MUDA; ಕಾಂಗ್ರೆಸ್ ಮೊಹಬ್ಬತ್ ಕಿ ದುಕಾನ್ ಅಲ್ಲ, ಭ್ರಷ್ಟಾಚಾರ್ ಕೆ ಭಾಯಿಜಾನ್: ಬಿಜೆಪಿ
ಜಮೀನ್ ಸೆ ಜೂಡಿ ಹುಯಿ... ಅಧಿಕಾರಕ್ಕೆ ಬಂದಾಗಲೆಲ್ಲ, ಸಂಬಂಧಿಕರ ಹೆಸರಿಗೆ ಭೂಮಿ ನೋಂದಣಿ!!
Team Udayavani, Sep 27, 2024, 7:00 PM IST
ಹೊಸದಿಲ್ಲಿ: ”ಆಪಾದಿತ ಮುಡಾ ಹಗರಣದ ಸಿಬಿಐ ತನಿಖೆಗೆ ಕರ್ನಾಟಕ ಕಾಂಗ್ರೆಸ್ ಸರಕಾರ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿದ್ದು ಪಕ್ಷವು ಮೊಹಬ್ಬತ್ ಕಿ ದುಕಾನ್ ನಡೆಸುವ ಬದಲು ಭ್ರಷ್ಟಾಚಾರ್ ಕೆ ಭಾಯಿಜಾನ್ ಆಗಿ ಬದಲಾಗಿದೆ” ಎಂದು ಬಿಜೆಪಿ ಆಕ್ರೋಶ ಹೊರ ಹಾಕಿದೆ.
ಶುಕ್ರವಾರ(ಸೆ27)ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಉಳಿಯಲು ನೈತಿಕ ಆಧಾರವೇನಿದೆ ಎಂದು ಪ್ರಶ್ನಿಸಿದರು, ಕಾಂಗ್ರೆಸ್ ಪಕ್ಷದ ಆಡಳಿತವು ಭ್ರಷ್ಟ ಆಚರಣೆಗಳ ಮೂಲಕ ಅವರ ಕುಟುಂಬದ ಸದಸ್ಯರಿಗೆ ಲಾಭದಾಯಕವಾಗಿದೆ ಎಂದು ಕಿಡಿ ಕಾರಿದರು.
“ಕಾಂಗ್ರೆಸ್ ಒಂದು ‘ಜಮೀನ್ ಸೆ ಜೂಡಿ ಹುಯಿ’(ಭೂಮಿಗೆ ಅಂಟಿಕೊಂಡ) ಪಕ್ಷ. ಅವರು ಅಧಿಕಾರಕ್ಕೆ ಬಂದಾಗಲೆಲ್ಲ,ತಮ್ಮ ಸಂಬಂಧಿಕರ ಹೆಸರಿಗೆ ಭೂಮಿಯನ್ನು ನೋಂದಾಯಿಸುತ್ತಾರೆ. ಅದು ನ್ಯಾಷನಲ್ ಹೆರಾಲ್ಡ್ ಆಗಿರಬಹುದು, ಹರಿಯಾಣದ ‘ದಮದ್’ ಅಥವಾ ಕರ್ನಾಟಕದ ಹೆಂಡತಿ. ಅವರು ತಮ್ಮ ಕುಟುಂಬದ ಸದಸ್ಯರನ್ನು ಫಲಾನುಭವಿಗಳನ್ನಾಗಿ ಮಾಡುತ್ತಾರೆ ಮತ್ತು ಆದ್ದರಿಂದ ಇದನ್ನು ‘ಜಮೀನ್ ಸೆ ಜೂಡಿ ಹುಯಿ’ ಪಾರ್ಟಿ ಎಂದು ಕರೆಯಲಾಗುತ್ತದೆ”ಎಂದರು.
ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕರನ್ನು ಲೂಟಿ ಮಾಡುವುದೇ ಕಾಂಗ್ರೆಸ್ ಪಕ್ಷದ ಕಾರ್ಯ.ಕರ್ನಾಟಕದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮುಡಾ ಹಗರಣ ಬಹಿರಂಗವಾದ ನಂತರ, ಕಾಂಗ್ರೆಸ್ ಸರ್ಟಿಫೈಡ್ ಲೂಟಿಕೋರನಂತೆ ವರ್ತಿಸಿದೆ. ಕಾನೂನಿನ ಕೈಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಅವರು ಸಿಬಿಐನ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡರು. ಅವರು ವೃತ್ತಿಪರ ಕಳ್ಳರಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಧೋರಣೆ ಮೊದಲು ಕದಿಯುವುದು ಮತ್ತು ನಂತರ ನಿರ್ಭಯದಿಂದ ವರ್ತಿಸುವುದಾಗಿದೆ. ಭ್ರಷ್ಟಾಚಾರದ ಬಗೆಗಿನ ಈ ಧೋರಣೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಾದ್ಯಂತ ವ್ಯಾಪಕವಾಗಿದೆ ಎಂದು ಪೂನಾವಾಲಾ ಕಿಡಿ ಕಾರಿದರು.
ಕಾಂಗ್ರೆಸ್ ನಾಯಕರು ಕರ್ನಾಟಕ ರಾಜ್ಯಪಾಲರನ್ನು ಅವಮಾನಿಸಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೈಕೋರ್ಟ್ನ ಆದೇಶದ ಹೊರತಾಗಿಯೂ ಕಾಂಗ್ರೆಸ್ ಪಕ್ಷವು ರಾಜ್ಯಪಾಲರ ತೀರ್ಪನ್ನು ಪ್ರಶ್ನಿಸುವುದನ್ನು ಮುಂದುವರೆಸಿದೆ ಎಂದು ಪೂನಾವಾಲಾ ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Recruitment Of Posts: ನಾಳೆ ಗ್ರಾಮಾ ಆಡಳಿತ ಅಧಿಕಾರಿ ನೇಮಕಕ್ಕೆ ಕನ್ನಡ ಕಡ್ಡಾಯ ಪರೀಕ್ಷೆ
Congress ಪಕ್ಷ ವಿರೋಧಿ ಚಟುವಟಿಕೆ: ಹರಿಯಾಣದಲ್ಲಿ 13 ನಾಯಕರ ಉಚ್ಚಾಟನೆ
Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫಲ ಬಿಡಬಹುದು
MSP; ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಬೆಳೆಗಳಿಗೆ ಕೊಟ್ಟಿದೆ?: ಅಮಿತ್ ಶಾ
Air pollution: ಗಾಳಿ ಗುಣಮಟ್ಟ ಆಯೋಗಕ್ಕೆ ಸುಪ್ರೀಂಕೋರ್ಟ್ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.