Gangolli: ದೋಣಿಯ ಸೊತ್ತು ಮಾರಾಟ ಮಾಡಿ 22 ಲಕ್ಷ ರೂ. ವಂಚನೆ
Team Udayavani, Sep 27, 2024, 8:47 PM IST
ಗಂಗೊಳ್ಳಿ: ಸುಧೀರ್ ಮುಂಬಯಿ ಅವರಿಗೆ ದಿನೇಶ ಮತ್ತು ರಾಜು ಮೀನುಗಾರಿಕೆಯ ದೋಣಿ ಪಾಲುದಾರಿಕೆಯಲ್ಲಿ 22 ಲಕ್ಷ ರೂ. ವಂಚಿಸಿದ್ದಾರೆ ಎಂದು ದೂರಲಾಗಿದೆ.
ಸುಧೀರ್ ಈ ಇಬ್ಬರಿಗೆ ನಾಡದೋಣಿಯನ್ನು ಪಾಲುದಾರಿಕೆಯನ್ನು ನಡೆಸಲು ನೀಡಿದ್ದು, ಮೀನುಗಾರಿಕೆಗೆ ಮಳೆಗಾಲದ ರಜೆ ಇರುವುದರಿಂದ ದೋಣಿಯನ್ನು ಕಂಚುಗೋಡು ಮಡಿ ಎಂಬಲ್ಲಿ ಇಟ್ಟು ದೋಣಿಯಲ್ಲಿದ್ದ ಬಲೆ ಹಾಗೂ ಇತರ ಸಾಮಗ್ರಿಗಳನ್ನು ದೋಣಿ ವ್ಯವಹಾರವನ್ನು ನಡೆಸಿಕೊಳ್ಳಲು ಬಿಟ್ಟಿದ್ದ ದಿನೇಶ್ ತನ್ನ ಮನೆಯಲ್ಲಿ ಇರಿಸಿಕೊಳ್ಳುವುದಾಗಿ ಹೇಳಿದ್ದರು.
ಅಲ್ಲಿಂದ ಕೆಲವು ಸಾಮಗ್ರಿಗಳನ್ನು ಕಂಚುಗೋಡು ಮಡಿ ನಾಗರಾಜ ಅವರ ಜಾಗದಲ್ಲಿ ಇಟ್ಟು ಪೂಜೆ ಮಾಡಿಸಿದ್ದರು. ಉಳಿದ ಸಾಮಗ್ರಿಗಳು ದಿನೇಶ್ ಮನೆಯಲ್ಲೇ ಇತ್ತು. ಸುಧೀರ್, ಕಂಚುಗೋಡು ಮಡಿಯ ನಾಗರಾಜ ಅವರ ಜಾಗಕ್ಕೆ ಬಂದು ನೋಡಿದಾಗ ಸಾಮಗ್ರಿಗಳು ಇರಲಿಲ್ಲ. ದಿನೇಶ್ ಮನೆಗೆ ಹೋದಾಗ ಅಲ್ಲೂ ಕೆಲವು ಸಾಮಗ್ರಿಗಳು ಇರಲಿಲ್ಲ. ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡಿಲ್ಲ. ದಿನೇಶ್ ಮನೆಯಲ್ಲಿ ಇಟ್ಟಿದ್ದ ಒಟ್ಟು 22,91,000 ರೂ.ಗಳ ಸೊತ್ತುಗಳನ್ನು ದಿನೇಶ್ ಹಾಗೂ ರಾಜು ಸೇರಿ ಯಾರಿಗೋ ಮಾರಾಟ ಮಾಡಿ ವಂಚಿಸಿರುವುದಾಗಿ ಸುಧೀರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Government: ನ್ಯಾಯಾಧೀಶರೂ ಧರ್ಮ ಪಾಲಿಸಲಿ: ಗೃಹ ಸಚಿವ ಡಾ. ಜಿ. ಪರಮೇಶ್ವರ್
Recruitment Of Posts: ನಾಳೆ ಗ್ರಾಮಾ ಆಡಳಿತ ಅಧಿಕಾರಿ ನೇಮಕಕ್ಕೆ ಕನ್ನಡ ಕಡ್ಡಾಯ ಪರೀಕ್ಷೆ
Congress ಪಕ್ಷ ವಿರೋಧಿ ಚಟುವಟಿಕೆ: ಹರಿಯಾಣದಲ್ಲಿ 13 ನಾಯಕರ ಉಚ್ಚಾಟನೆ
Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫಲ ಬಿಡಬಹುದು
MSP; ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಬೆಳೆಗಳಿಗೆ ಕೊಟ್ಟಿದೆ?: ಅಮಿತ್ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.