Mangaluru: ಅಕ್ರಮ ಮರಳುಗಾರಿಕೆಗೆ ತಡೆ; ದ.ಕ. ಜಿಲ್ಲಾಧಿಕಾರಿ
Team Udayavani, Sep 27, 2024, 1:11 AM IST
ಮಂಗಳೂರು: ಉಳ್ಳಾಲದ ಪಾವೂರು ಉಳಿಯ ಕುದ್ರು ಬಳಿ ಅಕ್ರಮ ಮರಳುಗಾರಿಕೆ ನಡೆಯುವ ಆರೋಪದ ಹಿನ್ನೆಲೆಯಲ್ಲಿ ಆ ಪರಿಸರದಲ್ಲಿ ವಾಸಿಸುವ ನಾಗರಿಕರು, ಪರಿಸರ ಹಾಗೂ ಇತರ ಸಂಪನ್ಮೂಲಕ್ಕೆ ತೊಂದರೆಯಾಗದಂತೆ ಹಾಗೂ ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳೂ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಇಷ್ಟಾದರೂ ಅನ ಧಿಕೃತ ಗಣಿಗಾರಿಕೆ ನಡೆಯುವುದು ಕಂಡು ಬಂದರೆ ಸಂಬಂ ಧಿಸಿದ ಇಲಾಖಾ ಅ ಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಅಕ್ರಮ ಮರಳುಗಾರಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಚಿಸಿದ್ದ 6 ಸದಸ್ಯರ ತನಿಖಾ ತಂಡ ತಮ್ಮ ವರದಿ ಸಲ್ಲಿಸಿತ್ತು.
ಶಿಫಾರಸುಗಳೇನು?
ಮರಳುಗಾರಿಕೆ ಮಾಡುವ ದೋಣಿಗಳನ್ನು ಜಫ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಬೇಕು, ಮರಳು ಸಂಗ್ರಹಿಸುವ ಸಮೀಪದ ಜಟ್ಟಿಗಳಲ್ಲಿ(ಅಡ್ಯಾರು, ವಳಚ್ಚಿಲ್, ಗಾಡಿಬೆ„ಲ್ ಗ್ರಾಮದ ನದಿ ತೀರದಲ್ಲಿರುವ ಮರಳುಜಟ್ಟಿ) ಮರಳು ದಾಸ್ತಾನು ಮಾಡದಂತೆ ತಡೆಗಟ್ಟುವುದು, ಅನಧಿಕೃತ ಮರಳು ದಾಸ್ತಾನು ಕಂಡುಬಂದರೆ ಭೂಮಾಲಕರ ವಿರುದ್ಧ ತತ್ಕ್ಷಣ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿಯಲ್ಲಿ ರುವ ಹಿರಿಯ ಭೂವಿಜ್ಞಾನಿ ಶಿಫಾರಸು ಮಾಡಿದ್ದಾರೆ.
ಮಂಗಳೂರು ನಗರ ಉತ್ತರ ಎಸಿಪಿಯವರು ತಮ್ಮ ಶಿಫಾರಸು ನೀಡಿದ್ದು, ಅಕ್ರಮ ಮರಳುಗಾರಿಕೆ ನಡೆಸುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಬೇಕು, ಗಣಿ ಇಲಾಖೆ ಜತೆಗೆ ಸಮನ್ವಯತೆಯಿಂದ ರಾತ್ರಿ ಗಸ್ತು ತಿರುಗಲು ಪೊಲೀಸ್ ಸಿಬಂದಿ ನೇಮಕ ಮಾಡಬೇಕು ಎಂದು ವರದಿ ಕೊಟ್ಟಿದ್ದಾರೆ. ಮಂಗಳೂರು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ತಮ್ಮ ವರದಿಯಲ್ಲಿ ತಾಲೂಕು ಟಾಸ್ಕ್ಫೋರ್ಸ್ ಸಮಿತಿಯಿಂದ ಚಾಲಿತ ದಳ ನೇಮಿಸಿಕೊಂಡು ಬಾಧಿತ ಪ್ರದೇಶಕ್ಕೆ ರಾತ್ರಿ ಗಸ್ತು ತಿರುಗಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ
Karnataka; ರಾಜ್ಯ ಟೆನಿಸ್ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ
Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಎಂಆರ್ಐ ಸೇವೆ ವ್ಯತ್ಯಯ
Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಇಂದಿನಿಂದ
Minimum wages; ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಿದ ಕೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.