ಹುಯಿಲಗೋಳ ಆರೋಗ್ಯ ಕೇಂದ್ರಕ್ಕಿಲ್ಲ ರಸ್ತೆ: ಬೀದಿದೀಪಗಳ ವ್ಯವಸ್ಥೆಯೂ ಇಲ್ಲ


Team Udayavani, Sep 25, 2024, 5:34 PM IST

ಹುಯಿಲಗೋಳ ಆರೋಗ್ಯ ಕೇಂದ್ರಕ್ಕಿಲ್ಲ ರಸ್ತೆ: ಬೀದಿದೀಪಗಳ ವ್ಯವಸ್ಥೆಯೂ ಇಲ್ಲ

ಉದಯವಾಣಿ ಸಮಾಚಾರ
ಗದಗ: ಅದು ಸುತ್ತಲಿನ ಹಲವು ಗ್ರಾಮಗಳ ಜನತೆಗೆ ಆರೋಗ್ಯ ಸೇವೆ ನೀಡುವ ಪ್ರಾಥಮಿಕ ಆರೋಗ್ಯ ಕೇಂದ್ರ. ಆ ಆರೋಗ್ಯ ಕೇಂದ್ರಕ್ಕೆ ಭೂಮಿ ದಾನದಿಂದ ಬಂದಿದ್ದು. ಆದರೆ ಈ ಆಸ್ಪತ್ರೆಗೆ ತಪಾಸಣೆ ಅಥವಾ ಚಿಕಿತ್ಸೆಗೆ ಹೋಗುವ ರೋಗಿಗಳಷ್ಟೇ ಅಲ್ಲ ಆಸ್ಪತ್ರೆ ಸಿಬ್ಬಂದಿಯೂ ತಲುಪಲು ಹೈರಾ ಣಾಗುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿಗೆ ಹೋಗಲು ಇರುವ ಅಧ್ವಾನ ರಸ್ತೆ. ಹೌದು. ತಾಲೂಕಿನ ಹುಯಿಲಗೋಳ ಗ್ರಾಮದ ಹೊರ ವಲಯದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ತಲುಪಲು ಹರಸಾಹಸ ಪಡುವಂತಾಗಿದೆ.

ಈ ಆರೋಗ್ಯ ಕೇಂದ್ರ ಹುಯಿಲಗೋಳ ಗ್ರಾಮದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿದ್ದು, ಯಾವುದೇ ಸುಸಜ್ಜಿತ ರಸ್ತೆ ಇಲ್ಲ.
ಬೀದಿದೀಪಗಳ ವ್ಯವಸ್ಥೆಯೂ ಇಲ್ಲ. ಕತ್ತಲಾದರೆ ಸಾಕು ಆಸ್ಪತ್ರೆಗೆ ಹೋಗಲು ಭಯಪಡುವಂತಾಗಿದೆ. ಅಲ್ಲದೇ ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬರುವ ಅನಾರೋಗ್ಯಪೀಡಿತ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಕೈಯಲ್ಲಿ ಪಾದರಕ್ಷೆ ಹಿಡಿದು ಸಂಚಾರ: ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರೋಗಿಗಳು, ಕೆಲಸ ಮಾಡುವ ಸಿಬ್ಬಂದಿಗಳು ಓಡಾಟ ಅಷ್ಟು ಸಲೀಸಲ್ಲ. ಅದರಲ್ಲೂ ಕೊಂಚ ಮಳೆಯಾದರೂ ಸಾಕು ವಾಹನಗಳನ್ನು ದೂರದಲ್ಲೇ ನಿಲ್ಲಿಸಿ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿದುಕೊಂಡೇ ಹೋಗುವುದು ಅನಿವಾರ್ಯವಾಗುತ್ತಿದೆ.

ಆಸ್ಪತ್ರೆಗೆ ಭೂಮಿ ದಾನ: ಸಾರ್ವಜನಿಕರ ಅನುಕೂಲಕ್ಕಾಗಿ ಹುಯಿಲಗೋಳ ಗ್ರಾಮದ ದಿ|ಯಲ್ಲಪ್ಪ ಮು. ಹಂಚಿನಾಳ ಹಾಗೂ ದಿ|ಭೀಮವ್ವ ಯ. ಹಂಚಿನಾಳ ಅವರ ಸ್ಮರಣಾರ್ಥ ಮುದಕಪ್ಪ ಯಲ್ಲಪ್ಪ ಹಂಚಿಹಾಳ ಹಾಗೂ ಲಕ್ಷ್ಮವ್ವ ಮುದಕಪ್ಪ ಹಂಚಿನಾಳ ದಂಪತಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ತಮ್ಮ ಸ್ವಂತ ಮಾಲ್ಕಿ ವಹಿವಾಟಿಯಲ್ಲಿರುವ
ಹುಯಿಲಗೋಳ ಗ್ರಾಮದಿಂದ ಸುಮಾರು ಅರ್ಧ ಕಿ.ಮೀ. ಅಂತರದಲ್ಲಿರುವ 3 ಎಕರೆ 20 ಗುಂಟೆ ಜಮೀನನ್ನು 2001ರಲ್ಲಿ ದಾನವಾಗಿ ನೀಡಿದ್ದರು.

ಸರಕಾರದವರು ಜಮೀನಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಿದ್ದಾರೆ. ಆದರೆ ಆ ಆರೋಗ್ಯ ಕೇಂದ್ರ ಸಾರ್ವಜನಿಕವಾಗಿ ಮುಕ್ತಗೊಳಿಸದೇ ಹಾಗೆ ಸುಮಾರು ವರ್ಷಗಳವರೆಗೆ ಬಿಟ್ಟಿದ್ದರಿಂದ ದಾನಿಗಳಾದ ಮುದಕಪ್ಪ ಹಂಚಿನಾಳ ಅವರೇ ತಮ್ಮ ಸ್ವಂತ ಖರ್ಚಿನಿಂದ ಓಪನಿಂಗ್‌ ಮಾಡಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೇ ತಮ್ಮದೇ ಸ್ವಂತ ಖರ್ಚಿನಲ್ಲಿ ಕೊಳವೆಬಾವಿಯನ್ನೂ ಕೊರೆಯಿಸಿ ನೀರಿನ ಅನುಕೂಲ ಮಾಡಿಕೊಟ್ಟಿದ್ದಾರೆ ಇಷ್ಟೆಲ್ಲ ವ್ಯವಸ್ಥೆಯನ್ನು ಭೂದಾನಿಗಳೇ ಮಾಡಿದ್ದರೂ ಈ ಆಸ್ಪತ್ರೆಗೆ ಹೋಗಿ ಬರಲು ಒಂದು ಸೂಕ್ತ ರಸ್ತೆಯನ್ನು ಸರ್ಕಾರ ನಿರ್ಮಿಸಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿ ಧಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಆಸ್ಪತ್ರೆಗೆ ಹೋಗಿ ಬರಲು ಕೂಡಲೇ ಒಂದು ಸುಸಜ್ಜಿತ, ಶಾಶ್ವತ ಋತು ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

ನಮ್ಮ ತಂದೆ ದಿ|ಯಲ್ಲಪ್ಪ ಹಂಚಿನಾಳ ಹಾಗೂ ದಿ| ಭೀಮವ್ವ ಹಂಚಿನಾಳ ಅವರ ಸ್ಮರಣಾರ್ಥ ಸಾರ್ವಜನಿಕರಿಗೆ ಆರೋಗ್ಯ ಸೇವೆ
ಸಿಗುವಂತಾಗಲು 3 ಎಕರೆ 20 ಗುಂಟೆ ಜಮೀನನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ದಾನ ನೀಡಿದ್ದೇವೆ. ಆದರೆ ಸೌಜನ್ಯಕ್ಕೂ ಸರ್ಕಾರ, ಇಲಾಖೆ ಅಧಿಕಾರಿಗಳು ಅಲ್ಲಿಗೆ ಹೋಗಲು ಒಂದು ಶಾಶ್ವತ ರಸ್ತೆ ಮಾಡಿಕೊಡುತ್ತಿಲ್ಲ.
ಮುದಕಪ್ಪ ಯಲ್ಲಪ್ಪ ಹಂಚಿನಾಳ, ಭೂದಾನಿ

ಮಳೆ ಬಂದಾಗ ನಮ್ಮ ವಾಹನಗಳನ್ನು ಜನತಾ ಪ್ಲಾಟ್‌ನಲ್ಲಿ ಇಟ್ಟು ನಡೆದುಕೊಂಡು ಹೋಗುತ್ತೇವೆ. ಮಳೆಗಾಲದಲ್ಲಿ ಓಡಾಟ ತೀವ್ರ ತೊಂದರೆಯಾಗುತ್ತದೆ. ರೋಗಿಗಳ ಪಾಡೂ ಅಷ್ಟೇ.
ಹೆಸರು ಹೇಳಲಿಚ್ಛಿಸದ ಪ್ರಾಥಮಿಕ
ಆರೋಗ್ಯ ಕೇಂದ್ರದ ಸಿಬ್ಬಂದಿ.

ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ದಾನಿಗಳು ಭೂಮಿ ಒದಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿರುವ ಭೂಮಿ ಕೊಡಲು
ಮುಂದೆ ಬರುತ್ತಿಲ್ಲ. ಅನಿವಾರ್ಯ ಹಳ್ಳದ ದಾರಿಯಲ್ಲಿ ಸಾಗಬೇಕಾದ ಅನಿವಾರ್ಯತೆಯಿದೆ. ಭೂಮಿ ನೀಡುವವರೆಗೆ ರಸ್ತೆ ನಿರ್ಮಿಸುವುದು ಕಷ್ಟ ಸಾಧ್ಯ.
ಡಾ|ಎಸ್‌.ಎಸ್‌.ಈಲಗುಂದ, ಡಿಎಚ್‌ಒ, ಗದಗ

*ಅರುಣಕುಮಾರ ಹಿರೇಮಠ

 

ಟಾಪ್ ನ್ಯೂಸ್

Thirthahalli: ಹಾಸ್ಟೆಲ್ ಮಕ್ಕಳ ಊಟದಲ್ಲಿ ಹುಳ ಪ್ರತ್ಯಕ್ಷ!

Thirthahalli: ಹಾಸ್ಟೆಲ್ ಮಕ್ಕಳ ಊಟದಲ್ಲಿ ಹುಳ ಪ್ರತ್ಯಕ್ಷ!

ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ

ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ

KPSC-Meet

Competitive Exam: ಯುಪಿಎಸ್‌ಸಿ ಮಾದರಿ ಕೆಪಿಎಸ್‌ಸಿಯಲ್ಲೂ ಸುಧಾರಣೆಯಾಗಲಿ: ಸಿಎಂ

Thailand: ಥಾಯ್ಲೆಂಡ್‌ನ‌ಲ್ಲಿ ಈಗ ಸಲಿಂಗ ವಿವಾಹ ಕಾನೂನುಬದ್ಧ

Thailand: ಥಾಯ್ಲೆಂಡ್‌ನ‌ಲ್ಲಿ ಈಗ ಸಲಿಂಗ ವಿವಾಹ ಕಾನೂನುಬದ್ಧ

ಕೃಷಿ ಕಾಯ್ದೆ ಹೇಳಿಕೆ ವಾಪಸ್‌ ಪಡೆದ ಕಂಗನಾ: ಮೋದಿ ಸ್ಪಷ್ಟನೆ ಕೇಳಿದ ರಾಹುಲ್‌

ಕೃಷಿ ಕಾಯ್ದೆ ಹೇಳಿಕೆ ವಾಪಸ್‌ ಪಡೆದ ಕಂಗನಾ: ಮೋದಿ ಸ್ಪಷ್ಟನೆ ಕೇಳಿದ ರಾಹುಲ್‌

BBK11: ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆಗೆ ಪ್ರೇಕ್ಷಕರೇ ಪ್ರಭುಗಳು

BBK11: ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆಗೆ ಪ್ರೇಕ್ಷಕರೇ ಪ್ರಭುಗಳು

Mahalakshmi Case: ಮಹಾಲಕ್ಷ್ಮಿ ಹತ್ಯೆ ಪ್ರಕರಣ… ಶಂಕಿತ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ

Mahalakshmi Case: ಮಹಾಲಕ್ಷ್ಮಿ ಹತ್ಯೆ ಪ್ರಕರಣ… ಶಂಕಿತ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-gadag

Gadag: ತಂಗಿಯನ್ನು ಬರ್ಬರವಾಗಿ ಕೊಲೆಗೈದು ಪೊಲೀಸರಿಗೆ ಶರಣಾದ ಅಣ್ಣ

Jamadhar

Vachana Darshan: ಆರ್‌ಎಸ್‌ಎಸ್‌ನಿಂದ ಲಿಂಗಾಯತರಲ್ಲಿ ಒಡಕು ಮೂಡಿಸುವ ಹುನ್ನಾರ: ಡಾ.ಜಾಮದಾರ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag

ಕಳಸಾ-ಬಂಡೂರಿ: ಮಹದಾಯಿ ಜಾರಿಗೆ ಕರವೇ ಪಾದಯಾತ್ರೆ ಆರಂಭ

cyber crime

Cybercrime; ಚಾಲ್ತಿ ಖಾತೆ ತೆರೆದು ಕೋಟ್ಯಂತರ ರೂ.ವರ್ಗಾವಣೆ: ಇಬ್ಬರ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Thirthahalli: ಹಾಸ್ಟೆಲ್ ಮಕ್ಕಳ ಊಟದಲ್ಲಿ ಹುಳ ಪ್ರತ್ಯಕ್ಷ!

Thirthahalli: ಹಾಸ್ಟೆಲ್ ಮಕ್ಕಳ ಊಟದಲ್ಲಿ ಹುಳ ಪ್ರತ್ಯಕ್ಷ!

ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ

ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ

KPSC-Meet

Competitive Exam: ಯುಪಿಎಸ್‌ಸಿ ಮಾದರಿ ಕೆಪಿಎಸ್‌ಸಿಯಲ್ಲೂ ಸುಧಾರಣೆಯಾಗಲಿ: ಸಿಎಂ

WhatsApp Image 2024-09-25 at 21.00.45

Kollur: ಮರಕ್ಕೆ ಗುದ್ದಿ ಪಿಕಪ್‌ಗೆ ಢಿಕ್ಕಿಯಾದ ಬಸ್‌; ಹಲವರಿಗೆ ಗಾಯ

Thailand: ಥಾಯ್ಲೆಂಡ್‌ನ‌ಲ್ಲಿ ಈಗ ಸಲಿಂಗ ವಿವಾಹ ಕಾನೂನುಬದ್ಧ

Thailand: ಥಾಯ್ಲೆಂಡ್‌ನ‌ಲ್ಲಿ ಈಗ ಸಲಿಂಗ ವಿವಾಹ ಕಾನೂನುಬದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.