MG Motor: ನೂತನ ಇವಿ ಕಾರು ಸಿಯುವಿ ಝಿಎಸ್‌ ವಿಂಡ್ಸರ್‌ ಮಾರುಕಟ್ಟೆಗೆ


Team Udayavani, Sep 27, 2024, 11:35 PM IST

MG Motor: ನೂತನ ಇವಿ ಕಾರು ಸಿಯುವಿ ಝಿಎಸ್‌ ವಿಂಡ್ಸರ್‌ ಮಾರುಕಟ್ಟೆಗೆ

ಮಂಗಳೂರು: ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾದವರ ನೂತನ ಇವಿ ಕಾರು ಸಿಯುವಿ ಝಿಎಸ್‌ ವಿಂಡ್ಸರ್‌ ಅನ್ನು ಶುಕ್ರವಾರ ಮಂಗಳೂರಿನ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಕೂಳೂರಿನಲ್ಲಿರುವ ಶೋರೂಂ ಜುಬಿಲೆಂಟ್‌ ಮೋಟಾರ್ನಲ್ಲಿ ಜರಗಿದ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಮುಖ್ಯ ಅತಿಥಿಯಾಗಿದ್ದು ನೂತನ ಕಾರನ್ನು ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಹೆಸರಾಂತ ಕಾರು ಬ್ರ್ಯಾಂಡ್ ಅಗಿರುವ ಎಂ.ಜಿ.ಗೆ ನೂರಕ್ಕೂ ಅಧಿ ಕ ವರ್ಷಗಳ ಇತಿಹಾಸ ಇದೆ. ಈಗ ವಿಂಡ್ಸರ್‌ ಲಾಂಚ್‌ ಆಗುತ್ತಿರುವುದು ಖುಷಿ ಕೊಟ್ಟಿದೆ. ದೇಶದ ಎರಡನೇ ಸ್ತರದ ನಗರಗಳಲ್ಲಿ ಅತ್ಯಧಿಕ ಚಿನ್ನ, ಕಾರು ಮಾರಾಟವಾಗುವ ನಗರಗಳಲ್ಲಿ ಮಂಗಳೂರು ಎರಡನೇ ಸ್ಥಾನ ಪಡೆದಿದೆ. ಹಾಗಾಗಿ ಹೊಸ ರೀತಿಯ ಕಾರು ಗ್ರಾಹಕರಿಗೆ ಇಷ್ಟವಾಗಲಿದೆ ಎಂದು ಹೇಳಿದರು.

ಸಿಇಒ ಜುಬಿಲೆಂಟ್‌ ಮೋಟಾರ್ಸ್‌ ಸಿಇಒ ಸುನಿಲ್‌ ಪೈ ನೂತನ ಕಾರಿನ ಬಗ್ಗೆ ಮಾಹಿತಿ ನೀಡಿ, ಇಂದು ವಾಹನಗಳಿಂದ ಮಾಲಿನ್ಯ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ವಿಂಡ್ಸರ್‌ ಇವಿ ಕಾರು ಗ್ರಾಹಕರಿಗೆ ಉತ್ತಮ ಅನುಭವ ನೀಡಲಿದೆ. ಕಾರು ಬಿಡುಗಡೆಗೆ ಮೊದಲೇ, ಅದನ್ನು ಕೇವಲ ಅಂತರ್ಜಾಲದಲ್ಲಿ ವೀಕ್ಷಿಸಿ 30ರಷ್ಟು ಮಂದಿ ಬುಕ್‌ ಮಾಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಚಲನಚಿತ್ರ ನಟರಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಪತ್ರಕರ್ತ ವಾಲ್ಟರ್‌ ನಂದಳಿಕೆ, ಕಾರ್ಪೊರೇಟರ್‌ಗಳಾದ ಅನಿಲ್‌ ಕುಮಾರ್‌, ಕದ್ರಿ ಮನೋಹರ ಶೆಟ್ಟಿ, ಜನನಿ ಟೂರ್ ಆ್ಯಂಡ್‌ ಟ್ರಾವೆಲ್ಸ್‌ನ ಮಧುಸೂದನ್‌, ಎಂ.ಜಿ. ದಕ್ಷಿಣ ಮುಖ್ಯಸ್ಥ ಪಾಕ್ಷಲ್‌ ಶಾ, ಎಂ.ಜಿ. ಜುಬಿಲೆಂಟ್‌ ಮೋಟಾರ್ ಉಪಾಧ್ಯಕ್ಷ ವಿಜಯ್‌ ಮಂದಣ್ಣ, ಮಾರಾಟ ಮುಖ್ಯಸ್ಥ ರಾಕೇಶ್‌ ವರ್ಮ ಉಪಸ್ಥಿತರಿದ್ದರು.

ಕಾರಿನ ಮೇಲೆ ಆಫರ್‌ಗಳು
ಮೊದಲ ಮಾಲಕರಿಗೆ ಲೈಫ್‌ಟೈಂ ವಾರಂಟಿ, ಸಿಂಗಲ್‌ ಚಾರ್ಜ್‌ಗೆ 332 ಕಿ.ಮೀ. ದೂರ ಸಂಚಾರ, ಎಂಜಿ ಆ್ಯಪ್‌ ಮೂಲಕ ಒಂದು ವರ್ಷ ಕಾಲ ಉಚಿತ ಚಾರ್ಜಿಂಗ್‌, 3 ವರ್ಷಗಳ ಅಥವಾ 45 ಸಾವಿರ ಕಿ.ಮೀ. ಬಳಿಕ ಅಶ್ಯೂರ್‌x ಶೇ.60 ಬೈಬ್ಯಾಕ್‌.

ವಿಂಡ್ಸರ್‌ ವೈಶಿಷ್ಟ್ಯ
ಈ ಸಿಯುವಿ ಕಾರ್‌ ಏರೋಡೈನಾಮಿಕ್‌ ಫ್ಯೂಚರಿಸ್ಟಿಕ್‌ ಶೈಲಿ ಹೊಂದಿದ್ದು, ವಿಶಾಲವಾದ ಆಂತರಿಕ ಕ್ಯಾಬಿನ್‌, ಆ ಮೂಲಕ ಸುರಕ್ಷೆಯ ಅನುಭವ, ಸ್ಮಾರ್ಟ್‌ ಕನೆಕ್ಟಿವಿಟಿ, ಚಾಲನಾ ಸುವಿಧತೆ, ಏರೋಲಾಂಜ್‌ ಸೀಟ್‌ಗಳನ್ನು 135 ಡಿಗ್ರಿಯಷ್ಟು ವಿಶಾಲವಾಗಿ ಮಡಚಬಹುದು, ಇನ್ಫಿನಿಟಿ ಗ್ಲಾಸ್‌ ರೂಫ್‌, ಗ್ರಾಹಕರ ಮನಸೆಳೆಯುವ ಇನ್ಫೋಟೇನ್‌ಮೆಂಟ್‌, 15.6 ಇಂಚಿನ ಗ್ರ್ಯಾಂಡ್ ವ್ಯೂ ಟಚ್‌ ಡಿಸ್‌ಪ್ಲೇ ಸೆಂಟ್ರಲ್‌ ಕನ್ಸೋಲ್‌ಗ‌ಳನ್ನು ಹೊಂದಿದೆ.

ಎಂಜಿ ವಿಂಡ್ಸರ್‌ ಕಾರು 38 ಕಿ.ವ್ಯಾ. ಲಿಯೋನ್‌ ಬ್ಯಾಟರಿ ಪ್ಯಾಕ್‌ ಹೊಂದಿದ್ದು ಕಾರು ಇಕೊ ಪ್ಲಸ್‌, ಇಕೋ, ನಾರ್ಮಲ್‌,
ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ, ಆ ಮೂಲಕ 332 ಕಿ.ಮೀ. ಸಂಚರಿಸಬಲ್ಲ ಕ್ಷಮತೆ ಪಡೆದಿದೆ.

 

ಟಾಪ್ ನ್ಯೂಸ್

vidhana-Soudha

Chikkamagaluru: ಸೇತುವೆ ನಿರ್ಮಾಣಕ್ಕೆ 1.80 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆ

FKCCI

Digitization: ರಾಜ್ಯದ ಎಲ್ಲ ಎಪಿಎಂಸಿ ಡಿಜಿಟಲೀಕರಣ: ಸಚಿವ ಶಿವಾನಂದ ಪಾಟೀಲ್‌

cOurt

Belagavi: ಮೂರು ವರ್ಷದ ಮಗುವಿನ “ಹತ್ಯಾಚಾರಿ’ಗೆ ಗಲ್ಲು ಶಿಕ್ಷೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Congress-Symbol

Congress: ಪಕ್ಷದ ನಿಲುವಿಗೆ ಭಿನ್ನ ಹೇಳಿಕೆ ನೀಡಿದರೆ ಸಹಿಸುವುದಿಲ್ಲ: ಕೆಪಿಸಿಸಿ

Isrel 2

Israel ಮೇಲೆ ಹೌಥಿ ಉಗ್ರರಿಂದ ಡ್ರೋನ್‌ ದಾಳಿ!

Kodihalli

Electrical system: ಕೃಷಿ ಪಂಪ್‌ಸೆಟ್‌-ಆಧಾರ್‌ ಜೋಡಣೆ ಕೂಡಲೇ ಕೈಬಿಡಲಿ: ಕೋಡಿಹಳ್ಳಿ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gulf Medical University: ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ

Gulf Medical University: ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ

KSRTC: ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಸಮಸ್ಯೆ ಪರಿಹರಿಸಲು ಮನವಿ

KSRTC: ನಿವೃತ್ತ ನೌಕರರ ಹೆಚ್ಚುವರಿ ಪಿಂಚಣಿ ಸಮಸ್ಯೆ ಪರಿಹರಿಸಲು ಮನವಿ

Rain: ದಕ್ಷಿಣ ಕನ್ನಡ, ಉಡುಪಿ: ಮಳೆ ಇಳಿಮುಖ

Rain: ದಕ್ಷಿಣ ಕನ್ನಡ, ಉಡುಪಿ: ಮಳೆ ಇಳಿಮುಖ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

illegal sand mining: ಉಳಿಯ ದ್ವೀಪ ಉಳಿಸಲು ಪಾದಯಾತ್ರೆ

1-mang-1

Mangaluru; ನಗರದ 9 ಅಂತಸ್ತಿನ ಹೊಟೇಲ್ ಕಟ್ಟಡದಲ್ಲಿ ಅಗ್ನಿ ಅವಘಡ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vidhana-Soudha

Chikkamagaluru: ಸೇತುವೆ ನಿರ್ಮಾಣಕ್ಕೆ 1.80 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆ

FKCCI

Digitization: ರಾಜ್ಯದ ಎಲ್ಲ ಎಪಿಎಂಸಿ ಡಿಜಿಟಲೀಕರಣ: ಸಚಿವ ಶಿವಾನಂದ ಪಾಟೀಲ್‌

1-kamindu

Test; ಬ್ರಾಡ್‌ಮನ್‌ ದಾಖಲೆ ಸರಿದೂಗಿಸಿದ ಮೆಂಡಿಸ್‌

cOurt

Belagavi: ಮೂರು ವರ್ಷದ ಮಗುವಿನ “ಹತ್ಯಾಚಾರಿ’ಗೆ ಗಲ್ಲು ಶಿಕ್ಷೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.