Hebri: ಕುಚ್ಚಾರು, ಮಾತ್ಕಲ್: ಆನೆ ಹಾವಳಿ; ಕೃಷಿಗೆ ಹಾನಿ
Team Udayavani, Sep 26, 2024, 12:19 AM IST
ಹೆಬ್ರಿ: ತಾಲೂಕಿನ ಕುಚ್ಚಾರು ಪರಿಸರದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದೆ.
ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯದ ಪರಿಸರದಲ್ಲಿ 4 ತಿಂಗಳಿಂದ ಆನೆ ಸಂಚರಿ ಸುತ್ತಿದ್ದು, ಈಗ ಕುಚ್ಚಾರು ಮಾತ್ಕಲ್ ಪ್ರದೇಶಕ್ಕೂ ಧಾಂಗುಡಿ ಇಟ್ಟಿದೆ.
ಮಾತ್ಕಲ್ನ ಆನಂದ ನಾಯ್ಕ ಅವರ ತೋಟದ ಬಾಳೆ ಹಾಗೂ ತೆಂಗು ಗಿಡಗಳಿಗೆ ಹಾನಿ ಮಾಡಿದೆ. ಅಣ್ಣಯ್ಯ ಅಂಬಿಗರ ಮನೆ ಸಮೀಪ ಬೈನೆ ಮರವನ್ನೂ ಕೆಡಹಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಭಯ ಬೇಡ
ಆನೆ ಬಗ್ಗೆ ಇಲಾಖೆ ಸಿಬಂದಿ ನಿಗಾ ಇರಿಸಿದ್ದಾರೆ.ಕುಚ್ಚಾರು ಪರಿಸರದಲ್ಲಿ ರಾತ್ರಿ ಒಂಟಿಯಾಗಿ ಸಂಚರಿಸಬೇಡಿ ಎಂದು ಸೂಚನೆ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿ ಚಿದಾನಂದಪ್ಪ ಹೇಳಿದ್ದಾರೆ.
ಮುಳಿಕ್ಕಾರಿನಲ್ಲಿ ಕಾಡಾನೆ
ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ಮುಳಿಕ್ಕಾರಿನಲ್ಲಿ ಎರಡು ದಿನಗಳಿಂದ ದಾಳಿ ನಡೆಸುತ್ತಿರುವ ಕಾಡಾನೆಗಳು ಭತ್ತದ ಪೈರನ್ನು ನಾಶ ಮಾಡಿವೆ. ಇಲ್ಲಿನ ಶೀನ ಬಾಜಿದಡಿ ಅವರ ಮನೆ ಹಾಗೂ ಪರಿಸರದ ಗದ್ದೆಗಳಲ್ಲಿ ಕಾಡಾನೆಗಳು ಸುತ್ತಾಡಿ ತೀವ್ರ ಹಾನಿ ಮಾಡಿವೆ. ಪರಿಸರದಲ್ಲಿ ಮರಿಯಾನೆ ಸಹಿತ ಕಾಡಾನೆಗಳು ಆಗಾಗ ಕಂಡುಬರುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ
Protest: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ: ಕಂದಾಯ ಸೇವೆ ವ್ಯತ್ಯಯ
Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್: ಅಬ್ರಹಾಂ
Udupi: ಜೀನ್ ಚಿಕಿತ್ಸೆ, ನಿಖರ ಔಷಧ ಸಮ್ಮೇಳನ: ಡಾ| ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಸಮ್ಮಾನ
New Industrial Area Construction: ಭೂ ಸ್ವಾಧೀನ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.