BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು


Team Udayavani, Sep 28, 2024, 7:44 PM IST

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

ಬೆಂಗಳೂರು: ಕಿಚ್ಚ ಸುದೀಪ್ (‌Kiccha Sudeep)  ಬಿಗ್‌ ಬಾಸ್‌ ಕನ್ನಡ -11 (Bigg Boss Kannada-11) ಸ್ಪರ್ಧಿಗಳ ಪೈಕಿ ಮೊದಲ ಸ್ಪರ್ಧಿಯನ್ನು ರಿವೀಲ್‌ ಮಾಡಲಾಗಿದೆ.

ʼರಾಜಾ ರಾಣಿʼ ಗ್ರ್ಯಾಂಡ್‌ ಪಿನಾಲೆ ವೇಳೆ ಬಿಗ್‌ ಬಾಸ್‌ ಮನೆಗೆ ಹೋಗುವ ಮೊದಲ ಸ್ಪರ್ಧಿಯನ್ನು ರಿವೀಲ್‌ ಮಾಡಿ ವೋಟಿಂಗ್‌ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

ʼಸತ್ಯʼ ಧಾರಾವಾಹಿ ಖ್ಯಾತಿ ಗೌತಮಿ ಜಾಧವ್‌ ಅವರು ಬಿಗ್‌ ಬಾಸ್‌ ಮನೆಯ ಮೊದಲ ಸ್ಪರ್ಧಿ ಆಗಿದ್ದಾರೆ. ಅವರು ಸ್ವರ್ಗಕ್ಕೆ ಹೋಗಲಿದ್ದಾರಾ ಅಥವಾ ನರಕಕ್ಕಾ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

2ನೇ ಸ್ಪರ್ಧಿ ಇವರೇ ನೋಡಿ.. 

ಬಿಗ್‌ ಬಾಸ್‌ ಮನೆಗೆ ಎರಡನೇ ಸ್ಪರ್ಧಿಯಾಗಿ ಲಾಯರ್‌ ಜಗದೀಶ್  ಎಂಟ್ರಿ ಆಗಿದ್ದಾರೆ. ಅವರನ್ನು ಪ್ರೇಕ್ಷಕರು ವೋಟ್‌ ಮಾಡಿ ʼಸ್ವರ್ಗ ಅಥವಾ ನರಕಕ್ಕೆ ಕಳುಹಿಸಬಹುದಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ತನ್ನ ಹೇಳಿಕೆಗಳಿಂದಲೇ ಸುದ್ದಿ ಆಗಿರುವ ಜಗದೀಶ್‌ ಅವರು, ಹಲವು ಪ್ರಕರಣಗಳಲ್ಲಿ ವಕೀಲರಾಗಿದ್ದರು. ಕರ್ನಾಟಕದ ಪ್ರಮುಖ ಸಚಿವರೊಬ್ಬರ ಲೈಂಗಿಕ ಪ್ರಕರಣ, ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸ್ಪೋಟಕ ಮಾಹಿತಿ ಹಂಚಿಕೊಂಡು ಅವರು ಸುದ್ದಿಯಾಗಿದ್ದರು. ಇದಲ್ಲದೆ ಅನೇಕ ದಾಖಲೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಇದಲ್ಲದೆ ವಿವಾದದಿಂದಲೂ ಸುದ್ದಿಯಾಗಿರುವ ಅವರನ್ನು ಜಾತಿ ನಿಂದನೆ ಆರೋಪದಲ್ಲಿ ಬಂಧಿಸಲಾಗಿತ್ತು. ಇತ್ತೀಚೆಗೆ ಮುಖ್ಯ ಪೇದೆಯೊಬ್ಬರ ಜತೆ ವಾಗ್ವಾದ ನಡೆಸಿದ ವಿಡಿಯೋ ವೈರಲ್‌ ಆಗಿದೆ.

ಜಗದೀಶ್‌ ಹೇಳಿದ್ದೇನು..

ಎಲ್ಲೆಲ್ಲಿ ನ್ಯಾಯ ಮರೆಯಾಗುತ್ತದೆ ಅಲ್ಲಿ ನ್ಯಾಯವನ್ನು ಉಳಿಸೋಕೆ ನಾನು ಬಂದೇ ಬರುತ್ತೇನೆ. ನಾನು ಈ ವಕೀಲ ವೃತ್ತಿಯನ್ನು 10-12 ವರ್ಷದಿಂದ ಮಾಡುತ್ತಿದ್ದೇನೆ. ಆ ನ್ಯಾಯವನ್ನು ಯಾರಿಗೆ ಧ್ವನಿ ಇರಲ್ವೋ ಅವರಿಗೆ ಹುಡಕಿಕೊಡುವುದೇ ನನ್ನ ಕೆಲಸ. ಆ ನ್ಯಾಯವನ್ನು ಉಳಿಸೋಕೆ ನಾನು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ ಒಂದು ಸಲಿ ನಾನು ಏನಾದರೂ ಡಿಸೈಡ್‌ ಮಾಡಿದರೆ ನನ್ನ ಮಾತನ್ನು ನಾನೇ ಕೇಳಲ್ಲ. ಕರ್ನಾಟಕದಲ್ಲಿ ನಾನೇ ಎಂದ ರಾಜಕರಣಿಗಳಿಗಿರಬಹದು. ನಾನೇ ಅಂದ ಪೊಲೀಸ್ ಅಧಿಕಾರಿಗಳು ಆಗಿರಬಹುದು ಗೊಂಡಾಗಳು ಆಗಿರಬಹುದು ಅವರನ್ನು ಅವರ ಯೋಗ್ಯತೆಯನ್ನು ತೋರಿಸಿಕೊಟ್ಟಿದ್ದೀನಿ. ದೊಡ್ಡ ಲೈಂಗಿಕ ದೌರ್ಜನ್ಯ ಕೇಸ್.‌ ಆ ಕೇಸ್‌ ನ್ನು ಹ್ಯಾಂಡಲ್‌ ಮಾಡಿದಾಗ ನನಗೆ ಎಲ್ಲ ಹೇಳಿದ್ರು ನೀನು ಇದನ್ನು ಮುಗಿಸುತ್ತೀಯ ಅಂಥ. ಆ ಮಿನಿಸ್ಟರು ನನ್ನಲ್ಲ ನನ್ನಲ್ಲ ಅಂಥ ಮೊದಲು ಹೇಳಿದ್ದ. ಆದರೆ ನಂತ್ರ ನಾನೇ ನಾನೇ ಎಂದ. ನನಗೆ ಗೊತ್ತಿರುವುದು ಈ ದೇಶದ ಸಂವಿಧಾನ, ಕಾನೂನು ಅದನ್ನು ಹೇಗೆ ಪ್ರಹಾರ ಮಾಡಬೇಕು ಬ್ರಹಾಸ್ತ್ರ ಅನ್ನೋದು ನನಗೆ ಗೊತ್ತಿದೆ. ನನ್ನ ಸ್ಟೋರಿ ಜೀರೋಯಿಂದ ಹೀರೋವರೆಗೆ ಹೋಗಿದೆ. ನನ್ನ ಜೀವನ ತುಂಬಾ ಸಿಂಪಲ್‌ ಎಂದು ಜಗದೀಶ್‌ ಪ್ರೋಮೊದಲ್ಲಿ ಹೇಳಿದ್ದಾರೆ.

ನನ್ನ ಬಳಗ ನನ್ನ ಮೊಬೈಲ್.‌ ಹೆಣ್ಣು ಮಕ್ಕಳು ಫ್ರೀಯಾಗಿ ಓಡಾಡಬೇಕು ಯಾರೂ ಕೂಡ ಅವರನ್ನ ರೇಗಿಸಬಾರದು. ಹೆಣ್ಣು ಮಕ್ಕಳೇ ಸ್ಟ್ರಾಂಗ್‌ ಗುರು ಎನ್ನುವುದೇ ನನ್ನ ಕನಸು. ಒಂದು ದಿನ ನಾನು ಸಿಎಂ ಆಗುತ್ತೇನೆ ಎಂದಿದ್ದಾರೆ.

ಟಾಪ್ ನ್ಯೂಸ್

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈರ್‌ ಬ್ರ್ಯಾಂಡ್‌ʼ ಎಂಟ್ರಿ

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

BBK-11: ದಶಕದ ಹಿಂದೆಯೇ ಹಿಂದಿ ಬಿಗ್‌ ಬಾಸ್‌ನಲ್ಲಿತ್ತು ʼಸ್ವರ್ಗ ನರಕʼದ ಕಾನ್ಸೆಪ್ಟ್

BBK-11: ದಶಕದ ಹಿಂದೆಯೇ ಹಿಂದಿ ಬಿಗ್‌ ಬಾಸ್‌ನಲ್ಲಿತ್ತು ʼಸ್ವರ್ಗ ನರಕʼದ ಕಾನ್ಸೆಪ್ಟ್

BBK-11: ನಾನು ಯಾವ ಮನೆಗೂ ಹೋಗ್ತಿಲ್ಲ.. ಬಿಗ್ ಬಾಸ್ ಗೆ ಹೋಗಲ್ಲ ಎಂದ ಕನ್ನಡದ ಖ್ಯಾತ ನಟಿ

BBK-11: ನಾನು ಯಾವ ಮನೆಗೂ ಹೋಗ್ತಿಲ್ಲ.. ಬಿಗ್ ಬಾಸ್ ಗೆ ಹೋಗಲ್ಲ ಎಂದ ಕನ್ನಡದ ಖ್ಯಾತ ನಟಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.