Rishabh Pant: ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌, ಟಾಪ್‌ ಟೆನ್‌ಗೆ ಮರಳಿದ ರಿಷಭ್‌ ಪಂತ್‌


Team Udayavani, Sep 26, 2024, 7:30 AM IST

Rishabh Pant: ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌… ಟಾಪ್‌ ಟೆನ್‌ಗೆ ಮರಳಿದ ರಿಷಭ್‌ ಪಂತ್‌

ದುಬಾೖ: ಬಾಂಗ್ಲಾದೇಶ ವಿರುದ್ಧದ “ಕಮ್‌ ಬ್ಯಾಕ್‌’ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ ರಿಷಭ್‌ ಪಂತ್‌, ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಮರಳಿ ಟಾಪ್‌-10 ಯಾದಿಯನ್ನು ಅಲಂಕರಿಸಿದ್ದಾರೆ. ಅವರೀಗ 731 ಅಂಕಗಳೊಂದಿಗೆ 6ನೇ ಸ್ಥಾನಿಯಾಗಿದ್ದಾರೆ.

ಚೆನ್ನೈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಹೊಡೆದ ಯಶಸ್ವಿ ಜೈಸ್ವಾಲ್‌ (751) 5ನೇ ಸ್ಥಾನಕ್ಕೆ ಏರಿದ್ದಾರೆ. ಆದರೆ ನಾಯಕ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಅವರು 5 ಸ್ಥಾನಗಳ ಕುಸಿತ ಕಂಡಿದ್ದಾರೆ. ಇಬ್ಬರೂ ಚೆನ್ನೈಯಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದರು. ರೋಹಿತ್‌ ಅವರೇನೋ ಟಾಪ್‌-10 ಯಾದಿಯಲ್ಲಿ ಉಳಿದಿದ್ದಾರೆ (716 ಅಂಕ, 10ನೇ ಸ್ಥಾನ). ಆದರೆ ವಿರಾಟ್‌ ಕೊಹ್ಲಿ 12ನೇ ಸ್ಥಾನಕ್ಕೆ ಇಳಿದಿದ್ದಾರೆ (709).

ಜೋ ರೂಟ್‌ (899), ಕೇನ್‌ ವಿಲಿಯಮ್ಸನ್‌ (852) ಮತ್ತು ಡ್ಯಾರಿಲ್‌ ಮಿಚೆಲ್‌ (760) ಮೊದಲ 3 ಸ್ಥಾನ ಕಾಯ್ದುಕೊಂಡಿದ್ದಾರೆ.

ಅಶ್ವಿ‌ನ್‌ ನಂ.1 ಸ್ಥಾನ ಗಟ್ಟಿ
ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಆರ್‌. ಅಶ್ವಿ‌ನ್‌ ಅವರ ಅಗ್ರಸ್ಥಾನ ಗಟ್ಟಿಯಾಗಿದೆ. ಚೆನ್ನೈ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಹಾರಿಸಿದ ಅವರು 871 ಅಂಕ ಹೊಂದಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಮೂರರಿಂದ 2ನೇ ಸ್ಥಾನಕ್ಕೆ ಏರಿದ್ದಾರೆ (854). ಜೋಶ್‌ ಹೇಝಲ್‌ವುಡ್‌ ಒಂದು ಸ್ಥಾನ ಕೆಳಗಿಳಿದರು (3).

ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಮೋಘ ಪ್ರಗತಿ ಸಾಧಿಸಿದವರೆಂದರೆ ಶ್ರೀಲಂಕಾದ ಪ್ರಭಾತ್‌ ಜಯಸೂರ್ಯ. ಅವರದು 5 ಸ್ಥಾನಗಳ ಜಿಗಿತ. ನ್ಯೂಜಿಲ್ಯಾಂಡ್‌ ಎದುರಿನ ಗಾಲೆ ಟೆಸ್ಟ್‌ ಪಂದ್ಯದಲ್ಲಿ 9 ವಿಕೆಟ್‌ ಉಡಾಯಿಸುವ ಮೂಲಕ ಅವರು 8ನೇ ಸ್ಥಾನಕ್ಕೆ ಏರಿದರು (743). ರವೀಂದ್ರ ಜಡೇಜ ಒಂದು ಸ್ಥಾನದ ಪ್ರಗತಿ ಸಾಧಿಸಿ ಆರಕ್ಕೇರಿದರು (804).

ಟಾಪ್‌-10 ಟೆಸ್ಟ್‌ ಬ್ಯಾಟರ್
1. ಜೋ ರೂಟ್‌ 899
2. ಕೇನ್‌ ವಿಲಿಯಮ್ಸನ್‌ 852
3. ಡ್ಯಾರಿಲ್‌ ಮಿಚೆಲ್‌ 760
4. ಸ್ಟೀವನ್‌ ಸ್ಮಿತ್‌ 757
5. ಯಶಸ್ವಿ ಜೈಸ್ವಾಲ್‌ 751
6. ರಿಷಭ್‌ ಪಂತ್‌ 731
7. ಉಸ್ಮಾನ್‌ ಖ್ವಾಜಾ 728
8. ಮೊಹಮ್ಮದ್‌ ರಿಜ್ವಾನ್‌ 720
9. ಮಾರ್ನಸ್‌ ಲಬುಶೇನ್‌ 720
10. ರೋಹಿತ್‌ ಶರ್ಮ 716

ಟಾಪ್‌-10 ಟೆಸ್ಟ್‌ ಬೌಲರ್
1. ಆರ್‌. ಅಶ್ವಿ‌ನ್‌ 871
2. ಜಸ್‌ಪ್ರೀತ್‌ ಬುಮ್ರಾ 854
3. ಜೋಶ್‌ ಹೇಝಲ್‌ವುಡ್‌ 847
4. ಪ್ಯಾಟ್‌ ಕಮಿನ್ಸ್‌ 820
5. ಕಾಗಿಸೊ ರಬಾಡ 820
6. ರವೀಂದ್ರ ಜಡೇಜ 804
7. ನಥನ್‌ ಲಿಯಾನ್‌ 801
8. ಪ್ರಭಾತ್‌ ಜಯಸೂರ್ಯ 743
9. ಕೈಲ್‌ ಜೇಮಿಸನ್‌ 721
10. ಶಾಹೀನ್‌ ಶಾ ಅಫ್ರಿದಿ 709

ಟಾಪ್ ನ್ಯೂಸ್

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

2-bng

Bengaluru: ಮದುವೆ ಮರೆಮಾಚಿದಕ್ಕೆ 59 ತುಂಡು ಮಾಡಿ ಹತ್ಯೆ

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

World Tourism Day: ಹಂಪಿ ಪಯಣದ ಹ್ಯಾಪಿ ಕಥನ

World Tourism Day: ಹಂಪಿ ಪಯಣದ ಹ್ಯಾಪಿ ಕಥನ

SEMI-Cond

World Digital Revolution: ಜಾಗತಿಕ ರಾಜಕಾರಣಕ್ಕೆ ಸೆಮಿಕಂಡಕ್ಟರ್‌

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ttt

Karnataka; ರಾಜ್ಯ ಟೆನಿಸ್‌ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ

1-team

Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್‌  ಇಂದಿನಿಂದ

1-asddsad

NADA; ನೋಟಿಸ್‌ ನೀಡಿದರೂ ವಿನೇಶ್‌ ಫೋಗಾಟ್‌ ವಿರುದ್ಧ ಕ್ರಮವಿಲ್ಲ?

1-sadasd

Under 19 ಕ್ರಿಕೆಟ್‌; 3ನೇ ಪಂದ್ಯ: ಭಾರತಕ್ಕೆ ಜಯ

1-SL

Test; ದಿನೇಶ್‌ ಚಂಡಿಮಾಲ್‌ ಆಕರ್ಷಕ ಶತಕ :ಉತ್ತಮ ಸ್ಥಿತಿಯಲ್ಲಿ ಶ್ರೀಲಂಕಾ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3-thirthahalli

Thirthahalli: ಹಣ ಇಟ್ಟು ಇಸ್ಪೀಟ್ ಆಡುತ್ತಿದ್ದವರ ಬಂಧನ!

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

2-bng

Bengaluru: ಮದುವೆ ಮರೆಮಾಚಿದಕ್ಕೆ 59 ತುಂಡು ಮಾಡಿ ಹತ್ಯೆ

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

World Tourism Day: ಹಂಪಿ ಪಯಣದ ಹ್ಯಾಪಿ ಕಥನ

World Tourism Day: ಹಂಪಿ ಪಯಣದ ಹ್ಯಾಪಿ ಕಥನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.