Desi Swara: ಅಜ್ಮಾನ್‌- ಅದ್ದೂರಿಯ 10ನೇ ಸಾರ್ವಜನಿಕ ಗಣೇಶೋತ್ಸವ  


Team Udayavani, Sep 28, 2024, 9:35 AM IST

Desi Swara: ಅಜ್ಮಾನ್‌- ಅದ್ದೂರಿಯ 10ನೇ ಸಾರ್ವಜನಿಕ ಗಣೇಶೋತ್ಸವ  

ಯುಎಇ: ಯುಎಇಯ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅದ್ದೂರಿಯಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಸೆ.8ರಂದು ಅಜ್ಮಾನ್‌ನ ಇಂಡಿಯನ್‌ ಅಸೋಸಿಯೇಶನ್‌ ಸಭಾಂಗಣದಲ್ಲಿ ಶಾಸ್ತ್ರೋಕ್ತವಾಗಿ ಆಚರಿಸಿದರು. ಬೆಳಗ್ಗೆ 7 ಗಂಟೆಗೆ ಗಣಹೋಮದಿಂದ ಆರಂಭವಾದ ಕಾರ್ಯಕ್ರಮ, ಮೂರ್ತಿ ಪ್ರತಿಷ್ಠೆ , ಕಲ್ಪೋಕ್ತ ಪೂಜೆಯ ಅನಂತರ ಸುಬ್ರಹ್ಮಣ್ಯ ಹಾಗೂ ವಿಶ್ವೇಶ್ವರ ಅಡಿಗರ ವೇದಮಂತ್ರ ಘೋಷ ಸಭಾಂಗಣಕ್ಕೆ ದೇವಸ್ಥಾನದ ರೂಪು ತಂದು ಕೊಟ್ಟಿತು.

ಗಣೇಶೋತ್ಸವದ ಅಂಗವಾಗಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿ, ಮೊಗವೀರ ಭಜನ ಸಂಘ ದುಬೈ, ಓಂ ಶ್ರೀ ಭಜನ ವೃಂದ ಶಾರ್ಜಾ, ಗುರು ರಾಘವೇಂದ್ರ ಬಳಗ ಯುಎಇ ಮತ್ತು ರಾಮಕ್ಷತ್ರಿಯ ಮಹಿಳಾ ವೃಂದದವರಿಂದ ಭಕ್ತಿಪೂರ್ವಕ ಭಜನೆಗಳು ಹಾಗೂ ಕುಣಿತ ಭಜನೆ ಕಾರ್ಯಕ್ರಮಗಳು ನೆರವೇರಿದವು.

ನವರಾಗಮ್‌ ಮೆಲೋಡೀಸ್‌ ತಂಡದ ವೃತ್ತಿಪರ ಪ್ರಭುದ್ದ ಕಲಾವಿದರ ನೇರ ವಾದ್ಯ ಗೋಷ್ಠಿಯೊಂದಿಗೆ “ಸಂಗೀತ ಭಕ್ತಿ ಗಾನ ಸುಧಾ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಯುಎಇಯ ಪ್ರತಿಭಾನ್ವಿತ ಗಾಯಕರಾದ ರಾಮಚಂದ್ರ ಬೆದ್ರಡ್ಕ, ರವಿರಾಜ್‌ ತಂತ್ರಿ, ಸುಕನ್ಯಾ ಶರತ್‌ ಹಾಗೂ ಸೂರ್ಯ ಕೇಶವ ಅವರು ಭಕ್ತಿಯ ಕಂಪನವನ್ನು ಸೃಷ್ಟಿಸಿದರು.

ಗೋಲ್ಡನ್‌ ಸ್ಟಾರ್‌ ಮ್ಯೂಸಿಕ್‌ ಶಾರ್ಜಾ, ಸಂಸ್ಕೃತಿ ನೃತ್ಯ ಶಾಲೆ ದುಬೈ ಮತ್ತು ವಿದೂಷಿ ರೂಪಕಿರಣ್‌ ತಂಡದಿಂದ ದೇವರ ಹಾಡುಗಳಿಗೆ ಶಾಸ್ತ್ರೀಯ ಹೆಜ್ಜೆಯ ನೃತ್ಯ ಸೇವೆ ನಡೆಯಿತು. ಸರಸ್ವತಿ ವಾದ್ಯ ಸಂಘ ಮತ್ತು ಎಸ್‌.ಟಿ .ಬಿ ಬ್ಯಾಂಡ್‌ ತಂಡದಿಂದ ವಾದ್ಯ ಸೇವೆಯು ಗಣಪನನ್ನು ಪ್ರಸನ್ನಗೊಳಿಸಿತು. ಪುರೋಹಿತರುಗಳಾದ ರಾಜೇಶ್‌ ಪ್ರಸಾದ್‌ ಅಡಿಗ ಮತ್ತು ಲಕ್ಷ್ಮೀಕಾಂತ್‌ ಭಟ್‌ ತಂಡದವರು ವಿಧಿವತ್ತಾಗಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ದಶಮಾನೋತ್ಸವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಕೃಷ್ಣ ಪಾಲೆಮಾರ್‌ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿಶೇಷ ಅತಿಥಿಯಾಗಿ ಆಗಮಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಾಂತಾರದಲ್ಲಿ ಅಭಿನಯಿಸಿದ ದಡ್ಡ ಪ್ರವೀಣ ಖ್ಯಾತಿಯ ರಂಜನ್‌ ಅವರು ನೆರೆದ ಭಕ್ತರ ಮನವನ್ನು ಪುಳಕಿತಗೊಳಿಸಿದರು. ಅತಿಥಿಗಳಾದ ಸ್ಥಳೀಯ ಉದ್ಯಮಿ ಫಾರ್ಚ್‌ಯೂನ್‌ ಗ್ರೂಪ್‌ ಹೊಟೇಲ್‌ನ ಮಾಲಕ ಪ್ರವೀಣ್‌ ಶೆಟ್ಟಿ ವಕ್ವಾಡಿ ಮತ್ತು ACME ಬಿಲ್ಡಿಂಗ್‌ ಮೆಟೀರಿಯಲ್ಸ್‌ ನ ಮಾಲಕರಾದ ಹರೀಶ್‌ ಶೇರಿಗಾರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಅಜಿತ್‌ ಕೊರಕ್ಕೋಡು, ಉಪಾಧ್ಯಕ್ಷರಾದ ಸಂದೀಪ್‌ ರಾವ್‌, ಕಾರ್ಯದರ್ಶಿಗಳಾದ ಮಹೇಶ್‌ ಚಂದ್ರಗಿರಿ, ಕೋಶಾಧಿಕಾರಿ ರಾಜೇಶ್‌ ರಾವ್‌, ಮಹಿಳಾ ವೃಂದದ ಸಂಘಟಕರಾದ ಶಾಲಿನಿ ಹವಾಲ್ದಾರ್‌ಮತ್ತು ಉತ್ಸವ ಸಮಿತಿಯ ಸಂಚಾಲಕರಾದ ಸುಗಂಧ ರಾಜ್‌ ಬೇಕಲ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

1500ಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡಿದ್ದ ಗಣೇಶೋತ್ಸವದ ಭಜನ ಕಾರ್ಯಕ್ರಮಗಳನ್ನು ನಿರೂಪಕ ವಿಘ್ನೇಶ್‌ ಕುಂದಾಪುರ ಹಾಗೂ ಸಭಾ ಕಾರ್ಯಕ್ರಮ ನಿರೂಪಣೆಯನ್ನು ಶ್ರೀನಿವಾಸ್‌ ಕೃಷ್ಣಾಪುರ ನಡೆಸಿಕೊಟ್ಟರೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಆರತಿ ಅಡಿಗ ಅವರು ನಿರ್ವಹಿಸಿದರು. ಸಂಜೆ ಮಹಾ ಮಂಗಳಾರತಿ ಅನಂತರ ವಿವಿಧ ವಾದ್ಯಗಳ ತಾಳಮೇಳಗಳೊಂದಿಗೆ ವಿಜೃಂಭಣೆಯಿಂದ ಗಣೇಶ ಮೂರ್ತಿಯನ್ನು ವಿಸರ್ಜನೆಗೊಳಿಸಿ ಈ ವರ್ಷದ ಗಣೇಶೋತ್ಸವಕ್ಕೆ ಮಂಗಳ ಹಾಡಲಾಯಿತು.

ವರದಿ: ಆರತಿ ಅಡಿಗ, ದುಬೈ

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Iceland Gerua:ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

Iceland Gerua: ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-frrr

Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

04

Kasaragod: ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ

1-aaa

Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.