Kasaragod ಇಲಿ ಜ್ವರ; ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ


Team Udayavani, Sep 25, 2024, 1:07 AM IST

Kasaragod ಇಲಿ ಜ್ವರ: ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

ಕಾಸರಗೋಡು: ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇಲಿ ಜ್ವರ ವರದಿಯಾದ ಹಿನ್ನೆಲೆಯಲ್ಲಿ ಜಾಗ್ರತೆ ಪಾಲಿಸಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌ ಕರೆ ನೀಡಿದ್ದಾರೆ.

ಬ್ಯಾಕ್ಟೀರಿಯಾದಿಂದ ಉಂಟಾಗುವ ರಕ್ತ ಅಣು ಬಾಧೆಯಾಗಿದೆ ಇಲಿ ಜ್ವರ. ಇದು ಮನುಷ್ಯರು, ನಾಯಿಗಳಿಗೆ ಹಾಗೂ ಇತರ ಸಾಕು ಪ್ರಾಣಿಗಳಿಗೂ ಹರಡುವ ಸಾಧ್ಯತೆಯಿದೆ. ತಲೆ ನೋವು, ಕಾಲುಗಳ ಸಂಧುಗಳಲ್ಲಿ ನೋವು, ಕಣ್ಣಿಗೆ ಹಳದಿ, ಕೆಂಪು ವರ್ಣ, ಮೂತ್ರದಲ್ಲಿ ಕಡು ಬಣ್ಣ ಈ ಜ್ವರದ ಪ್ರಮುಖ ಲಕ್ಷಣವಾಗಿದೆ ಎಂದರು.

ಈ ರೀತಿ ಮಾಡಲೇಬೇಡಿ
ಜ್ವರದೊಂದಿಗೆ ಹಳದಿ ಕಾಮಾಲೆ ಲಕ್ಷಣ ಕೂಡ ಕಂಡುಬಂದರೆ ಇಲಿ ಜ್ವರ ಎಂದು ಸಂಶಯಿಸಬಹುದು. ಇಲಿ ಜ್ವರ ಬಾರದಂತೆ ತಡೆಯಲು ಕಟ್ಟಿ ನಿಲ್ಲುವ ನೀರಿನಲ್ಲಿ ಇಳಿದು ಸ್ನಾನ ಮಾಡುವುದು, ಕೈ-ಕಾಲುಗಳನ್ನು ತೊಳೆಯುವುದು ಮಾಡಬಾರದು. ಕಟ್ಟಡ ನಿರ್ಮಾಣ ಕಾರ್ಮಿಕರು, ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಕೆಲಸ ಮಾಡುವವರು, ಉದ್ಯೋಗ ಖಾತರಿ ಕಾರ್ಮಿಕರು, ಶುಚೀಕರಣ ಕಾರ್ಮಿಕರು ಮೊದಲಾದವರಿಗೆ ಈ ರೋಗ ತಗಲು ಸಾಧ್ಯತೆಯಿದ್ದು, ಕಡ್ಡಾಯವಾಗಿ ವೈದ್ಯರ ನಿರ್ದೇಶದ ಪ್ರಕಾರ ಪ್ರತಿರೋಧ ಔಷಧವನ್ನು ಸೇವಿಸಬೇಕು. ಇದಕ್ಕಿರುವ ಡೋಕ್ಸಿಸೈಕ್ಲಿನ್‌ ಔಷಧ ಸರಕಾರಿ ಆರೋಗ್ಯ ಕೇಂದ್ರಗಳಿಂದಲೂ ಉಚಿತವಾಗಿ ಲಭಿಸುತ್ತದೆ ಎಂದು ವೈದ್ಯಾಧಿಕಾರಿ ತಿಳಿಸಿದರು.

ಆಹಾರ ಪದಾರ್ಥಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಪೇಕ್ಷಿಸಬಾರದು, ಹಣ್ಣು ಹಂಪಲುಗಳನ್ನು ಶುದ್ಧ ನೀರಿನಲ್ಲಿ ತೊಳೆದು ಸೇವಿಸಬೇಕು, ಅವಲಕ್ಕಿ ಮೊದಲಾದ ಆಹಾರ ಪದಾರ್ಥಗಳನ್ನು ಶುಚಿತ್ವದಿಂದ ತಯಾರಿಸಿರುವುದನ್ನು ಮಾತ್ರವೇ ಉಪಯೋಗಿಸಬೇಕು, ಶೀತಲ ಪಾನೀಯಗಳು, ಪ್ಯಾಕೆಟ್‌ಗಳು, ಕುಡಿಯುವ ನೀರು ಬಾಟಲಿಗಳು, ಇತರ ಆಹಾರ ಸ್ಯಾಚೆಟ್‌ಗಳನ್ನು ಇಲಿ ಸಂಪರ್ಕಿಸದ ರೀತಿಯಲ್ಲಿ ತೆಗೆದಿಟ್ಟು ಮಾರಾಟ ಮಾಡಲು ವ್ಯಾಪಾರಿಗಳು ಗಮನ ಹರಿಸಬೇಕು. ರೋಗ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವವರು ಜ್ವರ ಗಮನಕ್ಕೆ ಬಂದರೆ ಶೀಘ್ರವೇ ಸಮೀಪದ ಚಿಕಿತ್ಸಾ ಕೇಂದ್ರಕ್ಕೆ ತಲುಪಿ ಚಿಕಿತ್ಸೆ ಪಡೆಯಬೇಕು ಎಂದು ಡಾ| ಎ.ವಿ. ರಾಮದಾಸ್‌ ತಿಳಿಸಿದ್ದಾರೆ.

200ರಷ್ಟು ಕಾರ್ಮಿಕರ ಆರೋಗ್ಯ ತಪಾಸಣೆ
ಜಿಲ್ಲೆಯಲ್ಲಿ ಇಲಿ ಜ್ವರದ ಲಕ್ಷಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಚಿಕಿತ್ಸೆಗಾಗಿ ನೀಲೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಸೌಕರ್ಯ ಏರ್ಪಡಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಇತರ ಯಾವುದೇ ರೋಗಿಗಳನ್ನು ಸದ್ಯ ದಾಖಲಿಸದೆ ಇಲಿ ಜ್ವರ ಶಂಕಿತರನ್ನು ಮಾತ್ರವೇ ದಾಖಲಿಸಿ ಸತತ ಐದು ದಿನಗಳ ತನಕ ಅವರ ಮೇಲೆ ತೀವ್ರ ನಿಗಾ ಇರಿಸಲಾಗುತ್ತದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಮಿಕರ ಪೈಕಿ ಹಲವರಲ್ಲಿ ಇಲಿ ಜ್ವರ ರೋಗ ಲಕ್ಷಣಗಳು ಕಂಡುಬಂದಿವೆ.

ಟಾಪ್ ನ್ಯೂಸ್

traffic

Traffic Rules: ಸಂಚಾರ ನಿಯಮಾವಳಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಲಿ

allahabad high court

Allahabad High Court; ಉದ್ಯೋಗಕ್ಕೆ ದಂಪತಿ ಪ್ರತ್ಯೇಕ ವಾಸ ಕ್ರೌರ್ಯವಲ್ಲ

Gwalior bandh call on Bangla match day

INDvsBAN; ಬಾಂಗ್ಲಾ ಪಂದ್ಯದ ದಿನ ಗ್ವಾಲಿಯರ್‌ ಬಂದ್‌ಗೆ ಕರೆ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ

Siddu-Cong

Congress: ಶಾಸಕಾಂಗ ಪಕ್ಷದ ಸಭೆ ಇಲ್ಲ: ಸಿಎಂ ಸಿದ್ದರಾಮಯ್ಯ ಇಂದು ಕೇರಳಕ್ಕೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Udupi: ಕೃಷಿ ಪಂಪ್‌ಸೆಟ್‌ಗೆ ಶೇ.99 ಆಧಾರ್‌ ಜೋಡಣೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ

Rain: ಚುರುಕಾದ ಮುಂಗಾರು; ವಿವಿಧೆಡೆ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಮಿದುಳನ್ನು ತಿನ್ನುವ ಅಮೀಬಾ ಸೋಂಕು: ಚಟ್ಟಂಚಾಲ್‌ ಯುವಕ ಸಾವು

Kasaragod ಮಿದುಳನ್ನು ತಿನ್ನುವ ಅಮೀಬಾ ಸೋಂಕು: ಚಟ್ಟಂಚಾಲ್‌ ಯುವಕ ಸಾವು

8

Virajpete: ಮನೆಯಂಗಳದಲ್ಲಿ ಕಾಡಾನೆ; ಗ್ರಾಮಸ್ಥರಲ್ಲಿ ಆತಂಕ

1

Kasaragod: ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಮಗುವಿನ ಸಾವು

POlice

Kasaragod: ಹಲ್ಲೆ ಪ್ರಕರಣ: ಕೇಸು ದಾಖಲು

MDNL

Kasaragodu: ಎಂಡಿಎಂಎ ಬೆಂಗಳೂರಿನಿಂದ ಪೂರೈಕೆ: ಎಸ್‌ಪಿ ಶಿಲ್ಪಾ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

traffic

Traffic Rules: ಸಂಚಾರ ನಿಯಮಾವಳಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಲಿ

Pay 3 lakhs to perform Durga Puja: Threat in Bangla

Bangladesh; ದುರ್ಗಾ ಪೂಜೆ ನಡೀಬೇಕೆಂದರೆ 3 ಲಕ್ಷ ಕೊಡಿ: ಬಾಂಗ್ಲಾದಲ್ಲಿ ಬೆದರಿಕೆ

allahabad high court

Allahabad High Court; ಉದ್ಯೋಗಕ್ಕೆ ದಂಪತಿ ಪ್ರತ್ಯೇಕ ವಾಸ ಕ್ರೌರ್ಯವಲ್ಲ

Controversial 3 Agriculture Act should be brought back: Kangana Ranaut

Kangana Ranaut: ವಿವಾದಿತ 3 ಕೃಷಿ ಕಾಯ್ದೆ ವಾಪಸ್‌ ತರಬೇಕು: ಕಂಗನಾ

Gwalior bandh call on Bangla match day

INDvsBAN; ಬಾಂಗ್ಲಾ ಪಂದ್ಯದ ದಿನ ಗ್ವಾಲಿಯರ್‌ ಬಂದ್‌ಗೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.