತುರಾಜ್‌ ಗಾಯಕ್ವಾಡ್‌ ನಾಯಕ

IND vs BAN; Cricket teams that came to Kanpur; Tight security

INDvsBAN; ಕಾನ್ಪುರಕ್ಕೆ ಬಂದ ಕ್ರಿಕೆಟ್‌ ತಂಡಗಳು; ಬಿಗಿ ಭದ್ರತೆ

Gwalior bandh call on Bangla match day

INDvsBAN; ಬಾಂಗ್ಲಾ ಪಂದ್ಯದ ದಿನ ಗ್ವಾಲಿಯರ್‌ ಬಂದ್‌ಗೆ ಕರೆ

Cash prize for para shuttlers

Paralympics; ಪ್ಯಾರಾ ಶಟ್ಲರ್‌ ಗಳಿಗೆ ನಗದು ಬಹುಮಾನ

hockeyIndia-Germany: Two match hockey series

Hockey; ಭಾರತ-ಜರ್ಮನಿ: ಎರಡು ಪಂದ್ಯಗಳ ಹಾಕಿ ಸರಣಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Crime: ಪತ್ನಿಯ ಶೀಲ ಶಂಕಿಸಿ 5 ವರ್ಷದ ಪುತ್ರಿಯ ಕೊಂದ ತಂದೆ ಬಂಧನ

Crime: ಪತ್ನಿಯ ಶೀಲ ಶಂಕಿಸಿ 5 ವರ್ಷದ ಪುತ್ರಿಯ ಕೊಂದ ತಂದೆ ಬಂಧನ

6

Bengaluru: ಬಾಲಕ ಸಾವು; ನಾಲ್ವರು ಎಂಜಿನಿಯರ್‌ ಅಮಾನತು

Kapil Sibal;

Siddaramaiah ವಿರುದ್ಧ ಹೈ ಕೋರ್ಟ್ ತೀರ್ಪು: ಕಪಿಲ್ ಸಿಬಲ್ ಪ್ರತಿಕ್ರಿಯೆ

5

Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.