‘Stree 2’ OTT release: ಓಟಿಟಿಗೆ ಬಂತು ಸೂಪರ್ ಹಿಟ್ ʼಸ್ತ್ರೀ-2ʼ; ಎಲ್ಲಿ ನೋಡಬಹುದು?
Team Udayavani, Sep 26, 2024, 1:19 PM IST
ಮುಂಬಯಿ: ಈ ವರ್ಷ ಬಾಲಿವುಡ್ (Bollywood) ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸೂಪರ್ ಹಿಟ್ ʼಸ್ತ್ರೀ-2ʼ (Stree 2) ಸದ್ದಿಲ್ಲದೆ ಓಟಿಟಿಗೆ ಲಗ್ಗೆಯಿಟ್ಟಿದೆ.
ಶ್ರದ್ಧಾ ಕಪೂರ್ (Shraddha Kapoor) ರಾಜ್ ಕುಮಾರ್ ರಾವ್ (Rajkummar Rao) ಪ್ರಧಾನ ಭೂಮಿಕೆಯಲ್ಲಿ ಬಂದ ʼಸ್ತ್ರೀ-2ʼ ಆಗಸ್ಟ್ 15ರಂದು ರಿಲೀಸ್ ಆಗಿತ್ತು. ರಿಲೀಸ್ ಆದ ಕೆಲವೇ ದಿನಗಳಲ್ಲಿ ಸಿನಿಮಾಕ್ಕೆ ಅಮೋಘ ರೆಸ್ಪಾನ್ಸ್ ವ್ಯಕ್ತವಾಗಿತ್ತು.
ಬಾಕ್ಸ್ ಆಫೀಸ್ನಲ್ಲಿ ಇದುವರೆಗೆ ಅಂದರೆ 41 ದಿನಗಳವರೆಗೆ ಸಿನಿಮಾ 800 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಮೊನ್ನೆ ಮೊನ್ನವರೆಗೂ ಸಿನಿಮಾ ಥಿಯೇಟರ್ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಇದೀಗ ಸದ್ದಿಲ್ಲದೆ ಸೂಪರ್ ಹಿಟ್ ʼಸ್ತ್ರೀ-2ʼ ಓಟಿಟಿಗೆ ಲಗ್ಗೆಯಿಟ್ಟಿದೆ.
ಇದನ್ನೂ ಓದಿ: BBK-11: ಬಿಗ್ ಬಾಸ್ ಮನೆಗೆ ಹೋಗೋ ಸ್ಪರ್ಧಿಗಳ ಫೋಟೋಸ್ ಲೀಕ್.. ಇವರೇ ನೋಡಿ ಅವರು..
ಇನ್ನು ಕೂಡ ಕೆಲ ಥಿಯೇಟರ್ ಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಅಮೇಜಾನ್ ಪ್ರೈಮ್ನಲ್ಲಿ ʼಸ್ತ್ರೀ-2ʼ ಸ್ಟ್ರೀಮಿಂಗ್ ಆಗಿದೆ. ಆದರೆ ಬಾಡಿಗೆ ಕಟ್ಟಿ ಚಂದಾದಾರರು ಸಿನಿಮಾವನ್ನು ನೋಡಬಹುದಾಗಿದೆ. 349 ರೂ. ಕಟ್ಟಿ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಶೀಘ್ರದಲ್ಲೇ ಸಿನಿಮಾ ಉಚಿತವಾಗಿ ಸ್ಟ್ರೀಮಿಂಗ್ ಆಗಲಿದೆ.
ಗ್ರಾಮೀಣ ಭಾರತದಲ್ಲಿ ಹಾರಾರ್ ಕಾಮಿಡಿ ʼಸ್ತ್ರೀ-2ʼ ಕಥೆ ಸಾಗುತ್ತದೆ. ಗ್ರಾಮವೊಂದರಲ್ಲಿ ನಿಗೂಢವಾಗಿ ಮಹಿಳೆಯರು ನಾಪತ್ತೆ ಆಗುತ್ತಾರೆ. ಈ ನಡುವೆ ಅಲ್ಲಿ ದೆವ್ವದ ಕಾಟವೂ ಶುರುವಾಗುತ್ತದೆ. ಈ ಎಲ್ಲದರ ನಡುವೆ ವಿಕ್ಕಿ (ರಾಜ್ ಕುಮಾರ್ ರಾವ್) ತನ್ನ ಸ್ನೇಹಿತರು ಮತ್ತು ಊರನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎನ್ನುವುದನ್ನು ಹಾರಾರ್ ಹಾಗೂ ಕಾಮಿಡಿ ಅಂಶಗಳೊಂದಿಗೆ ʼಸ್ತ್ರೀ-2ʼ ನಲ್ಲಿ ಹೇಳಲಾಗಿದೆ.
ಮ್ಯಾಡಾಕ್ ಫಿಲ್ಮ್ಸ್ ಹಾಗೂ ಜಿಯೋ ಸ್ಟುಡಿಯೋಸ್ ಸಂಸ್ಥೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ.
ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ , ಅಪರಶಕ್ತಿ ಖುರಾನಾ, ತಮನ್ನಾ ಭಾಟಿಯಾ, ವರುಣ್ ಧವನ್ ಮತ್ತು ಅಕ್ಷಯ್ ಕುಮಾರ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Emergency;ಕೆಲವು ದೃಶ್ಯಕ್ಕೆ ಕತ್ತರಿ ಬಿದ್ದರಷ್ಟೇ ಅನುಮತಿ: ಕೋರ್ಟ್ಗೆ ಸಿಬಿಎಫ್ಸಿ
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Veer Savarkar ಚಿತ್ರ ಆಸ್ಕರ್ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್ ಹೇಳಿದ್ದೇನು…
Divorce; 8 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್
Samarjit Lankesh: ʼಗೌರಿʼ ಬಳಿಕ ಇಂದ್ರಜಿತ್ ಪುತ್ರನಿಗೆ ಬಾಲಿವುಡ್ನಿಂದ ಬಿಗ್ ಆಫರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.