Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

ಸಂತೆಕಟ್ಟೆ ರಸ್ತೆ ಕಥೆ ವ್ಯಥೆ ಕಾಣದವರು ಕಾಣಿ ಕೇಳದವರು ಕೇಳಿ

Team Udayavani, Sep 27, 2024, 6:50 AM IST

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

ಉಡುಪಿ: ಏನೇ ಆಗಲಿ ಕಾಮಗಾರಿಯೊಂದು ಆದಷ್ಟು ಬೇಗ ಮುಗಿಸಿ ನಮ್ಮ ಜೀವನ ಉಳಿಸಿ. ಒಂದೂವರೆ ವರ್ಷದಿಂದ ಆರ್ಥಿಕ ಸಂಕಷ್ಟದ ಜತೆಗೆ ಮಾನಸಿಕ ಹಿಂಸೆ ಎದುರಿಸುತ್ತಿದ್ದೇವೆ. ತಿಂಗಳು ಗಳಿಂದ ಬಾಡಿಗೆ ಕಟ್ಟಲಾಗದ ಸ್ಥಿತಿಯಲ್ಲಿದ್ದೇವೆ. ರಿಕ್ಷಾ, ಟೆಂಪೋ ಓಡಿಸುವುದು ಕಷ್ಟ. ಯಾರಿಗೇ ಹೇಳಿದರೂ ಪರಿಹಾರ ಸಿಗುತ್ತಿಲ್ಲ. ಇದು ನಿತ್ಯದ ಗೋಳು ಎನ್ನುತ್ತಾರೆ ಸಂತೆಕಟ್ಟೆ ಪರಿಸರದ ವ್ಯಾಪಾರಿಗಳು, ರಿಕ್ಷಾ, ಟೆಂಪೋ ಚಾಲಕರು, ನಿವಾಸಿಗಳು. ಅಕ್ಕಪಕ್ಕದ ವ್ಯಾಪಾರಿಗಳಿಗೂ ವ್ಯಾಪಾರ ವಿಲ್ಲದೇ ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಜನರು ಆಗ್ರಹಿಸಿದ್ದಾರೆ.

ಜನವರಿಯೊಳಗೆ ಓವರ್‌ಪಾಸ್‌ ಉದ್ಘಾಟನೆ
ಉಡುಪಿ: ಸಂತೆಕಟ್ಟೆ ಕಾಮಗಾರಿ ಚುರುಕುಗೊಳಿಸಲು ಖುದ್ದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಜತೆಗೆ ಮಾತನಾಡಿರುವೆ. ಮುಂದಿನ ಜನವರಿ ಯೊಳಗೆ ತಾವೇ ಹೆದ್ದಾರಿಯನ್ನು ಉದ್ಘಾ ಟಿಸುವುದಾಗಿ ಹೇಳಿದ್ದು, ಅದಕ್ಕೂ ಮೊದಲು ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಯನ್ನು ತ್ವರಿತವಾಗಿ ನಡೆಸುವಂತೆ ಹಾಗೂ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ರಾ.ಹೆ. ಅಧಿಕಾರಿಗಳಿಗೆ ಮತ್ತು ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿ ಸಲಾಗಿದೆ. ನಾಲ್ಕಾರು ಬಾರಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈಗ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಕಾರ್ಮಿಕರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದರು.

ಮಲ್ಪೆ – ಹೆಬ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೆಲವು ಭಾಗದಲ್ಲಿ ಹಿಂದಿನ ಸರಕಾರ ಭೂ ಸ್ವಾಧೀನ ಮಾಡಿರಲಿಲ್ಲ. ಈಗ ಭೂ ಸ್ವಾಧೀನಕ್ಕೆ ಪ್ರಾರಂಭಿಕ ನೋಟಿಸ್‌ ನೀಡಲಾಗಿದೆ. ಇಂದ್ರಾಳಿ ರೈಲ್ವೇ ಓವರ್‌ ಬ್ರಿಡ್ಜ್ ಕಾಮಗಾರಿಗೆ ರೈಲ್ವೇ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ನಾನು ಸಂಸದನಾದ ಮೇಲೆ ಅನುಮತಿ ಪಡೆದು ಕಾಮಗಾರಿ ಆರಂಭವಾಗಿದೆ ಎಂದರು.

ಜಿಲ್ಲೆಯಲ್ಲಿ 150 ಕೋ.ರೂ.ವೆಚ್ಚದ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಸ್ಥಾಪನೆಗೆ 6 ಎಕ್ರೆ ಭೂಮಿ ಮೀಸ ಲಿರಿಸಲಾಗಿದೆ. ಟೆಂಡರ್‌ ಪಡೆದ ಸಂಸ್ಥೆ ಕಾಮಗಾರಿ ಆರಂಭಿಸಿಲ್ಲ ಎಂದರು. ಸಂತೆಕಟ್ಟೆ ಸಮಸ್ಯೆ ಬಗ್ಗೆ ಉದಯವಾಣಿ ಸರಣಿ ಮೂಲಕ ಗಮನ ಸೆಳೆದಿತ್ತು.

ಓವರ್‌ಪಾಸ್‌ ಕಾಮಗಾರಿ ಮುಗಿದ ಕೂಡಲೇ ಮೇಲ್ಸೇತುವೆ ಮಾಡಲಿ. ರಾಜಕೀ ಯ ಹಸ್ತಕ್ಷೇಪ ಇಲ್ಲದೇ ಕಾಮಗಾರಿ ಬೇಗ ಮುಗಿಸಲಿ. ಸ್ಥಳೀಯರ ಅನುಕೂಲಕ್ಕೆ ಸರ್ವೀಸ್‌ ರಸ್ತೆಯನ್ನು ಸರಿಯಾಗಿ ನಿರ್ಮಿಸಿಕೊಡಲಿ.
-ಸ್ಟೀವನ್‌, ಉದ್ಯಮಿ ಸಂತೆಕಟ್ಟೆ

ಕಾಮಗಾರಿ ತುಂಬಾ ನಿಧಾನವಾಗಿ ಸಾಗುತ್ತಿದೆ. ಕೇವಲ ಇಬ್ಬರು ಸೇರಿ ಬಂಡೆ ಒಡೆಯುತ್ತಿದ್ದಾರೆ. ಕನಿಷ್ಠ ಸರ್ವೀಸ್‌ ರಸ್ತೆಯನ್ನಾದರೂ ಬೇಗ ಮಾಡಿಕೊಡಬೇಕು. ನಿತ್ಯ ವಾಹನ ಕ್ರಾಸಿಂಗ್‌ ಮಾಡುವುದೇ ಸಮಸ್ಯೆ.
-ಉಮೇಶ್‌ ಶೆಟ್ಟಿ, ಗೌರವಾಧ್ಯಕ್ಷ, ಸಂತೆಕಟ್ಟೆ ಟ್ಯಾಕ್ಸಿ ಮೆನ್‌ ಮತ್ತು ಗೂಡ್ಸ್‌ ಟೆಂಪೋ ಯೂನಿಯನ್‌.

ಹೆದ್ದಾರಿ ಸಚಿವರ ಗಮನಕ್ಕೆ ತರುವೆ
ಸಂತೆಕಟ್ಟೆ ಕಾಮಗಾರಿ ವಿಳಂಬ ಹಾಗೂ ಸದ್ಯ ಸ್ಥಳೀಯರು, ಸವಾರರು ಎದುರಿಸುತ್ತಿರುವ ಸಮಸ್ಯೆಯ ಕುರಿತು ಹೆದ್ದಾರಿಯ ಉನ್ನತ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಶೀಘ್ರವೇ ಕೇಂದ್ರ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು.
– ಯಶ್‌ಪಾಲ್‌ ಎ. ಸುವರ್ಣ, ಶಾಸಕರು,

ಸಂತೆಕಟ್ಟೆಯಲ್ಲಿ 32 ವರ್ಷಗಳಿಂದ ವ್ಯಾಪಾರ ನಡೆಸು ತ್ತಿರುವೆ. ಒಂದೂವರೆ ವರ್ಷದಲ್ಲಿ ಆದಷ್ಟು ನಷ್ಟ ಯಾವತ್ತೂ ಆಗಿಲ್ಲ. ಗ್ರಾಹಕರು ಬರಲು ಸರಿಯಾದ ರಸ್ತೆಯೇ ಇಲ್ಲ. ನಮ್ಮ ಗೋಳನ್ನು ಯಾರಿಗೆ ಹೇಳುವುದು?-ಸಂಜೀವ ಪೂಜಾರಿ,
-ಮೊಬೈಲ್‌ ಅಂಗಡಿ ಮಾಲಕ

ಬಹುತೇಕ ರಿಕ್ಷಾಗಳು ಸಿಎನ್‌ಜಿ ಆಗಿರುವುದರಿಂದ ಒಮ್ಮೆ ಹೊಂಡಕ್ಕೆ ಬಿದ್ದರೆ ಬೇರಿಂಗ್‌ ಕಟ್‌ ಆಗಿ 3-4 ಸಾವಿರಕ್ಕೂ ಅಧಿಕ ಖರ್ಚು ಬರುತ್ತದೆ. ನಮ್ಮ ಜೀವನವೇ ಕಷ್ಟವಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿಕೊಡಿ.
-ಜಯರಾಮ್‌, ಅಧ್ಯಕ್ಷ, ಸಂತೆಕಟ್ಟೆ ರಿಕ್ಷಾ ನಿಲ್ದಾಣ ಚಾಲಕ, ಮಾಲಕರ ಸಂಘ

ನಿತ್ಯ ಕುಂದಾ ಪುರದಿಂದ ಇಲ್ಲಿಗೆ ಬರಬೇಕು. ಬೈಕ್‌ ನಲ್ಲಿ 45ರಿಂದ 55 ನಿಮಿಷದಲ್ಲಿ ಬರುತ್ತಿ ದ್ದೆವು. ಈಗ 1 ಗಂಟೆ 20 ನಿಮಿಷ ಬೇಕು. ಒಂದು ಕಿ.ಮೀ. ಸುತ್ತುವರಿದು ಹೋಗಿ ಟೀ ಕುಡಿಯಬೇಕಾದ ಸ್ಥಿತಿ.
-ಜಿ.ಕೃಷ್ಣ, ಸಂತೆಕಟ್ಟೆಯಲ್ಲಿ ಉದ್ಯೋಗಿ.

ಕಾಮಗಾರಿ ಆರಂಭವಾದ ದಿನದಿಂದಲೂ ಗ್ರಾಹಕರು ಬರುತ್ತಿಲ್ಲ. ಶೇ.50ರಷ್ಟು ವ್ಯಾಪಾರ ಕುಸಿದಿದೆ. ಬದುಕು ನಡೆಸದಂತಾಗಿದೆ. . ಓವರ್‌ಪಾಸ್‌ ಕಾಮಗಾರಿ ಮುಗಿಸಿದರೆ ಇದೆಲ್ಲದಕ್ಕೂ ಪರಿಹಾರ ಸಿಗಲಿದೆ.
-ವಿಶ್ವನಾಥ,
ಎಳನೀರು, ಹಣ್ಣು ವ್ಯಾಪಾರಿ, ಸಂತೆಕಟ್ಟೆ

ಪರ್ಯಾಯ ರಸ್ತೆಯನ್ನು ಸರಿಯಾಗಿ ನಿರ್ಮಿಸದೆ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು ತಪ್ಪು. ಹೆಚ್ಚುವರಿ ಸಿಬಂದಿ ನಿಯೋಜಿಸಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಆಗುವು ದನ್ನು ತಪ್ಪಿಸಬೇಕು. ಈ ಕಿರಿಕಿರಿ ತಪ್ಪಬೇಕು. ಕೂಡಲೇ ಕಾಮಗಾರಿ ಮುಗಿಸಬೇಕು.
– ಗಣೇಶ್‌, ವ್ಯಾಪಾರಿ ಸಂತೆಕಟ್ಟೆ

ಟಾಪ್ ನ್ಯೂಸ್

Sandalwood; ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌

Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌

Kulasekhara: ಬೈಕ್ ಗಳ ನಡುವೆ ಅಪಘಾತ… ಸವಾರ ಮೃತ್ಯು

Kulasekhara: ಬೈಕ್ ಗಳ ನಡುವೆ ಅಪಘಾತ… ಸವಾರ ಮೃತ್ಯು

Success Story-ಮುನಿಯಾಲ್‌ To ಅಬುಧಾಬಿ; ಯಶಸ್ವಿ ಹೋಟೆಲ್‌ ಉದ್ಯಮಿ ಸುಂದರ ಶೆಟ್ಟಿ ಜೀವನಗಾಥೆ

Success Story-ಮುನಿಯಾಲ್‌ To ಅಬುಧಾಬಿ; ಯಶಸ್ವಿ ಹೋಟೆಲ್‌ ಉದ್ಯಮಿ ಸುಂದರ ಶೆಟ್ಟಿ ಜೀವನಗಾಥೆ

Celebrity Corner:ಕಾಲೇಜುಗಳು ಕಲಿಸುತ್ತವೆಂದು ಕಾಯದಿರಿ-ಆದಾಯದ ಮಾಡೆಲ್‌ ಎಂದರೇನು?

Celebrity Corner:ಕಾಲೇಜುಗಳು ಕಲಿಸುತ್ತವೆಂದು ಕಾಯದಿರಿ-ಆದಾಯದ ಮಾಡೆಲ್‌ ಎಂದರೇನು?

Bellary: Siddaramaiah, who said corruption is unforgivable, should resign now: Sri Ramulu

Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು

Dwayne Bravo replaces Gautam Gambhir as KKR mentor

IPL 2025: ಗಂಭೀರ್‌ ಜಾಗಕ್ಕೆ ಹೊಸ ಮೆಂಟರ್‌ ಘೋಷಿಸಿದ ಕೋಲ್ಕತ್ತಾ ನೈಟ್‌ ರೈಡರ್ಸ್

1

World Tourism Day 2024: “ಕರ್ನಾಟಕ ಒಂದು ರಾಜ್ಯ…ಇಲ್ಲಿದೆ ವಿಸ್ಮಯದ ಹಲವು ಜಗತ್ತು”


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-DC

Udupi: ಸೆಪ್ಟೆಂಬರ್ 28-29: ದಸರಾ ಕ್ರೀಡಾಕೂಟ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

k

Protest: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ: ಕಂದಾಯ ಸೇವೆ ವ್ಯತ್ಯಯ

Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌: ಅಬ್ರಹಾಂ Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌: ಅಬ್ರಹಾಂ

Zameer Ahmed ವಿರುದ್ಧ ನ್ಯಾಯಾಂಗ ನಿಂದನೆ ಕೇಸ್‌: ಅಬ್ರಹಾಂ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6-araga

Thirthahalli: ಸಿಬಿಐ ಬರಬಾರದು ಎಂದು ಬೇಲಿ ಹಾಕಿದ್ದು ಯಾಕೆ: ಆರಗ ಪ್ರಶ್ನೆ

Sandalwood; ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌

Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌

012

High Court: ಜೈಲಿನಲ್ಲಿ ಆತಿಥ್ಯ; ಕೈದಿ ಕುಳ್ಳ ಸೀನ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ

Fraud Case: ಖಾಸಗಿ ಸುದ್ದಿವಾಹಿನಿ ಎಂಡಿ ಬಂಧನ

Fraud Case: ಖಾಸಗಿ ಸುದ್ದಿವಾಹಿನಿ ಎಂಡಿ ಬಂಧನ

Arrested: ಬೈಕ್‌, ಆಟೋ ಕದಿಯುತ್ತಿದ್ದ ಇಬ್ಬರ ಬಂಧನ

Arrested: ಬೈಕ್‌, ಆಟೋ ಕದಿಯುತ್ತಿದ್ದ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.