Yuva Dasara: ಅ.6 -10 ರವರೆಗೆ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ; ಇಲ್ಲಿದೆ ವಿವರ
ಕಾರ್ಯಕ್ರಮದ ಪಟ್ಟಿಗೆ ಹಲವರ ಆಕ್ರೋಶ
Team Udayavani, Sep 25, 2024, 5:51 PM IST
ಮೈಸೂರು: ನಾಡ ಹಬ್ಬ ಮೈಸೂರು ದಸರಾ (Mysore Dasara) ಸಂಭ್ರಮವನ್ನು ಅದ್ಧೂರಿ ಆಚರಣೆಗೆ ದಿನಗಣನೆ ಬಾಕಿ ಉಳಿದಿದೆ. ರಾಜ್ಯದ ಜನ ಮಾತ್ರವಲ್ಲದೆ ದೇಶದೆಲ್ಲೆಡೆಯಿಂದ ನಮ್ಮ ದಸರಾ ನೋಡಲು ಜನ ಹರಿದು ಬರುತ್ತಾರೆ.
ಪ್ರತಿ ವರ್ಷ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಜನಾಕರ್ಷಣೆಯಾಗಿ ಗಮನ ಸೆಳೆಯುವ ಯುವ ದಸರಾವನ್ನು(Yuva Dasara) ಈ ಬಾರಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಬದಲಿಗೆ ನಗರದ ಹೊರವಲಯದಲ್ಲಿ ನಡೆಯಲಿದೆ.
ಉತ್ತನಹಳ್ಳಿ ಬಳಿಯ 100 ಎಕರೆ ಖಾಲಿ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಯುವ ದಸರಾ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ಯುವ ದಸರಾದಲ್ಲಿ ನಡೆಯುವ ಕಾರ್ಯಕ್ರಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಪಟ್ಟಿಯನ್ನು ನೋಡಿ ಅನೇಕರು ಆಕ್ರೋಶವನ್ನು ಹೊರಹಾಕಿದ್ದಾರೆ.
ಅಕ್ಟೋಬರ್ 6 ರಿಂದ 10ರವರೆಗೆ ʼಯುವ ದಸರಾʼ ಮಹೋತ್ಸವ ಜರುಗಲಿದೆ. ಈ ಸಂಭ್ರಮದ ಸಂಜೆಯನ್ನು ಸುಮಧುರಗೊಳಿಸಲು ಈ ಬಾರಿ ಬಾಲಿವುಡ್ನ ಖ್ಯಾತ ಗಾಯಕರು ಮೈಸೂರಿಗೆ ಬರಲಿದ್ದಾರೆ.
ಯುವ ದಸರಾ ಕಾರ್ಯಕ್ರಮಗಳ ವಿವರ..
ಅಕ್ಟೋಬರ್ 6: ಅಕ್ಟೋಬರ್ 6 ರಂದು ಯುವ ದಸರಾ ವೇದಿಕೆಯಲ್ಲಿ ಖ್ಯಾತ ಬಾಲಿವುಡ್ ಗಾಯಕಿಯಾಗಿರುವ ಶ್ರೇಯಾ ಘೋಷಾಲ್ ಅವರು ತನ್ನ ಮ್ಯೂಸಿಕಲ್ ಪರ್ಫಮೆನ್ಸ್ ನೀಡಲಿದ್ದಾರೆ.
ಅಕ್ಟೋಬರ್ 7: ಈ ದಿನ ಖ್ಯಾತ ಸಂಗೀತ ನಿರ್ದೇಶಕ- ಸಂಯೋಜಕ ಕನ್ನಡದ ಅಪ್ಪಟ ಪ್ರತಿಭೆ ರವಿ ಬಸ್ರೂರು ಮತ್ತವರ ತಂಡದಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 8: ಈ ಸಂಜೆ ಬಾಲಿವುಡ್ನ ಖ್ಯಾತ ಗಾಯಕ ಹಾಗೂ ರ್ಯಾಪರ್ ಆಗಿರುವ ಬಾದ್ಷಾ ಅವರು ಸಾವಿರಾರು ಮಂದಿ ದಸರಾ ಪ್ರೇಕ್ಷಕರನ್ನು ಬಾಲಿವುಡ್ ಹಾಡುಗಳ ಮೂಲಕ ರಂಜಿಸಲಿದ್ದಾರೆ.
ಅಕ್ಟೋಬರ್ 9: ಭಾರತದ ಖ್ಯಾತ ಗಾಯಕರು ಹಾಗೂ ಸಂಗೀತ ಸಂಯೋಕರಾಗಿರುವ ಎ.ಆರ್.ರೆಹಮಾನ್ ಅವರು ಕರುನಾಡಿನ ದಸರಾ ಹಬ್ಬಕ್ಕೆ ತನ್ನ ಹಾಡುಗಳ ಮೂಲಕ ಮೆರಗನ್ನು ನೀಡಿ ರಂಜಿಸಲಿದ್ದಾರೆ.
ಅಕ್ಟೋಬರ್ 10: ಯುವ ದಸರಾದ ಅಂತಿಮ ದಿನದಂದು ದಿಗ್ಗಜ ಮ್ಯೂಸಿಕ್ ಡೈರೆಕ್ಟರ್ ಇಳಯರಾಜ ಅವರು ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ.
ಕಾರ್ಯಕ್ರಮ ಪಟ್ಟಿ ರಿಲೀಸ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅಸಮಾಧಾನವನ್ನು ಹೊರಹಾಕಿದ್ದಾರೆ. ಕನ್ನಡದ ರವಿ ಬಸ್ರೂರು ಹೊರತುಪಡಿಸಿದರೆ ಬೇರೆ ಎಲ್ಲಾ ಕಾರ್ಯಕ್ರಮವನ್ನು ಬಾಲಿವುಡ್ ಹಾಗೂ ತಮಿಳಿನ ಜನರಿಗೆ ನೀಡಿದ್ದೀರಿ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಕನ್ನಡ ಪ್ರತಿಭೆಗಳಿಗೆ ಅವಕಾಶ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ
Competitive Exam: ಯುಪಿಎಸ್ಸಿ ಮಾದರಿ ಕೆಪಿಎಸ್ಸಿಯಲ್ಲೂ ಸುಧಾರಣೆಯಾಗಲಿ: ಸಿಎಂ
Mahalakshmi Case: ಮಹಾಲಕ್ಷ್ಮಿ ಹತ್ಯೆ ಪ್ರಕರಣ… ಶಂಕಿತ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ
ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ
MUDA Case: ಭಂಡತನ ಬಿಟ್ಟು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thirthahalli: ಹಾಸ್ಟೆಲ್ ಮಕ್ಕಳ ಊಟದಲ್ಲಿ ಹುಳ ಪ್ರತ್ಯಕ್ಷ!
ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ
Competitive Exam: ಯುಪಿಎಸ್ಸಿ ಮಾದರಿ ಕೆಪಿಎಸ್ಸಿಯಲ್ಲೂ ಸುಧಾರಣೆಯಾಗಲಿ: ಸಿಎಂ
Kollur: ಮರಕ್ಕೆ ಗುದ್ದಿ ಪಿಕಪ್ಗೆ ಢಿಕ್ಕಿಯಾದ ಬಸ್; ಹಲವರಿಗೆ ಗಾಯ
Thailand: ಥಾಯ್ಲೆಂಡ್ನಲ್ಲಿ ಈಗ ಸಲಿಂಗ ವಿವಾಹ ಕಾನೂನುಬದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.