CM: ಸಿದ್ದುಗೆ ಮಾದರಿ ಕೇಜ್ರಿವಾಲೋ, ರಾಮಕೃಷ್ಣ ಹೆಗಡೆಯೋ?: ಬಿ.ವೈ.ವಿಜಯೇಂದ್ರ
ರಾಜ್ಯದ ಘನತೆ ಉಳಿಸುವ ದೃಷ್ಟಿಯಿಂದಲಾದರೂ ಮುಖ್ಯಮಂತ್ರಿ ಸ್ಥಾನ ತೊರೆಯಿರಿ: ಬಿಜೆಪಿ ರಾಜ್ಯಾಧ್ಯಕ್ಷ
Team Udayavani, Sep 27, 2024, 3:11 AM IST
ಬೆಂಗಳೂರು: ಸಿದ್ದರಾಮಯ್ಯನವರೇ ನಿಮಗೆ ದಿಲ್ಲಿಯ ಕೇಜ್ರಿವಾಲ್ ಮಾದರಿಯೋ? ಕರುನಾಡಿನ ರಾಮಕೃಷ್ಣ ಹೆಗಡೆಯವರು ಮಾದರಿಯೋ? ಆಯ್ಕೆ ನಿಮಗೇ ಬಿಟ್ಟಿದ್ದು. ಭಂಡತನದ ಎಲ್ಲೇ ಮೀರಿದ ನಿಮ್ಮ ಮಾತುಗಳಿಗೆ ರಾಜ್ಯದ ಜನ ಕಿಮ್ಮತ್ತು ನೀಡುವ ಕಾಲ ಈಗ ಮುಗಿದು ಹೋಗಿದೆ. ಸ್ವಪಕ್ಷೀಯರೇ ಮುಜುಗರ ತಪ್ಪಿಸಲು ರಾಜೀನಾಮೆ ಕೊಡಿ ಎಂದು ಹೇಳುತ್ತಿ ದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಪ್ರಧಾನಿ ಬಗ್ಗೆ ಸಿಎಂ ಸಿದ್ದರಾಮಯ್ಯ ಆಡಿದ ಮಾತುಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣ “ಎಕ್ಸ್’ ವೇದಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಪ್ರಧಾನಿ ಮೋದಿಯವರ ಹೆಸರು ಬಳಸಿ ತಳ ಬುಡವಿಲ್ಲದ ಹೋಲಿಕೆಗಳನ್ನು ಮಾಡಿಕೊಂಡು ರಾಜೀನಾಮೆ ನೀಡುವುದಿಲ್ಲ ಎಂಬ ವಿತಂಡ ನಿಲುವು ತಳೆದಿದ್ದೀರಿ. ಭ್ರಷ್ಟತೆಯಿಂದ ಹರಿದು ಹೋಗಿರುವ ನಿಮ್ಮ ಗೌರವಕ್ಕೆ ತೇಪೆ ಹಚ್ಚಿಕೊಂಡು ಅಧಿಕಾರಕ್ಕೆ ಜೋತು ಬೀಳುವ ಹಠಮಾರಿತನ ಪ್ರದರ್ಶಿಸುತ್ತಿದ್ದೀರಿ, ರಾಜ್ಯದ ಘನತೆಯನ್ನು ಉಳಿಸುವ ದೃಷ್ಟಿಯಿಂದಲಾದರೂ ಮುಖ್ಯಮಂತ್ರಿ ಸ್ಥಾನ ತೊರೆಯಿರಿ ಎಂದಿದ್ದಾರೆ.
ನೀವು ಚಾಪೆ ಕೆಳಗೆ ನುಸುಳಿದರೆ ಈ ನೆಲದ ಕಾನೂನಿಗೆ ರಂಗೋಲಿಯೊಳಗೆ ನುಸುಳಿ ಯಾದರೂ ಭ್ರಷ್ಟರಿಗೆ ಶಿಕ್ಷಿಸುವ ಸಾಮರ್ಥ್ಯವಿದೆ. ಅಂತಹ ಸಂವಿಧಾನ ರಚಿಸಿಕೊಟ್ಟ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಡಿ ಎಂದು ಕಿವಿ ಮಾತು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಪ್ರಜ್ವಲ್ “ಮಾಸ್ ರೆಪಿಸ್ಟ್’ ಹೇಳಿಕೆ: ರಾಹುಲ್ ತುರ್ತು ವಿಚಾರಣೆ ಇಲ್ಲ!
Mysuru Dasara: ಎದೆ ಝಲ್ ಎನ್ನಿಸಿದ ಶಬ್ದಕ್ಕೂ ಜಗ್ಗದ ಗಜಪಡೆ
Corruption Allegation: ಭೋವಿ ನಿಗಮ ಅಕ್ರಮ: ಲಂಚ ಪಡೆದ ತನಿಖಾಧಿಕಾರಿ ಅಮಾನತು
MUDA Scam: ಸಿದ್ದರಾಮಯ್ಯಗೆ ಈಗ ಕಳ್ಳನ ಮನಸ್ಸು: ವಿಪಕ್ಷ ನಾಯಕ ಆರ್.ಅಶೋಕ್
Rain Alert: ಉಡುಪಿ, ಉತ್ತರ ಕನ್ನಡ ಸೇರಿ 6 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
High Court: ಪ್ರಜ್ವಲ್ “ಮಾಸ್ ರೆಪಿಸ್ಟ್’ ಹೇಳಿಕೆ: ರಾಹುಲ್ ತುರ್ತು ವಿಚಾರಣೆ ಇಲ್ಲ!
Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ
Karnataka; ರಾಜ್ಯ ಟೆನಿಸ್ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ
Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಎಂಆರ್ಐ ಸೇವೆ ವ್ಯತ್ಯಯ
Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಇಂದಿನಿಂದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.