Karnataka; ರಾಜ್ಯ ಟೆನಿಸ್ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ
| 1.4 ಕೋಟಿ ರೂ. ವೆಚ್ಚ ಐಟಿಎಫ್, ಎಟಿಪಿ ಆಯೋಜನೆ ಇನ್ನೂ ಸುಗಮ
Team Udayavani, Sep 27, 2024, 6:50 AM IST
ಬೆಂಗಳೂರು: ಉದ್ಯಾನನಗ ರಿಯ ಕಬ್ಬನ್ ಪಾರ್ಕ್ ರಸ್ತೆಯಲ್ಲಿರುವ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ 4 ಅಂಕಣಗಳು 25 ವರ್ಷಗಳ ಬಳಿಕ ನವೀಕರಿಸಲ್ಪಟ್ಟಿವೆ. ವಿಶೇಷವೆಂದರೆ ಈ ಅಂಕಣಗಳಿಗೆ ಯುಎಸ್ ಓಪನ್ ಟೆನಿಸ್ನಲ್ಲಿ ಬಳಸುವ ಅತ್ಯಾಧುನಿಕ ಲೇಕೋಲ್ಡ್ ಸ್ಪರ್ಶ ನೀಡಲಾಗಿದೆ.
1976ರಲ್ಲಿ ಸ್ಥಾಪಿಸಲ್ಪಟ್ಟ ಈ ಅಂಕಣ ಗಳು 48 ವರ್ಷಗಳಷ್ಟು ಹಳೆಯವು. ಅವು ಸ್ಥಾಪನೆಯಾದ ಮೇಲೆ ಕೇವಲ 2ನೇ ಬಾರಿಗೆ 1.4 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಅದನ್ನು ನವೀಕರಣ ಮಾಡಿದೆ. ಇನ್ನು ಈ ಅಂಕಣಗಳಲ್ಲಿ ಪ್ರತಿಷ್ಠಿತ ಐಟಿಎಫ್ (ಅಂ.ರಾ. ಟೆನಿಸ್ ಒಕ್ಕೂಟ), ಎಟಿಪಿ (ವೃತ್ತಿಪರ ಟೆನಿಸಿಗರ ಸಂಸ್ಥೆ) ಕೂಟಗಳನ್ನು ಇನ್ನಷ್ಟು ಉತ್ತಮವಾಗಿ ನಡೆಸಲು ಸಾಧ್ಯವಿದೆ.
ಅಡಿಪಾಯದಿಂದಲೇ ಹೊಸಸ್ಪರ್ಶ
ಅಂಕಣಗಳ ಅಡಿಪಾಯವನ್ನು 1 ಮೀಟರ್ನಷ್ಟು ಕೆಳಗೆ ಅಗೆದು, ಸುಧಾರಿಸಿ ಜೀವ ತುಂಬಲಾಗಿದೆ. ಹೊಸ ಅಂಕಣಗಳ ರೀತಿಯಲ್ಲೇ ಹಳೇ ಅಂಕಣಗಳ ರೂಪವನ್ನು ಬದಲಾಯಿಸ ಲಾಗಿದೆ. ಅಂದಾಜು 1.4 ಕೋಟಿ ರೂ. ಖರ್ಚಿನಲ್ಲಿ 4 ಅಂಕಣಗಳ ಸಹಿತ ಸಂಪೂರ್ಣ ವ್ಯವಸ್ಥೆಗಳು ನವೀಕರಣಗೊಂಡಿವೆ.
ಅಂಕಣಗಳ ಜತೆಗೆ ಕ್ರೀಡಾಂಗಣದ ಆವರಣದಲ್ಲಿನ ಆಟಗಾರರ ಕೊಠಡಿ ಗಳು, ವೀಕ್ಷಕರ ಆಸನಗಳ ಸಹಿತ ಇಲ್ಲಿನ ಎಲ್ಲ ಸೌಲಭ್ಯಗಳಿಗೆ ಹೊಸ ಹೊಳಪು ನೀಡಲಾಗಿದೆ.
ಏನಿದು ಲೇಕೋಲ್ಡ್?
ಅಮೆರಿಕ ಯುಎಸ್ ಓಪನ್ ಸೇರಿದಂತೆ ಪ್ರತಿಷ್ಠಿತ ಟೆನಿಸ್ ಕೂಟಗಳಲ್ಲಿ ಲೇಕೋಲ್ಡ್ ಮಾದರಿಯನ್ನು ಬಳಸಲಾಗುತ್ತದೆ. ಇದನ್ನು ಅಂಕಣದ ಗಟ್ಟಿಯಾದ ಪದರದ (ಕಾಂಕ್ರೀಟ್) ಮೇಲೆ ನಿರ್ಮಿಸಲಾಗುತ್ತದೆ. ಅಂಕಣದ ಬಿರುಸನ್ನು ಕಡಿಮೆಮಾಡಲು ಅಗತ್ಯಬಿದ್ದರೆ ಕುಶನ್ ಹಾಕಲಾಗುತ್ತದೆ. ಈ ಮಾದರಿಯನ್ನು ಪೆನ್ಸಿಲ್ವೇನಿಯಾದ ಅಡ್ವಾನ್ಸ್$x ಪಾಲಿಮರ್ ಟೆಕ್ನಾಲಜಿ ಕಂಪೆನಿ ಸಿದ್ಧಪಡಿಸಿದೆ. ಇಲ್ಲೂ ಕೂಡ ಕುಶನ್ ಬಳಕೆಯಾಗಿದೆ.
ಹೊಸರೂಪ ಸಿಕ್ಕಿದೆ
25 ವರ್ಷಗಳಿಂದ ಅಂಕ ಣಗಳ ನವೀಕರಣ ನಡೆದಿರಲಿಲ್ಲ. ಹೀಗಾಗಿ ಅಂಕಣ ಗಳಿಗೆ ಹೊಸರೂಪ ನೀಡಬೇಕು ಎನ್ನುವ ಉದ್ದೇಶ ದಿಂದಲೇ ಹಿಂದಿನ ನಾಲ್ಕೂ ಅಂಕಣ ಗಳನ್ನು ನವೀಕರಿಸಿದೆವು. 5 ವರ್ಷಗ ಳಿಂದಲೇ ಇದಕ್ಕೆ ರೂಪುರೇಷೆ ಸಿದ್ಧ ಮಾಡಲಾರಂಭಿಸಿದ್ದೆವು. ಈಗ ಅಂಕಣ ಸಂಪೂರ್ಣವಾಗಿ ಅತ್ಯಾಕರ್ಷಕ ರೀತಿಯಲ್ಲಿ ತಯಾರಾಗಿ ನಿಂತಿದೆ.
-ಸುನೀಲ್ ಯಜಮಾನ್,ರಾಜ್ಯ ಟೆನಿಸ್ ಸಂಸ್ಥೆ ಜಂಟಿ ಕಾರ್ಯದರ್ಶಿ
·ಎಸ್. ಸದಾಶಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಗಂಭೀರ್ ಜಾಗಕ್ಕೆ ಹೊಸ ಮೆಂಟರ್ ಘೋಷಿಸಿದ ಕೋಲ್ಕತ್ತಾ ನೈಟ್ ರೈಡರ್ಸ್
Dwayne Bravo: ಎಲ್ಲಾ ಮಾದರಿ ಕ್ರಿಕೆಟ್ ನಿಂದ ನಿವೃತ್ತಿಯಾದ ʼಚಾಂಪಿಯನ್ʼ ಬ್ರಾವೋ
Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಇಂದಿನಿಂದ
NADA; ನೋಟಿಸ್ ನೀಡಿದರೂ ವಿನೇಶ್ ಫೋಗಾಟ್ ವಿರುದ್ಧ ಕ್ರಮವಿಲ್ಲ?
Under 19 ಕ್ರಿಕೆಟ್; 3ನೇ ಪಂದ್ಯ: ಭಾರತಕ್ಕೆ ಜಯ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.