![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Sep 27, 2024, 12:08 AM IST
ಗಂಗೊಳ್ಳಿ: ನಾಡದೋಣಿ ಪಾಲುದಾರಿಕೆ ನಡೆಸಲು ನೀಡಿದ್ದ ಆರೋಪಿಗಳಾದ ದಿನೇಶ ಹಾಗೂ ರಾಜು ಅವರು ತನ್ನನ್ನು ನಂಬಿಸಿ, ಕಂಚುಗೋಡು ಮಡಿ ಎಂಬಲ್ಲಿ ಇಟ್ಟಿದ್ದ ನಾಡದೋಣಿಯ 22.91 ಲಕ್ಷ ರೂ. ಮೌಲ್ಯದ ಮೀನುಗಾರಿಕೆ ಸೊತ್ತುಗಳನ್ನು ಮಾರಿ ವಂಚಿಸಿರುವುದಾಗಿ ನವಿಮುಂಬಯಿಯ ಸುಧೀರ್ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು 12.20 ಲಕ್ಷ ರೂ. ಮೌಲ್ಯದ ಬಲೆ, 3.36 ಲಕ್ಷ ರೂ. ಮೌಲ್ಯದ ಸೀಸ, 2.18 ಲಕ್ಷ ರೂ. ಮೌಲ್ಯದ ದೋಣಿ ಎಂಜಿನ್, 36 ಸಾವಿರ ರೂ. ಫ್ಲೋಟ್, 71 ಸಾವಿರ ರೂ. ಮೌಲ್ಯದ ಸೀಮೆಎಣ್ಣೆ ತುಂಬುವ ಬ್ಯಾರೆಲ್ಗಳು, 76 ಸಾವಿರ ರೂ. ಮೌಲ್ಯದ ಟಿವಿ, ಕೆಮರಾ, 35 ಸಾವಿರ ರೂ. ಮೌಲ್ಯದ 3 ಬ್ಯಾಟರಿ, ಕೇಬಲ್, ಬಾಕ್ಸ್, 1.22 ಲಕ್ಷ ರೂ. ಮೌಲ್ಯದ ರೋಪ್, 20 ಸಾವಿರ ರೂ. ಮೌಲ್ಯದ ಕ್ಯಾನ್ಗಳು, 42 ಸಾವಿರ ರೂ. ಮೌಲ್ಯದ ಜಿಪಿಎಸ್ ಕಂಬಗಳು 5 ಸಾವಿರ ರೂ. ಮೌಲ್ಯದ ರಾಟೆ, 72 ಸಾವಿರ ರೂ. ಮೌಲ್ಯದ ಹಿತ್ತಾಳೆ ರಿಂಗ್, 38 ಸಾವಿರ ರೂ. ಮೌಲ್ಯದ ಎಂಜಿನ್ ಆಯಿಲ್ ತುಂಬಿದ ಬ್ಯಾರೆಲ್ ಸಹಿತ ಒಟ್ಟು 22.91 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಯಾರಿಗೋ ಮಾರಾಟ ಮಾಡಿ, ವಂಚಿಸಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.