Kota: ಹಾವೇರಿಯ ಹಾಡುಗಾರರ  ಸಂಗೀತವೀಗ ಕೇಳಿಸುತ್ತಿಲ್ಲ!

 ಶ್ರಾವಣದಲ್ಲಿ ಕರಾವಳಿಯಲ್ಲಿ ಕಾಣಸಿಗುತ್ತಿದ್ದ ಹತ್ತಾರು ತಂಡಗಳಲ್ಲಿ ಈಗಿರುವುದು ಒಂದೆರಡು ಮಾತ್ರ

Team Udayavani, Sep 26, 2024, 4:39 PM IST

10

ಕೋಟ: ಕಳೆದ ದಶಕದವರೆಗೆ‌ ಹಿಂದೆ ಹಾವೇರಿ, ಶಿಗ್ಗಾಂವಿ ಮೊದಲದ ಬಯಲುಸೀಮೆ ಭಾಗದವರಾದ ವೇಷಧಾರಿಗಳು ಎಂದು ಕರೆಯುವ ಸುಗಮ ಸಂಗೀತ ಹಾಡುಗಾರರ ಹತ್ತಾರು ತಂಡಗಳು ಶ್ರಾವಣ ಮಾಸದಲ್ಲಿ ಕರಾವಳಿಗೆ ಬರುತ್ತಿತ್ತು. ಎರಡು ತಿಂಗಳು ಇಲ್ಲಿಯೇ ವಾಸ್ತವ್ಯವಿದ್ದು ತಬಲ, ಹಾರ್ಮೋನಿಯಂ, ತಾಳದೊಂದಿಗೆ ಮನೆ-ಮನೆಗೆ ಭೇಟಿ ನೀಡಿ ಭಕ್ತಿಗೀತೆ, ನೀತಿ ಪದ್ಯ, ಸುಗಮ ಸಂಗೀತ ಗೀತೆಗಳನ್ನು ಹಾಡಿ ಜನರ ಮನರಂಜಿಸುವುದರ ಜತೆಗೆ ಉದರ ಪೋಷಣೆ ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಎರಡು-ಮೂರು ತಂಡಗಳು ಮಾತ್ರ ಕರಾವಳಿಯಲ್ಲಿ ಕಾಣಸಿಗುತ್ತಿವೆ.

ಹಾವೇರಿಯ ಶಿಗ್ಗಾವಿ ತಾಲೂಕಿನ ಶಂಕರಪ್ಪ-ಚೆನ್ನಪ್ಪ ಮತ್ತು ತಂಡದವರು ಈ ರೀತಿಯ ಕಲೆಯನ್ನು ವಂಶ ಪಾರಂಪರ್ಯವಾಗಿ ತಪ್ಪದೇ ಮುಂದುವರಿಸಿಕೊಂಡು ಬಂದಿದ್ದಾರೆ. ಅತ್ಯಂತ ಸುಶ್ರಾವ್ಯವಾಗಿ ಹಾಡುವ ಇವರಲ್ಲಿ ಬಹುತೇಕರು ಹಿರಿಯರು ಹಾಡುವುದನ್ನು ಕೇಳಿಕೊಂಡು, ಮನೆಯಲ್ಲಿರುವ ಹಾರ್ಮೋನಿಯಂ, ತಬಲಗಳನ್ನು ನುಡಿಸುತ್ತ ಹಾಡುಗಾರರಾಗಿದ್ದಾರೆ.   ಇವರು ಹೇಳುವ ಪ್ರಕಾರ ಕೆಲವು ದಶಕದ ಹಿಂದೆ ಅಲ್ಲಿನ ಒಂದು ಗ್ರಾಮದಲ್ಲೇ ಹತ್ತಾರು ಈ ರೀತಿ ತಂಡಗಳಿದ್ದವು. ಈಗೀಗ ಯುವ ಪೀಳಿಗೆ ಶಿಕ್ಷಣ, ಉನ್ನತ ಉದ್ಯೋಗ ಆರಿಸಿಕೊಂಡಿದ್ದಾರೆ. ಊರೂರು ಅಲೆದು ಹಾಡು ಹೇಳುವುದರ ಬದಲಿಗೆ ಶಾಸ್ತ್ರೀಯವಾಗಿ ಕಲಿತು ಕಛೇರಿಗಳನ್ನು ನೀಡುತ್ತಾರೆ.

ಬಹುರೂಪಿ ಚೌಡಯ್ಯನ ಪರಂಪರೆ
ನಾವು ಹಣಕ್ಕಾಗಿ ಈ ವೃತ್ತಿ ಮಾಡುತ್ತಿಲ್ಲ. ಮನೆಯಲ್ಲೂ ಈಗೀಗ ಬೇಡ ಅನ್ನುತ್ತಾರೆ. ಆದರೆ, ವಚನ, ಕಲೆಯ ಮೂಲಕ ಜನಜಾಗೃತಿ ಮೂಡಿಸುತ್ತಿದ್ದ ಬಹುರೂಪಿ ಚೌಡಯ್ಯನ ಪರಂಪರೆ ಮುಂದುವರಿಸುತ್ತಿದ್ದೇವೆ.  ಹಿರಿಯರ  ಪರಂಪರೆ ನಮ್ಮ ಕಾಲದ ತನಕವಾದ್ರು ಮುಂದುವರಿಸಬೇಕು ಎನ್ನುವ ಕಾರಣಕ್ಕೆ ನಾವಿದನ್ನ ಮಾಡುತ್ತೇವೆ ಎನ್ನುತ್ತಾರೆ ಹಾಡುಗಾರರು.

ಉಡುಪಿ ಜತೆ ಉತ್ತಮ ನಂಟು
ಬೇರೆ-ಬೇರೆ ಜಿಲ್ಲೆಗಳಿಗೆ ತೆರಳಲು ಅವಕಾಶವಿದ್ದರೂ ಇವರಿಗೆ ಮಾತ್ರ ಕರಾವಳಿಯ ಮೇಲೆ ಇನ್ನಿಲ್ಲದ ಪ್ರೀತಿ.  ಹೀಗಾಗಿ ಬೈಂದೂರಿನಿಂದ ಹಿಡಿದು ಕುಂದಾಪುರ, ಬ್ರಹ್ಮಾವರ, ಉಡುಪಿ ತನಕ ಮನೆ-ಮನೆಗೆ ಭೇಟಿ ನೀಡುತ್ತಾರೆ. ಮೊದಲೆಲ್ಲ ದೇಗುಲದ ಜಗಳಿಯಲ್ಲಿ ಮಲಗಿ, ಬೆಳಗ್ಗೆ ಎದ್ದು ಮನೆ-ಮನೆಗೆ ತಿರುಗುತ್ತಿದ್ದರು. ಆದರೆ ಈಗ ಕಾಲಬದಲಾಗಿದೆ. ಯಾವುದಾದರು ಒಂದು ಕಡೆ ರೂಮ್‌ ಬಾಡಿಗೆಗೆ ಪಡೆದು ವಾಸ್ತವ್ಯವಿರುತ್ತಾರೆ. ಇಲ್ಲಿನ ಚೌತಿ, ನವರಾತ್ರಿ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಅವರಿಂದ ಹಾಡಿಸುವುದುಂಟು.

ಕಲೆಗೆ ಬೆಲೆ ಕೊಡಿ ಸಾಕು
ನಾವು ಎಲ್ಲ ಅಂಗಡಿ, ಮನೆಗಳಿಗೆ ಹೋಗುವುದಿಲ್ಲ. ಗೌರವ ನೀಡುವವರನ್ನ, ನಮ್ಮೊಳಗಿರುವ ಸಂಗೀತ ಕಲೆಗೆ ಬೆಲೆ ಕೊಡುವವರನ್ನ ಆಯ್ಕೆ ಮಾಡಿಕೊಂಡು ಹಾಡು ಹೇಳುತ್ತೇವೆ. ಕೆಲವು ಮಂದಿ ಚಿಲ್ಲರೆ ಹಣ ಕೊಡುತ್ತಾರೆ. ಇನ್ನು ಕೆಲವರು ನೂರಾರು ರೂ. ಕೊಡುತ್ತಾರೆ. ಹಣ ಎಷ್ಟು ಕೊಡ್ತಾರೆ ಎನ್ನುವುದು ಮುಖ್ಯವಲ್ಲ. ನಮ್ಮನ್ನ ಗೌರವದಿಂದ ಕಂಡರೆ, ಚೆಂದದಿಂದ  ಮಾತನಾಡಿದರೆ  ಅದೇ ಖುಷಿ.
-ಚೆನ್ನಪ್ಪ, ಹಾವೇರಿ, ಹಾಡುಗಾರ ತಂಡದ ಸದಸ್ಯ

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

K. Lakshminarayanan: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

2-bng

Bengaluru: ಮದುವೆ ಮರೆಮಾಚಿದಕ್ಕೆ 59 ತುಂಡು ಮಾಡಿ ಹತ್ಯೆ

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

World Tourism Day: ಹಂಪಿ ಪಯಣದ ಹ್ಯಾಪಿ ಕಥನ

World Tourism Day: ಹಂಪಿ ಪಯಣದ ಹ್ಯಾಪಿ ಕಥನ

SEMI-Cond

World Digital Revolution: ಜಾಗತಿಕ ರಾಜಕಾರಣಕ್ಕೆ ಸೆಮಿಕಂಡಕ್ಟರ್‌

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K. Lakshminarayanan: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

Udupi-DC

Udupi: ಸೆಪ್ಟೆಂಬರ್ 28-29: ದಸರಾ ಕ್ರೀಡಾಕೂಟ

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

K. Lakshminarayanan: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

2-bng

Bengaluru: ಮದುವೆ ಮರೆಮಾಚಿದಕ್ಕೆ 59 ತುಂಡು ಮಾಡಿ ಹತ್ಯೆ

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

World Tourism Day: ಹಂಪಿ ಪಯಣದ ಹ್ಯಾಪಿ ಕಥನ

World Tourism Day: ಹಂಪಿ ಪಯಣದ ಹ್ಯಾಪಿ ಕಥನ

SEMI-Cond

World Digital Revolution: ಜಾಗತಿಕ ರಾಜಕಾರಣಕ್ಕೆ ಸೆಮಿಕಂಡಕ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.