Kundapura ಪುರಸಭೆಗೆ ಹೊರೆಯಾದ ನೀರು ಪೂರೈಕೆ ಹೊಣೆ ಗೊಂದಲ; ಜಲಸಿರಿ ಬಿಳಿಯಾನೆಗೆ ಅಂಕುಶ?


Team Udayavani, Sep 25, 2024, 4:01 PM IST

Kundapura ಪುರಸಭೆಗೆ ಹೊರೆಯಾದ ನೀರು ಪೂರೈಕೆ ಹೊಣೆ ಗೊಂದಲ; ಜಲಸಿರಿ ಬಿಳಿಯಾನೆಗೆ ಅಂಕುಶ?

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ನಿರಂತರ 24 ತಾಸು ಕುಡಿಯುವ ನೀರಿಗಾಗಿ ಆರಂಭಿಸಿದ ಯೋಜನೆ ಕುಡ್ಸೆಂಪ್‌ ಮೂಲಕ ಮಂಜೂರಾದ ಜಲಸಿರಿ ಯೋಜನೆ. ಇಲ್ಲಿಗೆ ಯೋಜನೆ ಆರಂಭಿಸುವಾಗ ಗುತ್ತಿಗೆದಾರ ಸಂಸ್ಥೆಗೆ ಪುರಸಭೆ ವಹಿಸಿದ್ದ ಶರತ್ತುಗಳೇ ಬೇರೆ, ಈಗ ಆಗುತ್ತಿರುವುದೇ ಬೇರೆ. ಇದರಿಂದಾಗಿ ಕೋಟಿಗಟ್ಟಲೆ ಆದಾಯ ಪುರಸಭೆಗೆ ಬರುವ ಬದಲು ಗುತ್ತಿಗೆದಾರ ಸಂಸ್ಥೆಯ ಪಾಲಾಗುತ್ತಿದೆ. ಅಷ್ಟಲ್ಲದೇ ಪುರಸಭೆಯೇ ನಿರ್ವಹಣೆ ಮಾಡುವ ನೀರಿಗೂ ಗುತ್ತಿಗೆದಾರ ಸಂಸ್ಥೆಗೆ ಹಣ ಹೋಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಹೊಸದಾಗಿ ಆಯ್ಕೆಯಾಗಿರುವ ಆಡಳಿತ ಮನಸ್ಸು ಮಾಡೀತೇ ಎಂಬ ಚರ್ಚೆ ನಡೆಯುತ್ತಿದೆ.

ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಹೂಡಿಕೆಯಲ್ಲಿ ಕುಂದಾಪುರದಲ್ಲಿ ಜಲಸಿರಿ ಕಾಮಗಾರಿ ನಡೆದಿದೆ. ಕೊಲ್ಕತ್ತಾದ ಮೆ| ಜಿ.ಕೆ.ಡಬ್ಲ್ಯು ಕನ್ಸಲ್ಟ್ ಸಂಸ್ಥೆ ತಾಂತ್ರಿಕ ಸಲಹೆಯಡಿ ಲಕ್ಷ್ಮೀ ಎಂಜಿನಿಯರಿಂಗ್‌ ಸಂಸ್ಥೆ ಕಾಮಗಾರಿ ನಡೆಸಿದೆ. 23.1 ಕೋ.ರೂ. ವೆಚ್ಚದ ಯೋಜನೆ ಕಳೆದ ವರ್ಷ ಪೂರ್ಣಗೊಂಡಿದೆ. ಇನ್ನು 5 ವರ್ಷಗಳ ಕಾಲ ಇದೇ ಗುತ್ತಿಗೆದಾರ ಸಂಸ್ಥೆಯೇ ಇದರ ನಿರ್ವಹಣೆ ಮಾಡಲಿದ್ದು ಅದಕ್ಕಾಗಿ 12.4 ಕೋ. ರೂ. ನೀಡಲಾಗುತ್ತದೆ. ಅಂದರೆ ಒಟ್ಟು ವೆಚ್ಚ 35.5 ಕೋ.ರೂ. ಆಗುತ್ತದೆ.

ನೀರು ಪುರಸಭೆಯದ್ದು ದುಡ್ಡು ಜಲಸಿರಿಗೆ!
ನಿಯಮದ ಪ್ರಕಾರ ಸಂಸ್ಥೆ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 6,100 ನಳ್ಳಿಗಳ ಸಂಪರ್ಕ ಮಾಡಬೇಕಿತ್ತು. ಪುರಸಭೆ ವತಿಯಿಂದ ಅದಕ್ಕೂ ಮೊದಲೇ 3,375 ಸಂಪರ್ಕ ಇತ್ತು. ಜಲಸಿರಿ ಯೋಜನೆ ಬಳಿಕ 4,735 ನಳ್ಳಿಗಳಿವೆ. ಅಂದರೆ ಗುತ್ತಿಗೆದಾರ ಸಂಸ್ಥೆ ಮಾಡಿದ್ದು 4 ವರ್ಷದಲ್ಲಿ 1,360 ಹೊಸ ಸಂಪರ್ಕಗಳನ್ನು ಮಾತ್ರ. ಇದರ ನಿರ್ವಹಣೆಗೆ ವಾರ್ಷಿಕ 1.25 ಕೋ.ರೂ. ನಿರ್ವಹಣೆ ಶುಲ್ಕ ಎಂದು ಪುರಸಭೆಯಿಂದ ಪಡೆಯುತ್ತದೆ. ಸಂಸ್ಥೆಗೆ ಇಷ್ಟೆಲ್ಲ ನೀಡಿಯೂ ಜಪ್ತಿ ಘಟಕದ ನಿರ್ವಹಣೆ, ಡೀಸೆಲ್‌, ವಿದ್ಯುತ್‌ ಬಿಲ್‌ನ್ನು ಪುರಸಭೆಯೇ ವ್ಯಯಿಸುತ್ತಿದೆ ಎಂದರು. ಹಾಗಾದರೆ ಸಂಸ್ಥೆ ಮಾಡುತ್ತಿರುವುದು ಏನು ಎನ್ನುವುದಕ್ಕೆ ಉತ್ತರವೇ ಇಲ್ಲ.

ಕೇವಲ 4,375 ನಳ್ಳಿ ಸಂಪರ್ಕ ನಿರ್ವಹಣೆಗೆ 1.25 ಕೋ.ರೂ. ಪಡೆದರೆ ಜನರೇಟರ್‌ ಬಿಲ್‌, ವಿದ್ಯುತ್‌ ಬಿಲ್‌ ಎಂದು ಪುರಸಭೆಗೆ ಮತ್ತಷ್ಟೇ ಮೊತ್ತ ಬರುತ್ತದೆ. ಬರೀ ಇಷ್ಟು ಸಂಪರ್ಕಕ್ಕೆ 2.5 ಕೋ.ರೂ. ವ್ಯಯಿಸುವ ಪುರಸಭೆ ಬಹುಶಃ ದೇಶದಲ್ಲೇ ಇರಲಾರದು!

ಹಳ್ಳಿ ನೀರಿಗೂ ಜಲಸಿರಿಗೆ ಹಣ
ಪುರಸಭೆಗೆ ಜಪ್ತಿಯ ಜಂಬೂ ನದಿಯಿಂದ ಶುದ್ಧೀಕರಿಸಿದ ಕುಡಿಯುವ ನೀರು ಪೈಪ್‌ಲೈನ್‌ ಮೂಲಕ ಬರುತ್ತದೆ. ಹಾಗೆ ನೀರು ತರುವಾಗ ಪೈಪ್‌ಲೈನ್‌ ಹಾದು ಹೋಗುವ ಗ್ರಾ.ಪಂ.ಗಳ ಜನರಿಗೂ ನೀರು ವಿತರಿಸಲಾಗುತ್ತಿದೆ. ಈ ವ್ಯವಸ್ಥೆ ಜಲಸಿರಿ ಬರುವ ಮೊದಲೇ ಅನುಷ್ಠಾನದಲ್ಲಿ ಇದೆ. ಈ ಪಂಚಾಯತ್‌ಗಳು ಪುರಸಭೆಗೆ ಕೊಡುವ ನೀರಿನ ಬಳಕೆಯ ಹಣವನ್ನೂ ಜಲಸಿರಿ ನಿರ್ವಹಣೆಯ ಸಂಸ್ಥೆಯೇ ಪಡೆಯುವುದು ಕಾನೂನು ಬಾಹಿರ. ಇದಿನ್ನೂ ಪುರಸಭೆ ಹಂತದಲ್ಲೇ ಇತ್ಯರ್ಥ ಮಾಡಲಾಗಲಿಲ್ಲ.

ನಿರ್ವಹಣೆ ಮಾಡದೆ ಕೈಕೊಟ್ಟ ಸಂಸ್ಥೆ
ಪಂಚಾಯತ್‌ಗಳಿಗೆ ಹೋಗುವ ನೀರಿನ ನಿರ್ವಹಣೆ ಸಂಸ್ಥೆ ಮಾಡುತ್ತಿಲ್ಲ. ಜಪ್ತಿ ಘಟಕದ ನಿರ್ವಹಣೆ ಮಾಡುತ್ತಿಲ್ಲ. ಹಾಗಿದ್ದ ಮೇಲೆ ಪಂಚಾಯತ್‌ ನೀರಿನ ಮೊತ್ತ ಸಂಸ್ಥೆಗೆ ಯಾಕೆ ಕೊಡಬೇಕು ಎಂದು ಪುರಸಭೆಯ ಅನೇಕ ಸಭೆಗಳಲ್ಲಿ ಚರ್ಚೆಯಾಗಿದೆ. ಶಾಸಕರ, ಎಸಿ ಮಧ್ಯಸ್ಥಿಕೆಯಲ್ಲಿ ಸಭೆಯಾಗಿದೆ.   ಈ ಹಿಂದೆ ಜಪ್ತಿಯಲ್ಲಿ ಉಪ್ಪುನೀರು ಬಂದಾಗ ಪಂಚಾಯತ್‌ಗಳಿಗೆ, ಪುರಸಭೆ ವ್ಯಾಪ್ತಿಗೆ ಉಪ್ಪುನೀರು ಬಂತು. ಆಗ ಗಲಾಟೆಯೆದ್ದಾಗ ಪುರಸಭೆ ಜನರಿಗೇನೋ ಟ್ಯಾಂಕರ್‌ ನೀರು ಕೊಡಲಾಯಿತು. ಪಂಚಾಯತ್‌ಗಳಿಗೆ ಬರೀ ಚೊಂಬು. ಹಾಗಿದ್ದರೂ ಪಂಚಾಯತ್‌ಗಳ ಹಣ ಈ ಸಂಸ್ಥೆಗೇ ಬೇಕಂತೆ! ಈ ವಿವಾದ ಈ ಬಾರಿ ಇತ್ಯರ್ಥವಾಗುತ್ತದೆಯೇ ಎಂದು ಕಾದು ನೋಡಬೇಕು.

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

ಎಲೆಕ್ಷನ್ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕಲ್ವಾ?: ಎಂ.ಬಿ.ಪಾಟೀಲ್ ಪ್ರಶ್ನೆ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ

17-v-somanna

Hubli: ಈ ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!

Israel: ಲೈವ್‌ ಸಂದರ್ಶನದ ವೇಳೆಯೇ ಪತ್ರಕರ್ತನ ಮನೆ ಮೇಲೆ ಇಸ್ರೇಲ್‌ ಮಿಸೈಲ್‌ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Kundapura: ಹದಗೆಟ್ಟ ಬ್ರಹ್ಮಾವರ-ಬಿದ್ಕಲ್‌ಕಟ್ಟೆ ರಾಜ್ಯ ಹೆದ್ದಾರಿ

11

Malpe: ಸಮುದ್ರ ಪ್ರಕ್ಷುಬ್ಧ; ಸೆಪ್ಟೆಂಬರ್ 15ರ ಬಳಿಕವೂ ತೆರೆದುಕೊಳ್ಳದ ಮಲ್ಪೆ ಬೀಚ್‌

Kollur: ಸಂಪೂರ್ಣ ಹದಗೆಟ್ಟ ವಂಡ್ಸೆ- ಕೊಲ್ಲೂರು ಮುಖ್ಯ ರಸ್ತೆ; ವಾಹನ ಸಂಚಾರವೇ ಕಷ್ಟ

Kollur: ಸಂಪೂರ್ಣ ಹದಗೆಟ್ಟ ವಂಡ್ಸೆ- ಕೊಲ್ಲೂರು ಮುಖ್ಯ ರಸ್ತೆ; ವಾಹನ ಸಂಚಾರವೇ ಕಷ್ಟ

Karkala: ಪಾರ್ಕಿಂಗ್‌ಗೆ ಜಾಗವೇ ಇಲ್ಲ; ಹಾಗಾಗಿ ಕಂಡ ಕಡೆ ಠಿಕಾಣಿ!

Karkala: ಪಾರ್ಕಿಂಗ್‌ಗೆ ಜಾಗವೇ ಇಲ್ಲ; ಹಾಗಾಗಿ ಕಂಡ ಕಡೆ ಠಿಕಾಣಿ!

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

ಉ.ಪ್ರ. ಬಳಿಕ ಹಿಮಾಚಲದಲ್ಲೂ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ

14

Chikkamagaluru: ವಿದ್ಯುತ್ ತಂತಿ ತುಳಿದು 5 ಹಸುಗಳು ಸಾವು

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ

13

Panaji: ಇಲೆಕ್ಟ್ರಿಕ್ ಮೀಟರ್ ಕಳ್ಳತನ ಪ್ರಕರಣ; ಆರೋಪಿ ಬಂಧನ

vijayaendra

MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.