Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಮಂಗಳೂರು ವಿವಿ ಸಂಸ್ಥಾಪನ ದಿನ

Team Udayavani, Sep 26, 2024, 12:39 AM IST

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಉಳ್ಳಾಲ: ಯುವಜನರು ತಮ್ಮ ಜೀವನದಲ್ಲಿ ಸಂತೃಪ್ತಿ ಮತ್ತು ಮಾನವತಾವಾದದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ಕೊಣಾಜೆ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಮಂಗಳಾ ಸಭಾಂಗಣದಲ್ಲಿ ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ 45ನೇ ಸಂಸ್ಥಾಪನ ದಿನದ ಉಪನ್ಯಾಸ ನೀಡಿದ ಅವರು, ನಾವು ದುರಾಸೆಯ ರೋಗವನ್ನು ತೊಡೆದು ಹಾಕಿದರೆ ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಾಗಿರುತ್ತದೆ. ನಮ್ಮಲ್ಲಿ ಕಾನೂನುಬದ್ಧ ಸಂಪತ್ತು ಇದ್ದಾಗ, ನಾವು ಐಟಿ/ಇಡಿ ದಾಳಿಗಳ ಬಗ್ಗೆ ಚಿಂತಿಸಬೇಕಾಗಿಲ್ಲ.

ಭ್ರಷ್ಟಾಚಾರ ಮುಂದುವರಿದರೆ ದೇಶದಲ್ಲಿ ಕ್ರಾಂತಿ ಉಂಟಾಗುತ್ತದೆ. ದೇಶ ತುಂಡಾಗುವ ಭೀತಿ ಇದೆ. ಆಗ ನ್ಯಾಯತೀರ್ಮಾನಕ್ಕೆ ಸುಪ್ರೀಂಕೋರ್ಟ್‌ ಕೂಡ ಇಲ್ಲದ ಪರಿಸ್ಥಿತಿ ತಲೆದೋರಬಹುದು. ದೇಶ ರಣಾಂಗಣವಾಗಲಿದೆ. ದೇಶದ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಿ ಈಗಿಂದಲೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವ ಅಗತ್ಯ ಇದೆ. ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಮೂಲಕ ಸಮಾಜವನ್ನು ಪರಿಷ್ಕರಿಸುವ ಕಾರ್ಯ ಆಗಬೇಕು ಎಂದರು.

ರಾಜಕೀಯ ವೃತ್ತಿಯಾಗಿದೆ
ಜನರು ಸೇವೆಗಾಗಿ ರಾಜಕೀಯಕ್ಕೆ ಬರಬೇಕೇ ಹೊರತು ಹಣ ಗಳಿಸಲು ಅಲ್ಲ. ದುರದೃಷ್ಟವಶಾತ್‌ ಇಂದು ರಾಜಕೀಯವು ಒಂದು ವೃತ್ತಿಯಾಗಿ ಮಾರ್ಪಟ್ಟಿದೆ. ಈ ಹಿಂದೆ ಚುನಾಯಿತ ಪ್ರತಿನಿಧಿಗಳಿಗೆ ವೇತನ ಇರಲಿಲ್ಲ. ಈಗ ಸಂಸತ್ತಿನ ಅಧಿವೇಶನಗಳು 120 ದಿನಗಳ ಕಾಲ ನಡೆಯುತ್ತಿದ್ದರೂ, ಅವರಿಗೆ ವೇತನ ನೀಡಲಾಗುತ್ತದೆ ಎಂದರು. ಚುನಾಯಿತ ಪ್ರತಿನಿಧಿಗಳು ಜನರ ಕಲ್ಯಾಣಕ್ಕಾಗಿ ತಮ್ಮ ಪಾತ್ರದ ಮಹತ್ವವನ್ನು ಅರಿತುಕೊಳ್ಳದೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಕಲಾಪಗಳನ್ನು ಸ್ಥಗಿತಗೊಳಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾ| ಹೆಗ್ಡೆ, ಇಂದು ಯಾವುದೇ ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಲಾಗುತ್ತದೆ ಎಂದರು.

ಅಧಿಕಾರಶಾಹಿಯಲ್ಲಿನ ಮೌಲ್ಯಗಳ ಕುಸಿತ
ನೇಮಕಾತಿಗಳ ಸಮಯದಲ್ಲಿ ಅತಿರೇಕದ ಭ್ರಷ್ಟಾಚಾರಕ್ಕೆ ಕಾರಣ ವಾಗಿದೆ. ಲಂಚ ನೀಡುವ ಮೂಲಕ ನೇಮಕ ಗೊಳ್ಳುವ ಅಧಿಕಾರಿಗಳು ನಿರ್ಗತಿಕರಿಗೆ ಹೇಗೆ ನ್ಯಾಯ ಒದಗಿಸುತ್ತಾರೆ ಎಂದು ಪ್ರಶ್ನಿಸಿದ ನ್ಯಾ| ಹೆಗ್ಡೆ, ನಾವು ಸಂವಿಧಾನದ ಆಕಾಂಕ್ಷೆಯಿಂದ ದೂರ ಸರಿಯುತ್ತಿದ್ದೇವೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷೆ ಪ್ರಮಾಣವು ಕೇವಲ ಶೇ. 27 ಆಗಿದೆ. ಇದರಿಂದಾಗಿ ಯಾರೂ ಹೆದರುವುದಿಲ್ಲ ಎಂದರು.

ಕುಲಪತಿ ಪ್ರೊ| ಪಿ.ಎಲ್‌.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಉನ್ನತ ಶಿಕ್ಷಣಕ್ಕೆ 45 ವರ್ಷಗಳಿಂದ ಅಪಾರ ಕೊಡುಗೆ ನೀಡುತ್ತಿರುವ ಮಂಗಳೂರು ವಿವಿಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು. ಮುಂದಿನ ಭವಿಷ್ಯಕ್ಕಾಗಿ ಹಕ್ಕನ್ನು ಬದಿಗೆ ಸರಿಸಿ, ಕರ್ತವ್ಯದ ಬಗ್ಗೆ ಪ್ರತಿಜ್ಞೆ ಕೈಗೊಳ್ಳಬೇಕು ಎಂದರು.

ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ| ಎ.ಎಂ.ಖಾನ್‌ ವಂದಿಸಿದರು. ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.

ಟಾಪ್ ನ್ಯೂಸ್

BY-Vijayendra

CM: ಸಿದ್ದುಗೆ ಮಾದರಿ ಕೇಜ್ರಿವಾಲೋ, ರಾಮಕೃಷ್ಣ ಹೆಗಡೆಯೋ?: ಬಿ.ವೈ.ವಿಜಯೇಂದ್ರ

Modi 2

PM Modi; 10 ವರ್ಷದಲ್ಲಿ ಕಾಂಗ್ರೆಸ್‌ ಸಮರ್ಥ ವಿಪಕ್ಷವೂ ಆಗಲಿಲ್ಲ

ISREL

Israel; ಬೈರುತ್‌ ಮೇಲೆ ಕ್ಷಿಪಣಿದಾಳಿ: ಹೆಜ್ಬುಲ್ಲಾ ಕಮಾಂಡರ್‌ ಹ*ತ್ಯೆ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

Mysuru-Dasara

Mysuru Dasara: ಎದೆ ಝಲ್‌ ಎನ್ನಿಸಿದ ಶಬ್ದಕ್ಕೂ ಜಗ್ಗದ ಗಜಪಡೆ

Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌: ಅಬ್ರಹಾಂ Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌: ಅಬ್ರಹಾಂ

Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌: ಅಬ್ರಹಾಂ

Rain: ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

Rain: ಕರಾವಳಿಯ ವಿವಿಧೆಡೆ ಸಾಧಾರಣ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain: ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

Rain: ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

Mangaluru: ಅಕ್ರಮ ಮರಳುಗಾರಿಕೆಗೆ ತಡೆ; ದ.ಕ. ಜಿಲ್ಲಾಧಿಕಾರಿ

Mangaluru: ಅಕ್ರಮ ಮರಳುಗಾರಿಕೆಗೆ ತಡೆ; ದ.ಕ. ಜಿಲ್ಲಾಧಿಕಾರಿ

Dakshina Kannada: ಆಹಾರ ಸಂಸ್ಕರಣೆ ತಾಣವಾಗಿಸಲು ಸಂಸದ ಚೌಟ ಮನವಿ

Dakshina Kannada: ಆಹಾರ ಸಂಸ್ಕರಣೆ ತಾಣವಾಗಿಸಲು ಸಂಸದ ಚೌಟ ಮನವಿ

Surathkal: ನಿಗೂಢ ಸ್ಫೋಟ; ಬೆಚ್ಚಿ ಬಿದ್ದ ಜನತೆ; ನಿಟ್ಟುಸಿರು

Surathkal: ನಿಗೂಢ ಸ್ಫೋಟ; ಬೆಚ್ಚಿ ಬಿದ್ದ ಜನತೆ; ನಿಟ್ಟುಸಿರು

Mangaluru: ಸೇಲ್ಸ್‌ ಎಕ್ಸಿಕ್ಯೂಟಿವ್‌ ನಾಪತ್ತೆ

Mangaluru: ಸೇಲ್ಸ್‌ ಎಕ್ಸಿಕ್ಯೂಟಿವ್‌ ನಾಪತ್ತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BY-Vijayendra

CM: ಸಿದ್ದುಗೆ ಮಾದರಿ ಕೇಜ್ರಿವಾಲೋ, ರಾಮಕೃಷ್ಣ ಹೆಗಡೆಯೋ?: ಬಿ.ವೈ.ವಿಜಯೇಂದ್ರ

police USA

California: ದೇಗುಲ ಧ್ವಂಸ ಮಾಡಿದ ದುಷ್ಕರ್ಮಿಗಳು

Supreme Court

Supreme; ಎಲ್ಲ ಮಹಿಳೆಯರಿಗೂ ಕೌಟುಂಬಿಕ ದೌರ್ಜನ್ಯತಡೆ ಕಾಯ್ದೆ ಅನ್ವಯ

Modi 2

PM Modi; 10 ವರ್ಷದಲ್ಲಿ ಕಾಂಗ್ರೆಸ್‌ ಸಮರ್ಥ ವಿಪಕ್ಷವೂ ಆಗಲಿಲ್ಲ

ISREL

Israel; ಬೈರುತ್‌ ಮೇಲೆ ಕ್ಷಿಪಣಿದಾಳಿ: ಹೆಜ್ಬುಲ್ಲಾ ಕಮಾಂಡರ್‌ ಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.