Arizona;ಕಮಲಾ ಹ್ಯಾರಿಸ್ ಚುನಾವಣ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ
ಚುನಾವಣೆ ವೇಳೆ ದೊಡ್ಡ ಸವಾಲಾಗಿ ಪರಿಣಮಿಸಿದ ಭದ್ರತೆ !
Team Udayavani, Sep 25, 2024, 10:53 AM IST
ಅರಿಝೋನಾ: ಇಲ್ಲಿನ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್(Kamala Harris) ಅವರ ಚುನಾವಣ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಟೆಂಪೆ ನಗರದಲ್ಲಿನ ಕಚೇರಿಯ ಮುಂಭಾಗದ ಕಿಟಕಿಗಳ ಮೇಲೆ ಪೆಲೆಟ್ ಗನ್ ಬಳಸಿ ಗುಂಡು ಹಾರಿಸಲಾಗಿದೆ.
ಮಂಗಳವಾರ(ಸೆ24) ಎನ್ಬಿಸಿ ನ್ಯೂಸ್ಗೆ ನೀಡಿದ ಹೇಳಿಕೆಯಲ್ಲಿ, ಹಿಂದಿನ ರಾತ್ರಿ ಘಟನೆ ಸಂಭವಿಸಿದೆ ಎಂದು ಟೆಂಪೆ ಪೊಲೀಸರು ದೃಢಪಡಿಸಿದ್ದಾರೆ. ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಕಚೇರಿಯಲ್ಲಿ ಗುಂಡಿನ ದಾಳಿಯಿಂದ ಹಾನಿಯಾಗಿದೆ ಎಂದು ಹೇಳಿದ್ದು, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ.
ಘಟನೆಯ ಸಮಯದಲ್ಲಿ ಕಚೇರಿ ಆವರಣದೊಳಗೆ ಯಾರೂ ಇರಲಿಲ್ಲ ಎಂದು ಟೆಂಪೆ ಪೋಲೀಸ್ ಸಾರ್ವಜನಿಕ ಮಾಹಿತಿ ಅಧಿಕಾರಿ ರಯಾನ್ ಕುಕ್ ಹೇಳಿದ್ದಾರೆ. ಕಟ್ಟಡದಲ್ಲಿ ಕೆಲಸ ಮಾಡುವವರ ಮತ್ತು ಹತ್ತಿರದವರ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ” ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸ್ಥಳೀಯ ಟಿವಿ ಸ್ಟೇಷನ್ಗಳು ತುಣುಕನ್ನು ಪ್ರಸಾರ ಮಾಡಿದ್ದು, ಅದು ಎರಡು ಗುಂಡು ಬಾಗಿಲು ಮತ್ತು ಎರಡು ಕಿಟಕಿಗಳಲ್ಲಿ ರಂಧ್ರಗಳನ್ನು ತೋರಿಸಿದೆ.ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಕೃತ್ಯ ನಡೆದ ಸ್ಥಳದಿಂದ ಸಂಗ್ರಹಿಸಿದ ಪುರಾವೆಗಳನ್ನು ವಿಶ್ಲೇಷಿಸಲಾಗುತ್ತಿದೆ.
ಶುಕ್ರವಾರ ಅರಿಝೋನಾಗೆ ಕಮಲಾ ಹ್ಯಾರಿಸ್ ಅವರ ನಿಗದಿತ ಪ್ರವಾಸಕ್ಕೆ ಕೆಲವೇ ದಿನಗಳ ಮೊದಲು ಗುಂಡಿನ ದಾಳಿಯ ಕಳವಳಕಾರಿ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh; ದುರ್ಗಾ ಪೂಜೆ ನಡೀಬೇಕೆಂದರೆ 3 ಲಕ್ಷ ಕೊಡಿ: ಬಾಂಗ್ಲಾದಲ್ಲಿ ಬೆದರಿಕೆ
Harini Amarasuriya: ಶ್ರೀಲಂಕಾಕ್ಕೆ 24 ವರ್ಷದ ಬಳಿಕ ಮೊದಲ ಮಹಿಳಾ ಪ್ರಧಾನ ಮಂತ್ರಿ ನೇಮಕ
Israel ವೈಮಾನಿಕ ದಾಳಿಗೆ 500 ಲೆಬನಾನ್ ಜನರು ಮೃತ್ಯು, ಹೆಜ್ಬುಲ್ಲಾ ಪ್ರತೀಕಾರದ ದಾಳಿ
Modi USA tour; ಭಾರತದ ಸೆಮಿಕಂಡಕ್ಟರ್ ಕನಸಿಗೆ ಈಗ ಹೊಸ ‘ಶಕ್ತಿ’
Sri Lanka; 9ನೇ ಅಧ್ಯಕ್ಷರಾಗಿ ಅನುರ ಕುಮಾರ ದಿಸ್ಸಾ ನಾಯಕೆ ಪದಗ್ರಹಣ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
“ದೇಶದ ಯಾವುದೇ ಭಾಗವನ್ನು ಪಾಕ್ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?
Puttur: ಟ್ರೀ ಪಾರ್ಕ್ ನಿರ್ಲಕ್ಷ್ಯಕ್ಕೆ ದುಡ್ಡಿನ ಕೊರತೆ ನೆಪ
Chikkamagaluru: ಓವರ್ ಟೇಕ್ ಮಾಡಲು ಹೋಗಿ ಸೇತುವೆಗೆ ಗುದ್ದಿದ ಬಸ್; ವಿದ್ಯಾರ್ಥಿಗಳಿಗೆ ಗಾಯ
Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ
Darshan ಭೇಟಿಗೆ ಮಾಹಿತಿ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.