Udupi: ಕಾರು ಮಾರಾಟದ ಹೆಸರಿನಲ್ಲಿ ವಂಚನೆ
Team Udayavani, Sep 27, 2024, 10:00 PM IST
ಉಡುಪಿ: ಕಾರು ಮಾರಾಟದ ಹೆಸರಿನಲ್ಲಿ ಆನ್ಲೈನ್ ಮೂಲಕ ವ್ಯಕ್ತಿಯೊಬ್ಬರಿಂದ ಸಾವಿರಾರು ರೂ. ಮುಂಗಡ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ.
ಮಂಜುನಾಥ ರೇವಣ್ಕರ್ ಹಾಗೂ ರವಿಚಂದ್ರ ಮಂಜುನಾಥ ರೇವಣ್ಕರ್ ಆರೋಪಿಗಳು. ಪುತ್ತೂರು ಗ್ರಾಮದ ಪದ್ಮಿನಿ ಕೆ. ಅವರು ಆನ್ಲೈನ್ನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಹುಡುಕಾಟ ಮಾಡಿದ್ದು, 2016 ಮಾಡೆಲ್ನ ಕಾರು ಇರುವುದು ತಿಳಿದಿತ್ತು. ಕಾರಿಗೆ ಮುಂಗಡವಾಗಿ ಮಣಿಪಾಲ ಬ್ರಾಂಚ್ನ ಕೆನರಾ ಬ್ಯಾಂಕ್ ಖಾತೆಯಿಂದ 20,000 ರೂ.ನಂತೆ ಒಟ್ಟು 40,000 ರೂ. ಹಣವನ್ನು ಫೋನ್ ಪೇ ಮೂಲಕ ಪಾವತಿಸಿದ್ದರು.
ಒಂದು ವಾರ ಕಳೆದರೂ ಈ ಬಗ್ಗೆ ಸರಿಯಾಗಿ ಪ್ರತಿಕ್ರಿಯೆ ಬಂದಿರಲಿಲ್ಲ. ಕಾರಿನ ಆವಶ್ಯಕತೆ ಇದ್ದು ಬೇರೆ ಕಡೆ ಕಾರು ಖರೀದಿಸುವುದಾಗಿ ತಿಳಿಸಿದ್ದು, ಮುಂಗಡ ಹಣವನ್ನು ನೀಡುವಂತೆ ಹೇಳಲಾಗಿತ್ತು. ಇದಕ್ಕೆ ಒಪ್ಪಿದ್ದ ಅವರು ಆ ಬಳಿಕ ಹಣವನ್ನು ನೀಡದೆ ಕಾರನ್ನೂ ನೀಡದೆ ವಂಚಿಸಿದ್ದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.