SSLC ವಿಜ್ಞಾನ ಪರೀಕ್ಷೆಗೆ ಶೇ. 20 ಕಠಿನ ಪ್ರಶ್ನೆಗಳು!
ಅಂಕಗಳ ಹಂಚಿಕೆಗೂ ಮಾನದಂಡ ನಿಗದಿ ಮಾಡಿದ ಕೆಎಸ್ಇಎಬಿ
Team Udayavani, Sep 25, 2024, 7:35 AM IST
ಬೆಂಗಳೂರು: ಎಸೆಸೆಲ್ಸಿಯ ವಿಜ್ಞಾನ ಪರೀಕ್ಷೆಯ ಅಂಕ ಹಂಚಿಕೆ ಅಂತಿಮಗೊಂಡಿದ್ದು, ಶೇ. 20 ಅಂಕಗಳ ಕಠಿನ ಪ್ರಶ್ನೆಗಳನ್ನು ನಿಗದಿಪಡಿಸಲಾಗಿದೆ. ಶೇ. 50 ಅಂಕಗಳು ಸಾಧಾರಣ ಕಠಿನ ಪ್ರಶ್ನೆಗಳಿಗೆ ಮತ್ತು ಉಳಿದ ಶೇ. 30 ಅಂಕಗಳು ಸುಲಭ ಪ್ರಶ್ನೆಗಳಿಗೆ ಮೀಸಲಾಗಿರಲಿವೆ.
16 ಅಂಕಗಳಿಗೆ ಕಠಿನ ಪ್ರಶ್ನೆಗಳು, 40 ಅಂಕಗಳಿಗೆ ಸಾಧಾರಣ ಕಠಿನ ಪ್ರಶ್ನೆಗಳು ಮತ್ತು 16 ಅಂಕಗಳಿಗೆ ಸುಲಭ ಪ್ರಶ್ನೆಗಳನ್ನು ನಿಗದಿ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್ಇಎಬಿ) ಸೂಚನೆ ನೀಡಿದೆ.
ಜೀವಶಾಸ್ತ್ರಕ್ಕೆ 28, ಭೌತಶಾಸ್ತ್ರಕ್ಕೆ 27 ಮತ್ತು ರಸಾಯನ ಶಾಸ್ತ್ರಕ್ಕೆ 25 ಅಂಕಗಳನ್ನು ನಿಗದಿ ಪಡಿಸಲಾಗಿದ್ದು, ಒಟ್ಟು 80 ಅಂಕಗಳಿಗೆ ಲಿಖೀತ ಪರೀಕ್ಷೆ ನಡೆಯಲಿದೆ. ಉಳಿದ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿ ಪಡಿಸಲಾಗಿದೆ.
ಅಂಕಗಳ ಹಂಚಿಕೆಗೂ ಮಾನದಂಡ ನಿಗದಿ ಪಡಿಸಲಾಗಿದೆ. ಸ್ಮರಣೆ 16 ಅಂಕ (ಶೇ. 20), ತಿಳಿವಳಿಕೆ 32 (ಶೇ. 40), ಅನ್ವಯ 16 (ಶೇ. 20), ಚಿತ್ರರಚನಾ ಕೌಶಲ 12 (ಶೇ. 15), ಉನ್ನತ ಮಟ್ಟದ ಆಲೋಚನಾ ಕೌಶಲ 4 (ಶೇ. 5) ಅಂಕಗಳನ್ನು ನಿಗದಿ ಪಡಿಸಲಾಗಿದೆ.
1 ಅಂಕದ ಬಹು ಆಯ್ಕೆಯ 8 ಪ್ರಶ್ನೆಗಳು, ಅತೀ ಕಿರು ಉತ್ತರದ 1 ಅಂಕದ 8 ಪ್ರಶ್ನೆಗಳು ಇರುತ್ತವೆ.
ಇನ್ನು , ಕಿರು ಉತ್ತರ ಬಯಸುವ 2 ಅಂಕದ 8 ಪ್ರಶ್ನೆಗಳಿಗೆ ಒಟ್ಟು 16 ಅಂಕಗಳು, ದೀರ್ಘ ಉತ್ತರ ಬಯಸುವ 3 ಅಂಕದ 9 ಪ್ರಶ್ನೆಗಳಿಗೆ 27 ಅಂಕಗಳು, ದೀರ್ಘ ಉತ್ತರ ಬಯಸುವ 4 ಅಂಕದ 4 ಪ್ರಶ್ನೆಗಳಿಗೆ 16 ಅಂಕಗಳನ್ನು ಮತ್ತು ದೀರ್ಘ ಉತ್ತರ ಬಯಸುವ 5 ಅಂಕದ 1 ಪ್ರಶ್ನೆ ಹೀಗೆ ವಿದ್ಯಾರ್ಥಿಗಳು ವಿಜ್ಞಾನದ 80 ಅಂಕಗಳಿಗಾಗಿ ಒಟ್ಟು 38 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಜತೆಗೆ ಚಿತ್ರ ರಚನ ಕೌಶಲದಡಿ ಕೇಳಬಹುದಾದ 17 ಚಿತ್ರಗಳ ಪಟ್ಟಿಯನ್ನು ಕೂಡ ಕೆಎಸ್ಇಎಬಿ ಬಿಡುಗಡೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Scam: ಈ ಪ್ರಕರಣದ ತನಿಖೆ ಬೇಡವೆಂದರೆ, ಇನ್ಯಾವ ಪ್ರಕರಣದ ತನಿಖೆಯಾಗಬೇಕು?: ಹೈಕೋರ್ಟ್
MUDA Scam: ಮುಖ್ಯಮಂತ್ರಿ ವಿರುದ್ಧ ತನಿಖೆಯ ಅಗತ್ಯವಿದೆ: ಹೈಕೋರ್ಟ್
MUDA Case: ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಏನಾಗಲಿದೆ: ಭಾರೀ ಕುತೂಹಲ
ಇಂದು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮುಖ್ಯಮಂತ್ರಿ ಮೇಲ್ಮನವಿ
High Court Order: ಮುಖ್ಯಮಂತ್ರಿ ಬದಲಾವಣೆ ಕೂಗಿಗೆ ಮತ್ತೆ ರೆಕ್ಕೆಪುಕ್ಕ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Crime: ಪತ್ನಿಯ ಶೀಲ ಶಂಕಿಸಿ 5 ವರ್ಷದ ಪುತ್ರಿಯ ಕೊಂದ ತಂದೆ ಬಂಧನ
Bengaluru: ಬಾಲಕ ಸಾವು; ನಾಲ್ವರು ಎಂಜಿನಿಯರ್ ಅಮಾನತು
Siddaramaiah ವಿರುದ್ಧ ಹೈ ಕೋರ್ಟ್ ತೀರ್ಪು: ಕಪಿಲ್ ಸಿಬಲ್ ಪ್ರತಿಕ್ರಿಯೆ
Arrested: ಪ್ರೇಯಸಿಗಾಗಿ ಬಾಲ್ಯ ಗೆಳೆಯನ ಕೊಂದಿದ್ದ ಉಡುಪಿ ಮೂಲದ ಆರೋಪಿ ಸೆರೆ
Mahalakshmi Case: ಮಹಿಳೆಯ ತಲೆ ಬೇರ್ಪಡಿಸಿ ಬಳಿಕ ಇತರೆ ಭಾಗಗಳು ತುಂಡು ತುಂಡು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.