Kinnigoli: ಅಂಗಡಿಗಳಿಂದ ಆದಾಯ ಬಂದರೂ ದುರಸ್ತಿ ಇಲ್ಲ
ಅಪಾಯದಲ್ಲಿ ದಾಮಸ್ಕಟ್ಟೆ ಬಸ್ ತಂಗುದಾಣ
Team Udayavani, Sep 29, 2024, 4:22 PM IST
ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಮಸ್ಕಟ್ಟೆ ಯ ಪೇಟೆಯಲ್ಲಿನ ಬಸ್ ತಂಗುದಾಣ ಕುಸಿದು ಬೀಳುವ ಹಂತದಲ್ಲಿದೆ. ಮೂರು ಕಾವೇರಿಯಿಂದ ಮೂಂಡ್ಕೂರು ಹೋಗುವ ರಾಜ್ಯ ಹೆದ್ದಾರಿಯ ದಾಮಸ್ಕಟ್ಟೆಯಲ್ಲಿನ ಈ ಬಸ್ ತಂಗುದಾಣದಲ್ಲಿ ಎರಡು ಬದಿಯಲ್ಲಿ ಅಂಗಡಿ ಕೋಣೆಗಳಿದ್ದು ಆದಾಯದ ಮೂಲ ವಾಗಿದೆ. ಹಾಗಿದ್ದರೂ ಗ್ರಾ.ಪಂ. ಬಸ್ ತಂಗುದಾಣದ ದುರಸ್ತಿ ಮಾಡಲು ಮುಂದಾಗಿಲ್ಲ. ಬಸ್ ತಂಗುದಾಣದ ಒಂದು ಬದಿಯಲ್ಲಿ ಮಾಡು ಕುಸಿದು ಬೀಳುವ ಹಂತದಲ್ಲಿದೆ. ಪ್ಲಾಸ್ಟಿಕ್ ಹಾಳೆ ಹಾಕಿದ್ದು ಅದರ ಪಕ್ಕಾಸು ರೀಪುಗಳು ಗೆದ್ದಲು ಹಿಡಿದು ಇಂದು, ನಾಳೆ ಬೀಳುವ ಸ್ಥಿತಿಯಲ್ಲಿದೆ.
ಶಾಲಾ ಮಕ್ಕಳು, ನಾಗರಿಕರು ಬಸ್ ತಂಗುದಾಣದಲ್ಲಿ ಆಶ್ರಯ ಪಡೆಯುತ್ತಿದ್ದು ಅಪಾಯ ತಪ್ಪಿದ್ದಲ್ಲ. ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತು ದುರಸ್ತಿ ಮಾಡಬೇಕಾಗಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳೇ ಹೊಣೆಗಾರರು
ಸರಕಾರದ ಹೆಚ್ಚಿನ ಯೋಜನೆಗಳು, ಕಾಮಗಾರಿಗಳು ಸರಿಯಾದ ಮಾರ್ಗದರ್ಶನ ಉಸ್ತುವಾರಿ ಇಲ್ಲದೆ. ಕಳಪೆ ಕಾಮಗಾರಿಯಿಂದ ಹಳ್ಳಹಿಡಿಯುತ್ತಿದೆ. ಅದಕ್ಕೆ ಇದು ಒಂದು ನಿದರ್ಶನವಾಗಿದೆ. ಸ್ಥಳೀಯ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದಕ್ಕೆ ಹೊಣೆಗಾರರು.
-ಸಂತೋಷ್ ಶಾಂತಿಪಲ್ಕೆ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Udupi: ಸ್ಕೂಟರ್ ಮೇಲೆ ವಿದ್ಯುತ್ ತಂತಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು
Malayalam ಚಿತ್ರರಂಗ; ಆ ದೃಶ್ಯಗಳನ್ನು ನೋಡುವಂತೆ ಬಲವಂತ: ನಟಿಯ ಆರೋಪ
Manipal:ಪರ್ಕಳದ ಸಾಮಾನ್ಯ ತಂತ್ರಜ್ಞ ಆರ್. ಮನೋಹರ್ ಅಸಾಮಾನ್ಯ ಸಂಶೋಧಕರಾದ ಕುತೂಹಲಕಾರಿ ಕಥೆ
Kulur ಫ್ಲೈ ಓವರ್ ಕೆಳಗೆ ಅನಧಿಕೃತ ಅಂಗಡಿ, ದುರ್ನಾತ
Belagavi: ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ಸೇರಿ ಮೂವರು ದುರ್ಮರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.