Irani Cup: ಶೇಷ ಭಾರತಕ್ಕೆ ಋತುರಾಜ್‌ ಗಾಯಕ್ವಾಡ್‌ ನಾಯಕ


Team Udayavani, Sep 25, 2024, 7:18 AM IST

Irani Cup: Ruturaj Gaikwad is the captain for the rest of India

ಹೊಸದಿಲ್ಲಿ: ರಣಜಿ ಚಾಂಪಿಯನ್‌ ಮುಂಬಯಿ ವಿರುದ್ಧ ಆಡಲಾಗುವ “ಇರಾನಿ ಕಪ್‌’ ಕ್ರಿಕೆಟ್‌ ಪಂದ್ಯಕ್ಕಾಗಿ ಶೇಷ ಭಾರತ ತಂಡ ಪ್ರಕಟ ಗೊಂಡಿದೆ. ಋತುರಾಜ್‌ ಗಾಯಕ್ವಾಡ್‌ ನಾಯಕರಾಗಿದ್ದಾರೆ.

ಈ ತಂಡದಲ್ಲಿ ಕರ್ನಾಟಕದ ಇಬ್ಬರು ಅವಕಾಶ ಪಡೆದಿದ್ದಾರೆ. ಇವರೆಂದರೆ ದೇವದತ್‌ ಪಡಿಕ್ಕಲ್‌ ಮತ್ತು ಪ್ರಸಿದ್ಧ್ ಕೃಷ್ಣ.

ಭಾರತದ ಟೆಸ್ಟ್‌ ತಂಡದಲ್ಲಿರುವ ಧ್ರುವ ಜುರೆಲ್‌ ಮತ್ತು ಯಶ್‌ ದಯಾಳ್‌ ಕೂಡ ಶೇಷ ಭಾರತ ತಂಡದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶ ಸಿಗದೇ ಹೋದರೆ ಇವರು ಇರಾನಿ ಕಪ್‌ನಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಈ ಸಾಲಿನಲ್ಲಿರುವ ಮತ್ತೋರ್ವ ಆಟಗಾರ ಸಫ‌ìರಾಜ್‌ ಖಾನ್‌. ಅವರು ಟೆಸ್ಟ್‌ ತಂಡದ ಆಡುವ ಬಳಗದಲ್ಲಿ ಅವಕಾಶ ಪಡೆಯದಿದ್ದರೆ ಮುಂಬಯಿ ಪರ ಆಡುವ ಸಾಧ್ಯತೆ ಇದೆ.

ಮುಂಬಯಿಯ ಸೂರ್ಯಕುಮಾರ್‌ ಯಾದವ್‌, ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ನಾಯಕರಾಗಿ ಆಯ್ಕೆಯಾಗುವ ಎಲ್ಲ ಸಾಧ್ಯತೆ ಇರುವುದರಿಂದ ಇರಾನಿ ಕಪ್‌ನಲ್ಲಿ ಆಡುವುದಿಲ್ಲ.

ಇರಾನಿ ಕಪ್‌ ಪಂದ್ಯ ಅ. ಒಂದರಿಂದ 5ರ ತನಕ ಲಕ್ನೋದಲ್ಲಿ ನಡೆಯಲಿದೆ. ಭಾರತ-ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ ಸೆ. 27ರಂದು ಕಾನ್ಪುರದಲ್ಲಿ ಆರಂಭವಾಗಲಿದೆ. ಇತ್ತಂಡಗಳ ನಡುವಿನ ಟಿ20 ಸರಣಿ ಅ. 6ರಂದು ಮೊದಲ್ಗೊಳ್ಳಲಿದೆ.

ಶೇಷ ಭಾರತ ತಂಡ: ಋತುರಾಜ್‌ ಗಾಯಕ್ವಾಡ್‌ (ನಾಯಕ), ಅಭಿಮನ್ಯು ಈಶ್ವರನ್‌, ಸಾಯಿ ಸುದರ್ಶನ್‌, ದೇವದತ್ತ ಪಡಿಕ್ಕಲ್‌, ಧ್ರುವ ಜುರೆಲ್‌, ಇಶಾನ್‌ ಕಿಶನ್‌, ಮಾನವ್‌ ಸುಥಾರ್‌, ಸಾರಾಂಶ್‌ ಜೈನ್‌, ಪ್ರಸಿದ್ಧ್ ಕೃಷ್ಣ, ಮುಕೇಶ್‌ ಕುಮಾರ್‌, ಯಶ್‌ ದಯಾಳ್‌, ರಿಕಿ ಭುಯಿ, ಶಾಶ್ವತ್‌ ರಾವತ್‌, ಖಲೀಲ್‌ ಅಹ್ಮದ್‌, ರಾಹುಲ್‌ ಚಹರ್‌.

ಮುಂಬಯಿ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಆಯುಷ್‌ ಮ್ಹಾತ್ರೆ, ಮುಶೀರ್‌ ಖಾನ್‌, ಸಫ‌ìರಾಜ್‌ ಖಾನ್‌, ಶ್ರೇಯಸ್‌ ಅಯ್ಯರ್‌, ಸಿದ್ದೇಶ್‌ ಲಾಡ್‌, ಸೂರ್ಯಾಂಶ್‌ ಶೇಡ್ಗೆ, ಹಾರ್ದಿಕ್‌ ತಮೋರೆ, ಸಿದ್ಧಾಂತ್‌ ಆದತ್‌ರಾವ್‌, ಶಮ್ಸ್‌ ಮುಲಾನಿ, ತನುಷ್‌ ಕೋಟ್ಯಾನ್‌, ಹಿಮಾಂಶು ಸಿಂಗ್‌, ಶಾರ್ದೂಲ್‌ ಠಾಕೂರ್‌, ಮೋಹಿತ್‌ ಅವಸ್ತಿ, ಮೊಹಮ್ಮದ್‌ ಜುನೇದ್‌ ಖಾನ್‌, ರಾಯ್‌ಸ್ಟನ್‌ ಡಾಯಸ್‌.

ಟಾಪ್ ನ್ಯೂಸ್

Kapil Sibal;

Siddaramaiah ವಿರುದ್ಧ ಹೈ ಕೋರ್ಟ್ ತೀರ್ಪು: ಕಪಿಲ್ ಸಿಬಲ್ ಪ್ರತಿಕ್ರಿಯೆ

5

Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ

1-jk

J&K; ಮತದಾನ ಪ್ರಕ್ರಿಯೆ ವೀಕ್ಷಿಸುತ್ತಿರುವ ವಿದೇಶಗಳ ಉನ್ನತ ಮಟ್ಟದ ರಾಜತಾಂತ್ರಿಕರು

Sudeep: ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೇನೆ.. ಮ್ಯಾಕ್ಸ್‌ ಬಗ್ಗೆ ಕಿಚ್ಚ ಮಾತು

Sudeep: ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೇನೆ.. ಮ್ಯಾಕ್ಸ್‌ ಬಗ್ಗೆ ಕಿಚ್ಚ ಮಾತು

1-kammala

Arizona;ಕಮಲಾ ಹ್ಯಾರಿಸ್ ಚುನಾವಣ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ

ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

Ravi Katapadi: ರಕ್ಕಸ ವೇಷದ ಒಳಗಿನ ಮಾನವೀಯ ಮುಖ; ರವಿ ಕಟಪಾಡಿ ಎಂಬ ಸೇವಕ

1-urmila

Divorce; 8 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

india team left to women’s t20 world cup 2024

Women’s T20 World Cup; ಟಿ20 ವಿಶ್ವಕಪ್‌ಗೆ ಹೊರಟು ನಿಂತ ವನಿತೆಯರು

IND vs BAN; Cricket teams that came to Kanpur; Tight security

INDvsBAN; ಕಾನ್ಪುರಕ್ಕೆ ಬಂದ ಕ್ರಿಕೆಟ್‌ ತಂಡಗಳು; ಬಿಗಿ ಭದ್ರತೆ

Gwalior bandh call on Bangla match day

INDvsBAN; ಬಾಂಗ್ಲಾ ಪಂದ್ಯದ ದಿನ ಗ್ವಾಲಿಯರ್‌ ಬಂದ್‌ಗೆ ಕರೆ

Cash prize for para shuttlers

Paralympics; ಪ್ಯಾರಾ ಶಟ್ಲರ್‌ ಗಳಿಗೆ ನಗದು ಬಹುಮಾನ

hockeyIndia-Germany: Two match hockey series

Hockey; ಭಾರತ-ಜರ್ಮನಿ: ಎರಡು ಪಂದ್ಯಗಳ ಹಾಕಿ ಸರಣಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Crime: ಪತ್ನಿಯ ಶೀಲ ಶಂಕಿಸಿ 5 ವರ್ಷದ ಪುತ್ರಿಯ ಕೊಂದ ತಂದೆ ಬಂಧನ

Crime: ಪತ್ನಿಯ ಶೀಲ ಶಂಕಿಸಿ 5 ವರ್ಷದ ಪುತ್ರಿಯ ಕೊಂದ ತಂದೆ ಬಂಧನ

6

Bengaluru: ಬಾಲಕ ಸಾವು; ನಾಲ್ವರು ಎಂಜಿನಿಯರ್‌ ಅಮಾನತು

Kapil Sibal;

Siddaramaiah ವಿರುದ್ಧ ಹೈ ಕೋರ್ಟ್ ತೀರ್ಪು: ಕಪಿಲ್ ಸಿಬಲ್ ಪ್ರತಿಕ್ರಿಯೆ

5

Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.