Uttar Pradesh: ಕಾಳಿಂಗ ಸರ್ಪವನ್ನು ಕೊಂದು ಮಗುವನ್ನು ರಕ್ಷಿಸಿದ ಪಿಟ್ ಬುಲ್ ಶ್ವಾನ!
ಮನೆಯ ಸಮೀಪ ಗದ್ದೆಗಳು ಇರುವುದರಿಂದ ಹಲವಾರು ಹಾವುಗಳು ಹರಿದಾಡುತ್ತಿರುತ್ತವೆ.
Team Udayavani, Sep 25, 2024, 12:26 PM IST
ಜಾನ್ಸಿ(ಉತ್ತರಪ್ರದೇಶ): ಮನೆಯ ಗಾರ್ಡ್ ನಲ್ಲಿ ಮನೆಗೆಲಸದ ಮಹಿಳೆಯ ಮಗುವೊಂದು ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಳಿಂಗ ಸರ್ಪ(King Cobra) ಬಂದಿದ್ದು, ಈ ವೇಳೆ ಮಗು ಕಿರುಚಿಕೊಂಡಿತ್ತು. ಆಗ ಮನೆಯ ಪಿಟ್ ಬುಲ್(Pit Bull) ನಾಯಿ ಓಡಿಬಂದು ಹಾವನ್ನು ಕಚ್ಚಿ ಕೊಲ್ಲುವ ಮೂಲಕ ಮಗುವನ್ನು ರಕ್ಷಿಸಿರುವ ಘಟನೆ ಉತ್ತರಪ್ರದೇಶದ ಜಾನ್ಸಿಯ ಶಿವ ಗಣೇಶ್ ಕಾಲೋನಿಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಮನೆಯ ಗಾರ್ಡನ್ ನ ಒಂದು ಮೂಲೆಯಲ್ಲಿ ಪಿಟ್ ಬುಲ್ ಶ್ವಾನ “ಜೆನ್ನಿ”ಯನ್ನು ಕಟ್ಟಿಹಾಕಲಾಗಿತ್ತು. ಆದರೆ ಹಾವನ್ನು ಕಂಡು ಮಗು ಕಿರುಚಾಡುತ್ತಿರುವುದನ್ನು ಗಮನಿಸಿ ಸರಪಳಿಯನ್ನು ಹರಿದುಕೊಂಡು ಬಂದು ಹಾವನ್ನು ಕಚ್ಚಿ ಕೊಂದಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ವೈರಲ್ ಆಗಿದೆ.
ವಿಡಿಯೋದಲ್ಲಿ, ಪಿಟ್ ಬುಲ್ ಕಾಳಿಂಗ ಸರ್ಪದ ತಲೆಯನ್ನು ಕಚ್ಚಿ ಬಲವಾಗಿ ಅಲ್ಲಾಡಿಸಿ ನೆಲಕ್ಕೆ ಬಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ಸುಮಾರು ಐದು ನಿಮಿಷಗಳ ಕಾಲ ಕಚ್ಚಿ ಎಳೆದಾಡಿದ ಪರಿಣಾಮ ಹಾವು ಸಾವನ್ನಪ್ಪಿರುವುದು ವಿಡಿಯೋದಲ್ಲಿದೆ.
ಈವರೆಗೆ 8-10 ಹಾವನ್ನು ಕೊಂದ ಪಿಟ್ ಬುಲ್ ಶ್ವಾನ!
ಶ್ವಾನ ಜೆನ್ನಿ (Jenny) ಇದೇ ಮೊದಲ ಬಾರಿಗೆ ಹಾವನ್ನು ಕೊಂದಿಲ್ಲ. ಈಗಾಗಲೇ 8-10 ಹಾವನ್ನು ಕೊಂದಿದ್ದು, ಜೀವವನ್ನು ಉಳಿಸುವ ಕೆಲಸ ಮಾಡಿದೆ ಎಂದು ಪೆಟ್ ಬುಲ್ ಮಾಲೀಕ ಪಂಜಾಬ್ ಸಿಂಗ್ ತಿಳಿಸಿದ್ದಾರೆ.
झांसी से एक हैरान करदेने वाला एक वीडियो सामने आया है.. जहां पिटबुल ने जहरीले सांप से बच्चों की जान बचाई.. सांप को दांतों से चबाकर मार डाला..शिवगणेश बिहार कॉलोनी के मकान में घुसा था सांप..#Jhansi #PitBull pic.twitter.com/n31fdyG6bU
— Vinit Tyagi(Journalist) (@tyagivinit7) September 24, 2024
ಮಂಗಳವಾರ (ಸೆ.24) ನಾನು ಮನೆಯಲ್ಲಿ ಇರಲಿಲ್ಲವಾಗಿತ್ತು. ಆದರೆ ನನ್ನ ಮಗ ಮತ್ತು ಕೆಲಸದವರ ಮಕ್ಕಳು ಇದ್ದಿದ್ದರು. ನಮ್ಮ ಮನೆಯ ಸಮೀಪ ಗದ್ದೆಗಳು ಇರುವುದರಿಂದ ಹಲವಾರು ಹಾವುಗಳು ಮಳೆಗಾಲದ ಸಂದರ್ಭದಲ್ಲಿ ನಮ್ಮ ಮನೆ ಗಾರ್ಡ್ ನಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಜೆನ್ನಿ 8-10 ಹಾವನ್ನು ಕೊಂದಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ವಿರುದ್ಧ ಹರಿಯಾಣದಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ
“ದೇಶದ ಯಾವುದೇ ಭಾಗವನ್ನು ಪಾಕ್ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?
High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!
BJP; ಆಕ್ರೋಶದ ಬಳಿಕ ಹೇಳಿಕೆ ಹಿಂಪಡೆದುಕೊಂಡ ಕಂಗನಾ ರಣಾವತ್
Siddaramaiah ವಿರುದ್ಧ ಹೈ ಕೋರ್ಟ್ ತೀರ್ಪು: ಕಪಿಲ್ ಸಿಬಲ್ ಪ್ರತಿಕ್ರಿಯೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kodailbail: ಕೆ.ಎಸ್.ರಾವ್ ರಸ್ತೆ; ಪಾದಚಾರಿಗಳಿಗಿಲ್ಲ ಸುರಕ್ಷತೆ !
Pushpa 2: ಅಲ್ಲು ಅರ್ಜುನ್ ʼಪುಷ್ಪ-2ʼನಿಂದ ಖ್ಯಾತ ನಟಿ ಔಟ್
Netravati Trek: ದಿ ನೆಕ್ಸ್ಟ್ ಸ್ಟಾಪ್ ಈಸ್ ನೇತ್ರಾವತಿ ಪೀಕ್!
Mangaluru: ಟ್ರಾಫಿಕ್ ಸಮಸ್ಯೆ: ಶಾಲಾ ಸಮಯ ವ್ಯತ್ಯಾಸ ಸೂತ್ರ ಮತ್ತೆ ಚರ್ಚೆಗೆ
ವಿದ್ಯುತ್ ಪರಿವರ್ತಕದ ಬಳಿ ಮೇಯುತ್ತಿದ್ದ 2 ಎಮ್ಮೆಗಳಿಗೆ ವಿದ್ಯುತ್ ಪ್ರವಹಿಸಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.